<p><strong>ಹುಬ್ಬಳ್ಳಿ</strong>: ಸಿರಿಕನ್ನಡ ವಾಹಿನಿ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಸೊಗಡು ಇರುವ ʼಧಾರವಾಡದಾಗೊಂದು ಲವ್ ಸ್ಟೋರಿʼ ಧಾರಾವಾಹಿ ನಿರ್ಮಿಸಿದ್ದು, ಏ. 19ರಂದು ಸಂಜೆ 7ಕ್ಕೆ ಪ್ರಸಾರವಾಗಲಿದೆ ಎಂದು ನಿರ್ದೇಶಕ ಪ್ರಥ್ವಿರಾಜ್ ಕುಲಕರ್ಣಿ ತಿಳಿಸಿದರು.</p>.<p>ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುಸಾವಿರಮಠ, ಸಿದ್ಧಾರೂಢಮಠ, ನೃತಪತುಂಗ ಬೆಟ್ಟ, ಕಾಮಧೇನು ಗ್ರಾಮ, ಇಟಗಟ್ಟಿ ಗ್ರಾಮದ ವಾಡೆ, ಬೂದನಗುಡ್ಡದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ 35 ಕಂತುಗಳು ಪೂರ್ಣಗೊಂಡಿದ್ದು, ಉಳಿದ 30 ಕಂತುಗಳ ಚಿತ್ರೀಕರಣ ಮೇ 1ರಂದು ಆರಂಭಿಸಲಾಗುವುದು ಎಂದರು.</p>.<p>ತ್ರಿಕೋನ ಪ್ರೇಮಕಥೆ ಇರುವ ಕುಟುಂಬದವರೆಲ್ಲ ಕೂತು ನೋಡುವ ಧಾರಾವಾಹಿ ಇದಾಗಿದೆ. ಗಂಭೀರ ಕಥೆಯಿದ್ದು, ಅಲ್ಲಲ್ಲಿ ತಿಳಿಹಾಸ್ಯವಿದೆ. ಸ್ಥಳೀಯ ಕಲಾವಿದರಿಗೆ ಪ್ರಾಧಾನ್ಯತೆ ನೀಡಿರುವುದರಿಂದ ಭಾಷಾ ಪ್ರಯೋಗ ಉತ್ತಮವಾಗಿ ಮೂಡಿಬಂದಿದೆ ಎಂದು ತಿಳಿಸಿದರು.</p>.<p>ನಾಯಕ ನವೀನ್, ನಾಯಕಿ ರೇಷ್ಮಾ, ಹರ್ಷಿತಾ, ಸಂತೋಷ ಬೆಂಗೇರಿ, ನಂದಿನಿ ಹರೀಶ, ಗಿರಿಜಾ ಹಿರೇಮಠ ಅಭಿನಯಿಸಿದ್ದಾರೆ. ಗಾನಶ್ರೀ ಕೋಟ್ಯಾನ ನಿರ್ಮಾಣದಲ್ಲಿ ಜೀ.ವಿ. ಹಿರೇಮಠ ಸಂಭಾಷಣೆ, ಶಿವು ಛಾಯಾಗ್ರಹಣ ಮಾಡಿದ್ದಾರೆ. ಕೃಷ್ಣಪಂತ್ ಮತ್ತು ರಾಘವೇಂದ್ರ ಪಂತ್ ತಾಂತ್ರಿಕ ಸಹಾಯ ನೀಡಿದ್ದಾರೆ ಎಂದರು.</p>.<p>ಸುನಿಲ ಪತ್ರಿ, ವಿಕ್ರಂ ಕುಮಟ, ಪ್ರಿಯಾ ಕುಲಕರ್ಣಿ, ರಾಜ್ ನೀನಾಸಂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಸಿರಿಕನ್ನಡ ವಾಹಿನಿ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಸೊಗಡು ಇರುವ ʼಧಾರವಾಡದಾಗೊಂದು ಲವ್ ಸ್ಟೋರಿʼ ಧಾರಾವಾಹಿ ನಿರ್ಮಿಸಿದ್ದು, ಏ. 19ರಂದು ಸಂಜೆ 7ಕ್ಕೆ ಪ್ರಸಾರವಾಗಲಿದೆ ಎಂದು ನಿರ್ದೇಶಕ ಪ್ರಥ್ವಿರಾಜ್ ಕುಲಕರ್ಣಿ ತಿಳಿಸಿದರು.</p>.<p>ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುಸಾವಿರಮಠ, ಸಿದ್ಧಾರೂಢಮಠ, ನೃತಪತುಂಗ ಬೆಟ್ಟ, ಕಾಮಧೇನು ಗ್ರಾಮ, ಇಟಗಟ್ಟಿ ಗ್ರಾಮದ ವಾಡೆ, ಬೂದನಗುಡ್ಡದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ 35 ಕಂತುಗಳು ಪೂರ್ಣಗೊಂಡಿದ್ದು, ಉಳಿದ 30 ಕಂತುಗಳ ಚಿತ್ರೀಕರಣ ಮೇ 1ರಂದು ಆರಂಭಿಸಲಾಗುವುದು ಎಂದರು.</p>.<p>ತ್ರಿಕೋನ ಪ್ರೇಮಕಥೆ ಇರುವ ಕುಟುಂಬದವರೆಲ್ಲ ಕೂತು ನೋಡುವ ಧಾರಾವಾಹಿ ಇದಾಗಿದೆ. ಗಂಭೀರ ಕಥೆಯಿದ್ದು, ಅಲ್ಲಲ್ಲಿ ತಿಳಿಹಾಸ್ಯವಿದೆ. ಸ್ಥಳೀಯ ಕಲಾವಿದರಿಗೆ ಪ್ರಾಧಾನ್ಯತೆ ನೀಡಿರುವುದರಿಂದ ಭಾಷಾ ಪ್ರಯೋಗ ಉತ್ತಮವಾಗಿ ಮೂಡಿಬಂದಿದೆ ಎಂದು ತಿಳಿಸಿದರು.</p>.<p>ನಾಯಕ ನವೀನ್, ನಾಯಕಿ ರೇಷ್ಮಾ, ಹರ್ಷಿತಾ, ಸಂತೋಷ ಬೆಂಗೇರಿ, ನಂದಿನಿ ಹರೀಶ, ಗಿರಿಜಾ ಹಿರೇಮಠ ಅಭಿನಯಿಸಿದ್ದಾರೆ. ಗಾನಶ್ರೀ ಕೋಟ್ಯಾನ ನಿರ್ಮಾಣದಲ್ಲಿ ಜೀ.ವಿ. ಹಿರೇಮಠ ಸಂಭಾಷಣೆ, ಶಿವು ಛಾಯಾಗ್ರಹಣ ಮಾಡಿದ್ದಾರೆ. ಕೃಷ್ಣಪಂತ್ ಮತ್ತು ರಾಘವೇಂದ್ರ ಪಂತ್ ತಾಂತ್ರಿಕ ಸಹಾಯ ನೀಡಿದ್ದಾರೆ ಎಂದರು.</p>.<p>ಸುನಿಲ ಪತ್ರಿ, ವಿಕ್ರಂ ಕುಮಟ, ಪ್ರಿಯಾ ಕುಲಕರ್ಣಿ, ರಾಜ್ ನೀನಾಸಂ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>