ಕಾದು ಕುಳಿತಿದ್ದವರಿಗೆ ಸಿಕ್ಕಿದ್ದು ಟ್ವಿಸ್ಟ್: ಹೌದು, ವಾರಾಂತ್ಯದ ಎರಡೂ ಸಂಚಿಕೆಗಳಲ್ಲಿ ಯಾರು ಸೇಫ್ ಆಗುತ್ತಾರೆ ಮತ್ತು ಯಾರು ಎಲಿಮಿನೇಟ್ ಆಗುತ್ತಾರೆ ಎಂದು ಕಾದು ಕುಳಿತಿದ್ದ ಮನೆಯ ಸದಸ್ಯರಿಗೆ ನಿರೂಪಕ ಕಿಚ್ಚ ಸುದೀಪ್, ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಭಾನುವಾರ ಒಬ್ಬರು ಮನೆಯಿಂದ ಹೊರಹೋಗುತ್ತಿಲ್ಲ. ಬದಲಾಗಿ, ಈ ವಾರದಲ್ಲಿ ಒಬ್ಬರು ಮನೆಯಿಂದ ಹೊರ ಹೋಗುತ್ತಾರೆ. ಅಂದರೆ, ಮುಂದಿನ ಶನಿವಾರ ನಾನು ಇಲ್ಲಿಗೆ ಬರುವ ಹೊತ್ತಿಗೆ ಒಬ್ಬ ಸ್ಪರ್ಧಿ ಮನೆಯಲ್ಲಿ ಇರುವುದಿಲ್ಲ. ಯಾರು ಹೋಗ್ತಾರೆ? ಯಾವಾಗ ಹೋಗ್ತಾರೆ? ಎಂಬುದನ್ನು ಕಾದು ನೋಡಿ. ಆ ಸಮಯ ಯಾವಾಗ ಬೇಕಾದರೂ ಬರಬಹುದು. ಆ ಕಂಟೆಸ್ಟೆಂಟ್ ಕೌಂಟ್ಡೌನ್ ಈಗ ಶುರುವಾಯಿತು ಎಂದು ಹೇಳುವ ಮೂಲಕ ಮನೆಯ ಸದಸ್ಯರಲ್ಲಿ ಕುತೂಹಲ ಹೆಚ್ಚು ಮಾಡಿದ್ದಾರೆ.