ಸುದೀಪ್ಗೆ ಅಚ್ಚರಿ: ಹಿಂದೊಮ್ಮೆ ರಘು ಅವರಿಗೆ ಇದೇ ರೀತಿಯ ಅವಕಾಶ ಕೊಟ್ಟಾಗ ರಘು ಮುಂದುವರಿದು, ಛಲದಿಂದ ಆಡುವ ಮಾತಾಡಿದ್ದರು. ಆದರೆ, ವೈಜಯಂತಿ ವಿಷಯದಲ್ಲಿ ಅದು ಸುಳ್ಳಾಗಿದೆ. ನಿಮ್ಮ ಅಭಿಪ್ರಾಯವನ್ನು ನಾವು ಗೌರವಿಸುತ್ತೇವೆ. ಆದರೆ, ನೀವು ಇಷ್ಟು ಬೇಗ ಹೋಗುತ್ತಿರುವುದರಿಂದ ನಮ್ಮ ತಂಡದ ಶ್ರಮ ವ್ಯರ್ಥವಾದಂತಾಗಿದೆ. ಬೇರೆಯವರ ಅವಕಾಶ ಕಿತ್ತುಕೊಂಡಂತಾಗಿದೆ. ಒಂದು ವಾರ ಕ್ವಾರಂಟೈನ್ ಖರ್ಚು ವೆಚ್ಚವೂ ವ್ಯರ್ಥ ಎಂದು ಹೇಳಿದರು.