<p><strong>ಬೆಂಗಳೂರು:</strong> ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ 12ರ ಟ್ರೋಫಿ ಗೆದ್ದ <a href="https://www.prajavani.net/entertainment/tv/bigg-boss-kannada-winner-gilli-actor-new-step-3740915">ಗಿಲ್ಲಿ ನಟನಿಗೆ</a> ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇತ್ತೀಚೆಗೆ ನಟ ಶಿವರಾಜ್ಕುಮಾರ್, ಸುದೀಪ್ ಅವರನ್ನು ಗಿಲ್ಲಿ ಭೇಟಿಯಾಗಿದ್ದರು.</p>.ಬಿಗ್ಬಾಸ್–12ರ ಗೆಲುವಿನ ಸಂಭ್ರಮ: ಶಿವಣ್ಣ, ಕಿಚ್ಚ ಸುದೀಪ್ ಮನೆಗೆ ಗಿಲ್ಲಿ ಭೇಟಿ.<p>ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗಿಲ್ಲಿ ಭೇಟಿಯಾಗಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, ‘12ನೇ ಆವೃತ್ತಿಯ ಬಿಗ್ ಬಾಸ್ ವಿಜೇತ ಗಿಲ್ಲಿ ನಟರಾಜ್ ಅವರನ್ನು ಅಭಿನಂದಿಸಿ, ಮುಂದಿನ ಜೀವನ ಇನ್ನಷ್ಟು ಯಶಸ್ಸು, ಸಂತಸದಿಂದ ಕೂಡಿರಲಿ ಎಂದು ಶುಭ ಹಾರೈಸಿದೆ’ ಎಂದು ಬರೆದುಕೊಂಡಿದ್ದಾರೆ. </p><p>ಭೇಟಿ ವೇಳೆ ಹಾರ ಹಾಕಿ ಗಿಲ್ಲಿ ನಟ ಅವರನ್ನು ಸಿಎಂ ಸನ್ಮಾನಿಸಿದ್ದಾರೆ. </p>.<p>40 ಕೋಟಿಗೂ ಅಧಿಕ ಮತಗಳನ್ನು ಪಡೆದು ರಿಯಾಲಿಟಿ ಶೋ ವಿನ್ನರ್ ಆಗಿರುವ ಗಿಲ್ಲಿ ಅವರಿಗೆ ಹುಟ್ಟೂರು ಮಳವಳ್ಳಿ ತಾಲ್ಲೂಕಿನ ದಡದಪುರದಲ್ಲಿ ಅದ್ಧೂರಿಯಾಗಿ ಸ್ವಾಗತ ದೊರಕಿತ್ತು.</p>.ತವರೂರಿನ ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ‘ಗಿಲ್ಲಿ’.ಗಿಲ್ಲಿ ಗೆದ್ದಾಯ್ತು: ಬಿಗ್ ಬಾಸ್ ವಿಜೇತನ ಊರಲ್ಲಿ ಹಬ್ಬದ ಸಂಭ್ರಮ.<p>ಹಳ್ಳಿಯಿಂದ ಬಂದು ತಮ್ಮ ನಟನೆ, ಹಾಸ್ಯದ ಮೂಲಕ ಅಭಿಮಾನಿಗಳ ಬಳಗವನ್ನೇ ಸೃಷ್ಟಿಸಿಕೊಂಡಿರುವ ಗಿಲ್ಲಿ, ವಿಡಿಯೊ ಮಾಡಿ ಹಂಚಿಕೊಳ್ಳುವ ಮೂಲಕ ಜನತೆಗೆ ಧನ್ಯವಾದ ಹೇಳಿದ್ದಾರೆ.</p>.<p><strong>ಪುನೀತ್ ರಾಜ್ಕುಮಾರ್ ಸಮಾಧಿಗೆ ಗಿಲ್ಲಿ ಭೇಟಿ</strong></p><p>ಗಿಲ್ಲಿ ನಟ ಅವರು ಬಿಗ್ಬಾಸ್ ಟ್ರೋಫಿಯೊಂದಿಗೆ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. </p><p>ಈ ಬಗ್ಗೆ, ‘ನಿಮ್ಮ ಹೆಸರೇ ಶಕ್ತಿ, ನಿಮ್ಮ ನೆನಪೇ ಸ್ಫೂರ್ತಿ. ಬಿಗ್ ಬಾಸ್ ಟ್ರೋಫಿಯನ್ನು ‘ಪರಮಾತ್ಮ’ನ ಪಾದಕ್ಕೆ ಇಟ್ಟ ಗಳಿಗೆ. ಅಪ್ಪು ಸರ್. ಜೊತೆಗಿರದ ಜೀವ ಎಂದಿಗೂ ಜೀವಂತ’ ಎಂದು ಬರೆದುಕೊಂಡು, ಪೋಟೊ ಹಂಚಿಕೊಂಡಿದ್ದಾರೆ.</p>.ನನ್ನ, ಗಿಲ್ಲಿ ನಡುವೆ ಕಾವ್ಯಾ ಬರೋಕಾಗಲ್ಲ: ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ.Interview | ಗಿಲ್ಲಿ ನಡೆದು ಬಂದಿರುವ ಹಾದಿ ಎಂಥವರಿಗಾದರೂ ಸ್ಫೂರ್ತಿ: ಕಾವ್ಯ ಸಂತಸ.ಬಿಗ್ಬಾಸ್ ಕ್ರೇಜ್ ಹೆಚ್ಚಾಗಲು ಗಿಲ್ಲಿ ಒಬ್ಬನೇ ಕಾರಣ ಅನ್ನೋದು ತಪ್ಪು: ರಘು.ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ, ತೋರಿಸಿಕೊಂಡಿದ್ದಾರೆ: ಧ್ರುವಂತ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ 12ರ ಟ್ರೋಫಿ ಗೆದ್ದ <a href="https://www.prajavani.net/entertainment/tv/bigg-boss-kannada-winner-gilli-actor-new-step-3740915">ಗಿಲ್ಲಿ ನಟನಿಗೆ</a> ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇತ್ತೀಚೆಗೆ ನಟ ಶಿವರಾಜ್ಕುಮಾರ್, ಸುದೀಪ್ ಅವರನ್ನು ಗಿಲ್ಲಿ ಭೇಟಿಯಾಗಿದ್ದರು.</p>.ಬಿಗ್ಬಾಸ್–12ರ ಗೆಲುವಿನ ಸಂಭ್ರಮ: ಶಿವಣ್ಣ, ಕಿಚ್ಚ ಸುದೀಪ್ ಮನೆಗೆ ಗಿಲ್ಲಿ ಭೇಟಿ.<p>ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗಿಲ್ಲಿ ಭೇಟಿಯಾಗಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಫೋಟೊಗಳನ್ನು ಹಂಚಿಕೊಂಡಿದ್ದು, ‘12ನೇ ಆವೃತ್ತಿಯ ಬಿಗ್ ಬಾಸ್ ವಿಜೇತ ಗಿಲ್ಲಿ ನಟರಾಜ್ ಅವರನ್ನು ಅಭಿನಂದಿಸಿ, ಮುಂದಿನ ಜೀವನ ಇನ್ನಷ್ಟು ಯಶಸ್ಸು, ಸಂತಸದಿಂದ ಕೂಡಿರಲಿ ಎಂದು ಶುಭ ಹಾರೈಸಿದೆ’ ಎಂದು ಬರೆದುಕೊಂಡಿದ್ದಾರೆ. </p><p>ಭೇಟಿ ವೇಳೆ ಹಾರ ಹಾಕಿ ಗಿಲ್ಲಿ ನಟ ಅವರನ್ನು ಸಿಎಂ ಸನ್ಮಾನಿಸಿದ್ದಾರೆ. </p>.<p>40 ಕೋಟಿಗೂ ಅಧಿಕ ಮತಗಳನ್ನು ಪಡೆದು ರಿಯಾಲಿಟಿ ಶೋ ವಿನ್ನರ್ ಆಗಿರುವ ಗಿಲ್ಲಿ ಅವರಿಗೆ ಹುಟ್ಟೂರು ಮಳವಳ್ಳಿ ತಾಲ್ಲೂಕಿನ ದಡದಪುರದಲ್ಲಿ ಅದ್ಧೂರಿಯಾಗಿ ಸ್ವಾಗತ ದೊರಕಿತ್ತು.</p>.ತವರೂರಿನ ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ‘ಗಿಲ್ಲಿ’.ಗಿಲ್ಲಿ ಗೆದ್ದಾಯ್ತು: ಬಿಗ್ ಬಾಸ್ ವಿಜೇತನ ಊರಲ್ಲಿ ಹಬ್ಬದ ಸಂಭ್ರಮ.<p>ಹಳ್ಳಿಯಿಂದ ಬಂದು ತಮ್ಮ ನಟನೆ, ಹಾಸ್ಯದ ಮೂಲಕ ಅಭಿಮಾನಿಗಳ ಬಳಗವನ್ನೇ ಸೃಷ್ಟಿಸಿಕೊಂಡಿರುವ ಗಿಲ್ಲಿ, ವಿಡಿಯೊ ಮಾಡಿ ಹಂಚಿಕೊಳ್ಳುವ ಮೂಲಕ ಜನತೆಗೆ ಧನ್ಯವಾದ ಹೇಳಿದ್ದಾರೆ.</p>.<p><strong>ಪುನೀತ್ ರಾಜ್ಕುಮಾರ್ ಸಮಾಧಿಗೆ ಗಿಲ್ಲಿ ಭೇಟಿ</strong></p><p>ಗಿಲ್ಲಿ ನಟ ಅವರು ಬಿಗ್ಬಾಸ್ ಟ್ರೋಫಿಯೊಂದಿಗೆ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್ ರಾಜ್ಕುಮಾರ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. </p><p>ಈ ಬಗ್ಗೆ, ‘ನಿಮ್ಮ ಹೆಸರೇ ಶಕ್ತಿ, ನಿಮ್ಮ ನೆನಪೇ ಸ್ಫೂರ್ತಿ. ಬಿಗ್ ಬಾಸ್ ಟ್ರೋಫಿಯನ್ನು ‘ಪರಮಾತ್ಮ’ನ ಪಾದಕ್ಕೆ ಇಟ್ಟ ಗಳಿಗೆ. ಅಪ್ಪು ಸರ್. ಜೊತೆಗಿರದ ಜೀವ ಎಂದಿಗೂ ಜೀವಂತ’ ಎಂದು ಬರೆದುಕೊಂಡು, ಪೋಟೊ ಹಂಚಿಕೊಂಡಿದ್ದಾರೆ.</p>.ನನ್ನ, ಗಿಲ್ಲಿ ನಡುವೆ ಕಾವ್ಯಾ ಬರೋಕಾಗಲ್ಲ: ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ.Interview | ಗಿಲ್ಲಿ ನಡೆದು ಬಂದಿರುವ ಹಾದಿ ಎಂಥವರಿಗಾದರೂ ಸ್ಫೂರ್ತಿ: ಕಾವ್ಯ ಸಂತಸ.ಬಿಗ್ಬಾಸ್ ಕ್ರೇಜ್ ಹೆಚ್ಚಾಗಲು ಗಿಲ್ಲಿ ಒಬ್ಬನೇ ಕಾರಣ ಅನ್ನೋದು ತಪ್ಪು: ರಘು.ಗಿಲ್ಲಿ ನಟ ಬಡವ ಎಂದು ಹೇಳಿಕೊಂಡಿಲ್ಲ, ತೋರಿಸಿಕೊಂಡಿದ್ದಾರೆ: ಧ್ರುವಂತ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>