ಚಂದ್ರಚೂಡ್ ಬಗ್ಗೆ ಭಯವೇ?: ಮನೆಯ ಸದಸ್ಯರು ಚಕ್ರವರ್ತಿ ಚಂದ್ರಚೂಡ್ ಅವರನ್ನು ಕಂಡರೆ ಕೊಂಚ ಭಯಗೊಂಡಂತೆ ಗೋಚರಿಸುತ್ತಿತ್ತು. ಬಿಗ್ ಬಾಸ್ ಸ್ಥಗಿತಗೊಂಡಾಗ ಸಂದರ್ಶನಗಳಲ್ಲಿ ಮಾತನಾಡಿದ್ದ ಚಂದ್ರಚೂಡ್, ಇತರರ ವಿರುದ್ಧ ವಿವಾದ ಎನ್ನುವಂತಹ ಹೇಳಿಕೆ ನೀಡಿದ್ದರು. ಮೂರು ಜೋಡಿಗಳಿವೆ ಎಂಬ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಸ್ವತಃ ವೈಷ್ಣವಿ ಅವರು ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಿದ್ದರು. ಹಾಗಾಗಿಯೇ, ಅವರನ್ನು ಎದುರು ಹಾಕಿಕೊಂಡ ಮನೆಯ ಸದಸ್ಯರ ಬೆಂಬಲಕ್ಕೆ ಇತರರು ನಿಲ್ಲುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಎಲ್ಲ ಮುಗಿದ ಮೇಲೆ ನೋವುಂಡ ದಿವ್ಯಾ ಸುರೇಶ್, ಮಂಜು ಪಾವಗಡಗಿಂತಲೂ ಚಂದ್ರಚೂಡ್ ಜೊತೆಯೇ ಅರವಿಂದ್, ದಿವ್ಯಾ ಉರುಡುಗ, ಪ್ರಶಾಂತ್, ಶಮಂತ್ ಮುಂತಾದವರು ಕಾಣಿಸಿಕೊಂಡಿದ್ದು ಈ ಮಾತಿಗೆ ಇಂಬು ನೀಡುತ್ತಿತ್ತು.