<p><strong>ಮಳವಳ್ಳಿ/ ಭಾರತೀನಗರ:</strong> ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’-12ನೇ ಆವೃತ್ತಿಯ ವಿಜೇತರಾದ ಗಿಲ್ಲಿ ನಟ (ನಟರಾಜ್) ಅವರು ಸೋಮವಾರ ಹುಟ್ಟೂರು ದಡದಪುರಕ್ಕೆ ತೆರೆದ ವಾಹನದಲ್ಲಿ ಬರುವ ಮಾರ್ಗದುದ್ದಕ್ಕೂ ಅಭಿಮಾನಿಗಳು ಹೂವಿನ ಮಳೆ ಸುರಿಸಿ, ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಂಡರು. </p><p>ಮದ್ದೂರು ಪಟ್ಟಣಕ್ಕೆ ಮಧ್ಯಾಹ್ನ 3 ಗಂಟೆಗೆ ಕಾರಿನಲ್ಲಿ ಬಂದ ಗಿಲ್ಲಿ ನಟನನ್ನು ನೋಡಿ ‘ಮಂಡ್ಯದ ಪ್ರತಿಭೆ, ನಮ್ಮೂರಿನ ಹುಡುಗ’ ಎಂದು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಹರ್ಷೋದ್ಗಾರ ಮಾಡಿದರು. ಬೃಹತ್ ಹೂವಿನ ಹಾರ ಹಾಕಿ ಮಂಡ್ಯ ಜಿಲ್ಲೆಗೆ ಸ್ವಾಗತಿಸಿದರು. </p><p>‘ಬಿಗ್ ಬಾಸ್’ ಶೋನಲ್ಲಿ ಭಾಗಿಯಾಗುವ ಮುನ್ನ ಹಲವು ಖಾಸಗಿ ವಾಹಿನಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಗಿಲ್ಲಿ ನಟ ಅವರು ತಮ್ಮ ಹಾಸ್ಯ ನಟನೆ, ಪಂಚ್ ಡೈಲಾಗ್ಗಳಿಂದ ಜನರ ಗಮನ ಸೆಳೆದು ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡಿದ್ದರು.</p><p>ಭಾರತೀನಗರದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಿಂದ ಮೆಳ್ಳಹಳ್ಳಿಯವರೆಗೆ ಗಿಲ್ಲಿ ನಟನನ್ನು ನೋಡಲು ದಾರಿಯುದ್ದಕ್ಕೂ ಸಾವಿರಾರು ಮಂದಿ ನೆರೆದಿದ್ದರು. ಅಭಿಮಾನಿಗಳತ್ತ ಕೈ ಬೀಸಿ, ಕೈ ಮುಗಿದು ಅಭಿನಂದನೆ ತಿಳಿಸುತ್ತಿದ್ದ ಗಿಲ್ಲಿ ‘ಬಿಗ್ ಬಾಸ್’ ಟ್ರೋಫಿಯೊಂದಿಗೆ ಕಿರುನಗೆ ಬೀರಿದರು.</p>.BBK12: ಬಿಗ್ಬಾಸ್ ವಿಜೇತ ಗಿಲ್ಲಿ ನಟನಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?.ಗಿಲ್ಲಿ ಗೆದ್ದಾಯ್ತು: ಬಿಗ್ ಬಾಸ್ ವಿಜೇತನ ಊರಲ್ಲಿ ಹಬ್ಬದ ಸಂಭ್ರಮ.<p><strong>ಮಳವಳ್ಳಿಗೆ ಅದ್ದೂರಿ ಸ್ವಾಗತ</strong></p><p>ಮಳವಳ್ಳಿ ಪಟ್ಟಣಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು. ನಂತರ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ ಜನರ ನಡುವೆ ಶಕ್ತಿ ದೇವತೆ ದಂಡಿನ ಮಾರಮ್ಮನ ದೇವಸ್ಥಾನಕ್ಕೆ ತೆರಳಿದ ಗಿಲ್ಲಿ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.</p><p>ನಂತರ ತೆರೆದ ವಾಹನದಲ್ಲಿ ‘ಬಿಗ್ ಬಾಸ್’ ಟ್ರೋಫಿಯೊಂದಿಗೆ ಪಟ್ಟಣಕ್ಕೆ ಬಂದ ಗಿಲ್ಲಿ ಅವರನ್ನು ನೋಡಲು ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಮಹಿಳೆಯರು ಮುಗಿಬಿದ್ದರು. ನಿರೀಕ್ಷೆಗೂ ಮೀರಿ ಸೇರಿದ್ದ ಜನಸ್ತೋಮ ಕಂಡ ಗಿಲ್ಲಿ ನಟ ಒಂದು ಕ್ಷಣ ಬೆರಗಾದರು.</p>.<p>ಅನಂತ್ ರಾಂ ವೃತ್ತದ ಬಳಿ ಟ್ರೋಫಿಗೆ ಮುತ್ತಿಕ್ಕಿ ಜನರಿಗೆ ನಮಸ್ಕರಿಸಿ ಕೆಲವು ಡೈಲಾಗ್ ಹೇಳುವ ಮೂಲಕ ಜನರನ್ನು ರಂಜಿಸಿದರು. ಅನಿತಾ ಕಾನ್ವೆಂಟ್ ರಸ್ತೆ, ಸುಲ್ತಾನ್ ರಸ್ತೆ ಮೂಲಕ ಬಂಡೂರು- ದಡದಪುರಕ್ಕೆ ಆಗಮಿಸಿದ ಅವರನ್ನು ಅಕ್ಕಪಕ್ಕದ ಹತ್ತಾರು ಗ್ರಾಮಗಳ ಜನರು ತಮಟೆ, ನಗಾರಿಗಳೊಂದಿಗೆ ಹಾಗೂ ಮಹಿಳೆಯರು ಆರತಿ ಎತ್ತಿ ಬರಮಾಡಿಕೊಂಡರು.</p><p>ಹುಟ್ಟೂರು ದಡದಪುರ ಗ್ರಾಮದಲ್ಲಿ ಗಿಲ್ಲಿ ಮನೆ ಬೀದಿಯಲ್ಲಿ ಮಹಿಳೆಯರು ರಂಗೋಲಿಗಳನ್ನು ಬಿಡಿಸಿ ಸ್ವಾಗತ ಕೋರಿದರು. ಮನೆಯ ಸುತ್ತ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಟ್ಯಾಟೂ ಹಾಕಿಸಿಕೊಂಡ ಚೀರನಹಳ್ಳಿಯ ಕುಮಾರ್ ಅವರನ್ನು ನೋಡಿ ಗಿಲ್ಲಿ ಅವರ ತಾಯಿ ಸಂತಸ ವ್ಯಕ್ತಪಡಿಸಿದರು.</p><p><strong>ಅಭಿಮಾನಿಗಳಿಂದ ಉಚಿತ ದೋಸೆ, ಬಿರಿಯಾನಿ</strong></p><p>ಮದ್ದೂರು ತಾಲ್ಲೂಕಿನ ದೊಡ್ಡಅರಸಿನಕೆರೆ ಗೇಟ್ ಸಮೀಪದ ಹೋಟೆಲ್ನಲ್ಲಿ ಮಾಲೀಕ ಗವಿಗೌಡ ಅವರು ಗಿಲ್ಲಿಯ ಅಭಿಮಾನದ ದ್ಯೋತಕವಾಗಿ ಅಭಿಮಾನಿಗಳಿಗೆ ಉಚಿತವಾಗಿ ದೋಸೆ ಮತ್ತು ಉಪಾಹಾರ ವಿತರಿಸಿದರು. </p><p>ಮಳವಳ್ಳಿಯ ಆರ್.ಆರ್. ಫ್ಯಾಮಿಲಿ ಡಾಬಾದ ರಾಜು ಅವರು ಉಚಿತವಾಗಿ ಬಿರಿಯಾನಿ ಮತ್ತು ಕಾಲ್ ಸೂಪು ನೀಡಿದರು. ತಳಗವಾದಿ ಗ್ರಾಮದ ಜಗ್ಗಿ ಅವರು ಉಚಿತವಾಗಿ ಜನರಿಗೆ ಗೋಬಿ ವಿತರಿಸಿದರು.</p>.<p><strong>ಪೊಲೀಸರ ಹರಸಾಹಸ</strong></p><p>ಗಿಲ್ಲಿ ನಟನನ್ನು ನೋಡಲು ಮೈಸೂರು, ಚಾಮರಾಜನಗರ, ಹನೂರು, ಕೊಳ್ಳೇಗಾಲ, ಬನ್ನೂರು ಸೇರಿದಂತೆ ವಿವಿಧೆಡೆಯಿಂದ ಪೊಲೀಸರ ನಿರೀಕ್ಷೆಗೂ ಮೀರಿದ ಜನರ ದಂಡು ಜಮಾಯಿಸಿತ್ತು. ಮಳವಳ್ಳಿಯ ಗಡಿಭಾಗದಿಂದ ಬಂಡೂರಿನವರೆಗೂ ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಟ್ಟರು.</p><p>ಹೆಚ್ಚುವರಿ ಎಸ್ಪಿ ತಿಮ್ಮಯ್ಯ ಮತ್ತು ಡಿವೈಎಸ್ಪಿ ಯಶವಂತಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಒದಗಿಸಿ, ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡದ್ದು ಜನ ಮೆಚ್ಚುಗೆಗೆ ಪಾತ್ರವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಳವಳ್ಳಿ/ ಭಾರತೀನಗರ:</strong> ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’-12ನೇ ಆವೃತ್ತಿಯ ವಿಜೇತರಾದ ಗಿಲ್ಲಿ ನಟ (ನಟರಾಜ್) ಅವರು ಸೋಮವಾರ ಹುಟ್ಟೂರು ದಡದಪುರಕ್ಕೆ ತೆರೆದ ವಾಹನದಲ್ಲಿ ಬರುವ ಮಾರ್ಗದುದ್ದಕ್ಕೂ ಅಭಿಮಾನಿಗಳು ಹೂವಿನ ಮಳೆ ಸುರಿಸಿ, ಪಟಾಕಿ ಸಿಡಿಸಿ ಸಂಭ್ರಮದಿಂದ ಬರಮಾಡಿಕೊಂಡರು. </p><p>ಮದ್ದೂರು ಪಟ್ಟಣಕ್ಕೆ ಮಧ್ಯಾಹ್ನ 3 ಗಂಟೆಗೆ ಕಾರಿನಲ್ಲಿ ಬಂದ ಗಿಲ್ಲಿ ನಟನನ್ನು ನೋಡಿ ‘ಮಂಡ್ಯದ ಪ್ರತಿಭೆ, ನಮ್ಮೂರಿನ ಹುಡುಗ’ ಎಂದು ಸಾವಿರಾರು ಸಂಖ್ಯೆಯ ಅಭಿಮಾನಿಗಳು ಹರ್ಷೋದ್ಗಾರ ಮಾಡಿದರು. ಬೃಹತ್ ಹೂವಿನ ಹಾರ ಹಾಕಿ ಮಂಡ್ಯ ಜಿಲ್ಲೆಗೆ ಸ್ವಾಗತಿಸಿದರು. </p><p>‘ಬಿಗ್ ಬಾಸ್’ ಶೋನಲ್ಲಿ ಭಾಗಿಯಾಗುವ ಮುನ್ನ ಹಲವು ಖಾಸಗಿ ವಾಹಿನಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಗಿಲ್ಲಿ ನಟ ಅವರು ತಮ್ಮ ಹಾಸ್ಯ ನಟನೆ, ಪಂಚ್ ಡೈಲಾಗ್ಗಳಿಂದ ಜನರ ಗಮನ ಸೆಳೆದು ಅಭಿಮಾನಿಗಳ ಬಳಗ ಸೃಷ್ಟಿಸಿಕೊಂಡಿದ್ದರು.</p><p>ಭಾರತೀನಗರದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಿಂದ ಮೆಳ್ಳಹಳ್ಳಿಯವರೆಗೆ ಗಿಲ್ಲಿ ನಟನನ್ನು ನೋಡಲು ದಾರಿಯುದ್ದಕ್ಕೂ ಸಾವಿರಾರು ಮಂದಿ ನೆರೆದಿದ್ದರು. ಅಭಿಮಾನಿಗಳತ್ತ ಕೈ ಬೀಸಿ, ಕೈ ಮುಗಿದು ಅಭಿನಂದನೆ ತಿಳಿಸುತ್ತಿದ್ದ ಗಿಲ್ಲಿ ‘ಬಿಗ್ ಬಾಸ್’ ಟ್ರೋಫಿಯೊಂದಿಗೆ ಕಿರುನಗೆ ಬೀರಿದರು.</p>.BBK12: ಬಿಗ್ಬಾಸ್ ವಿಜೇತ ಗಿಲ್ಲಿ ನಟನಿಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು?.ಗಿಲ್ಲಿ ಗೆದ್ದಾಯ್ತು: ಬಿಗ್ ಬಾಸ್ ವಿಜೇತನ ಊರಲ್ಲಿ ಹಬ್ಬದ ಸಂಭ್ರಮ.<p><strong>ಮಳವಳ್ಳಿಗೆ ಅದ್ದೂರಿ ಸ್ವಾಗತ</strong></p><p>ಮಳವಳ್ಳಿ ಪಟ್ಟಣಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು. ನಂತರ ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿದ ಜನರ ನಡುವೆ ಶಕ್ತಿ ದೇವತೆ ದಂಡಿನ ಮಾರಮ್ಮನ ದೇವಸ್ಥಾನಕ್ಕೆ ತೆರಳಿದ ಗಿಲ್ಲಿ ಅವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.</p><p>ನಂತರ ತೆರೆದ ವಾಹನದಲ್ಲಿ ‘ಬಿಗ್ ಬಾಸ್’ ಟ್ರೋಫಿಯೊಂದಿಗೆ ಪಟ್ಟಣಕ್ಕೆ ಬಂದ ಗಿಲ್ಲಿ ಅವರನ್ನು ನೋಡಲು ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಮಹಿಳೆಯರು ಮುಗಿಬಿದ್ದರು. ನಿರೀಕ್ಷೆಗೂ ಮೀರಿ ಸೇರಿದ್ದ ಜನಸ್ತೋಮ ಕಂಡ ಗಿಲ್ಲಿ ನಟ ಒಂದು ಕ್ಷಣ ಬೆರಗಾದರು.</p>.<p>ಅನಂತ್ ರಾಂ ವೃತ್ತದ ಬಳಿ ಟ್ರೋಫಿಗೆ ಮುತ್ತಿಕ್ಕಿ ಜನರಿಗೆ ನಮಸ್ಕರಿಸಿ ಕೆಲವು ಡೈಲಾಗ್ ಹೇಳುವ ಮೂಲಕ ಜನರನ್ನು ರಂಜಿಸಿದರು. ಅನಿತಾ ಕಾನ್ವೆಂಟ್ ರಸ್ತೆ, ಸುಲ್ತಾನ್ ರಸ್ತೆ ಮೂಲಕ ಬಂಡೂರು- ದಡದಪುರಕ್ಕೆ ಆಗಮಿಸಿದ ಅವರನ್ನು ಅಕ್ಕಪಕ್ಕದ ಹತ್ತಾರು ಗ್ರಾಮಗಳ ಜನರು ತಮಟೆ, ನಗಾರಿಗಳೊಂದಿಗೆ ಹಾಗೂ ಮಹಿಳೆಯರು ಆರತಿ ಎತ್ತಿ ಬರಮಾಡಿಕೊಂಡರು.</p><p>ಹುಟ್ಟೂರು ದಡದಪುರ ಗ್ರಾಮದಲ್ಲಿ ಗಿಲ್ಲಿ ಮನೆ ಬೀದಿಯಲ್ಲಿ ಮಹಿಳೆಯರು ರಂಗೋಲಿಗಳನ್ನು ಬಿಡಿಸಿ ಸ್ವಾಗತ ಕೋರಿದರು. ಮನೆಯ ಸುತ್ತ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು. ಟ್ಯಾಟೂ ಹಾಕಿಸಿಕೊಂಡ ಚೀರನಹಳ್ಳಿಯ ಕುಮಾರ್ ಅವರನ್ನು ನೋಡಿ ಗಿಲ್ಲಿ ಅವರ ತಾಯಿ ಸಂತಸ ವ್ಯಕ್ತಪಡಿಸಿದರು.</p><p><strong>ಅಭಿಮಾನಿಗಳಿಂದ ಉಚಿತ ದೋಸೆ, ಬಿರಿಯಾನಿ</strong></p><p>ಮದ್ದೂರು ತಾಲ್ಲೂಕಿನ ದೊಡ್ಡಅರಸಿನಕೆರೆ ಗೇಟ್ ಸಮೀಪದ ಹೋಟೆಲ್ನಲ್ಲಿ ಮಾಲೀಕ ಗವಿಗೌಡ ಅವರು ಗಿಲ್ಲಿಯ ಅಭಿಮಾನದ ದ್ಯೋತಕವಾಗಿ ಅಭಿಮಾನಿಗಳಿಗೆ ಉಚಿತವಾಗಿ ದೋಸೆ ಮತ್ತು ಉಪಾಹಾರ ವಿತರಿಸಿದರು. </p><p>ಮಳವಳ್ಳಿಯ ಆರ್.ಆರ್. ಫ್ಯಾಮಿಲಿ ಡಾಬಾದ ರಾಜು ಅವರು ಉಚಿತವಾಗಿ ಬಿರಿಯಾನಿ ಮತ್ತು ಕಾಲ್ ಸೂಪು ನೀಡಿದರು. ತಳಗವಾದಿ ಗ್ರಾಮದ ಜಗ್ಗಿ ಅವರು ಉಚಿತವಾಗಿ ಜನರಿಗೆ ಗೋಬಿ ವಿತರಿಸಿದರು.</p>.<p><strong>ಪೊಲೀಸರ ಹರಸಾಹಸ</strong></p><p>ಗಿಲ್ಲಿ ನಟನನ್ನು ನೋಡಲು ಮೈಸೂರು, ಚಾಮರಾಜನಗರ, ಹನೂರು, ಕೊಳ್ಳೇಗಾಲ, ಬನ್ನೂರು ಸೇರಿದಂತೆ ವಿವಿಧೆಡೆಯಿಂದ ಪೊಲೀಸರ ನಿರೀಕ್ಷೆಗೂ ಮೀರಿದ ಜನರ ದಂಡು ಜಮಾಯಿಸಿತ್ತು. ಮಳವಳ್ಳಿಯ ಗಡಿಭಾಗದಿಂದ ಬಂಡೂರಿನವರೆಗೂ ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಟ್ಟರು.</p><p>ಹೆಚ್ಚುವರಿ ಎಸ್ಪಿ ತಿಮ್ಮಯ್ಯ ಮತ್ತು ಡಿವೈಎಸ್ಪಿ ಯಶವಂತಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಒದಗಿಸಿ, ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡದ್ದು ಜನ ಮೆಚ್ಚುಗೆಗೆ ಪಾತ್ರವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>