<p><strong>ಬೆಂಗಳೂರು: ‘</strong>ಕಮಲಿ’ ಧಾರಾವಾಹಿ ನಿರ್ಮಾಣಕ್ಕೆ ₹ 73 ಲಕ್ಷ ಪಡೆದು ವಂಚಿಸಿದ್ದ ಆರೋಪದಡಿ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.</p>.<p>‘ನಿರ್ಮಾಪಕ ರೋಹಿತ್ ಅವರು ಇತ್ತೀಚೆಗೆ ದೂರು ನೀಡಿದ್ದರು. ವಂಚನೆ (ಐಪಿಸಿ 420) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಅರವಿಂದ್ ಕೌಶಿಕ್ನನ್ನು ಬಂಧಿಸಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು.</p>.<p>‘ಬಂಧಿತ ಅರವಿಂದ್, ಖಾಸಗಿ ವಾಹಿನಿಯೊಂದರಲ್ಲಿ ಮೂಡಿಬರುತ್ತಿರುವ ‘ಕಮಲಿ’ ಧಾರಾವಾಹಿ ನಿರ್ದೇಶಕ. ‘ಹುಲಿರಾಯ’, ‘ನಮ್ಮ ಏರಿಯಾದಲ್ಲಿ ಒಂದು ದಿನ' ಹಾಗೂ 'ಶಾರ್ದುಲಾ' ಸಿನಿಮಾವನ್ನೂ ಅವರು ನಿರ್ದೇಶನ ಮಾಡಿದ್ದರು’ ಎಂದೂ ತಿಳಿಸಿದರು.</p>.<p class="Subhead">2018ರಲ್ಲಿ ಹಣ ಪಡೆದಿದ್ದ ನಿರ್ದೇಶಕ: ‘ಕಮಲಿ’ ಧಾರಾವಾಹಿಗಾಗಿ ಅರವಿಂದ್ ಕಥೆ ಸಿದ್ಧಪಡಿಸಿಕೊಂಡಿದ್ದರು. ಧಾರಾವಾಹಿ ನಿರ್ಮಾಣಕ್ಕೆ ಹಣದ ಅವಶ್ಯಕತೆ ಇತ್ತು. ದೂರುದಾರ ರೋಹಿತ್, 2018ರಲ್ಲಿ ಹಂತ ಹಂತವಾಗಿ ₹ 73 ಲಕ್ಷ ಹೂಡಿಕೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಕಮಲಿ ಧಾರಾವಾಹಿಯಿಂದ ಇದುವರೆಗೂ ₹7 ಕೋಟಿ ಆದಾರ ಬಂದಿರುವ ಮಾಹಿತಿ ಇದೆ. ಆದರೆ, ಆದಾಯದಲ್ಲಿ ನಿರ್ಮಾಪಕ ರೋಹಿತ್ಗೆ ಯಾವುದೇ ಪಾಲು ನೀಡಿರಲಿಲ್ಲ’ ಎಂದೂ ತಿಳಿಸಿದರು.</p>.<p class="Subhead">ಒಪ್ಪಂದದಲ್ಲಿ ನಿರ್ಮಾಪಕರ ಹೆಸರಿಲ್ಲ: ‘ಹಣಕಾಸಿನ ವ್ಯವಹಾರ ಹಾಗೂ ಪ್ರಸಾರದ ಸಂಬಂಧ ಖಾಸಗಿ ವಾಹಿನಿ ಜೊತೆ ಧಾರಾವಾಹಿ ತಂಡ ಒಪ್ಪಂದ ಮಾಡಿಕೊಂಡಿತ್ತು. ಧಾರಾವಾಹಿ ಟೈಟಲ್ ಕಾರ್ಡ್ನಲ್ಲಿ ಇರುತ್ತಿದ್ದ ನಿರ್ಮಾಪಕರ ಹೆಸರು, ಒಪ್ಪಂದದಲ್ಲಿ ಇರಲಿಲ್ಲವೆಂದು ದೂರುದಾರರು ಆರೋಪಿಸಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಖಾಸಗಿ ವಾಹಿನಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಅದೇ ಕಾರಣಕ್ಕೆ ರೋಹಿತ್, ದೂರು ನೀಡಿದ್ದರು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: ‘</strong>ಕಮಲಿ’ ಧಾರಾವಾಹಿ ನಿರ್ಮಾಣಕ್ಕೆ ₹ 73 ಲಕ್ಷ ಪಡೆದು ವಂಚಿಸಿದ್ದ ಆರೋಪದಡಿ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.</p>.<p>‘ನಿರ್ಮಾಪಕ ರೋಹಿತ್ ಅವರು ಇತ್ತೀಚೆಗೆ ದೂರು ನೀಡಿದ್ದರು. ವಂಚನೆ (ಐಪಿಸಿ 420) ಹಾಗೂ ಜೀವ ಬೆದರಿಕೆ (ಐಪಿಸಿ 506) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಅರವಿಂದ್ ಕೌಶಿಕ್ನನ್ನು ಬಂಧಿಸಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸರು ಹೇಳಿದರು.</p>.<p>‘ಬಂಧಿತ ಅರವಿಂದ್, ಖಾಸಗಿ ವಾಹಿನಿಯೊಂದರಲ್ಲಿ ಮೂಡಿಬರುತ್ತಿರುವ ‘ಕಮಲಿ’ ಧಾರಾವಾಹಿ ನಿರ್ದೇಶಕ. ‘ಹುಲಿರಾಯ’, ‘ನಮ್ಮ ಏರಿಯಾದಲ್ಲಿ ಒಂದು ದಿನ' ಹಾಗೂ 'ಶಾರ್ದುಲಾ' ಸಿನಿಮಾವನ್ನೂ ಅವರು ನಿರ್ದೇಶನ ಮಾಡಿದ್ದರು’ ಎಂದೂ ತಿಳಿಸಿದರು.</p>.<p class="Subhead">2018ರಲ್ಲಿ ಹಣ ಪಡೆದಿದ್ದ ನಿರ್ದೇಶಕ: ‘ಕಮಲಿ’ ಧಾರಾವಾಹಿಗಾಗಿ ಅರವಿಂದ್ ಕಥೆ ಸಿದ್ಧಪಡಿಸಿಕೊಂಡಿದ್ದರು. ಧಾರಾವಾಹಿ ನಿರ್ಮಾಣಕ್ಕೆ ಹಣದ ಅವಶ್ಯಕತೆ ಇತ್ತು. ದೂರುದಾರ ರೋಹಿತ್, 2018ರಲ್ಲಿ ಹಂತ ಹಂತವಾಗಿ ₹ 73 ಲಕ್ಷ ಹೂಡಿಕೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಕಮಲಿ ಧಾರಾವಾಹಿಯಿಂದ ಇದುವರೆಗೂ ₹7 ಕೋಟಿ ಆದಾರ ಬಂದಿರುವ ಮಾಹಿತಿ ಇದೆ. ಆದರೆ, ಆದಾಯದಲ್ಲಿ ನಿರ್ಮಾಪಕ ರೋಹಿತ್ಗೆ ಯಾವುದೇ ಪಾಲು ನೀಡಿರಲಿಲ್ಲ’ ಎಂದೂ ತಿಳಿಸಿದರು.</p>.<p class="Subhead">ಒಪ್ಪಂದದಲ್ಲಿ ನಿರ್ಮಾಪಕರ ಹೆಸರಿಲ್ಲ: ‘ಹಣಕಾಸಿನ ವ್ಯವಹಾರ ಹಾಗೂ ಪ್ರಸಾರದ ಸಂಬಂಧ ಖಾಸಗಿ ವಾಹಿನಿ ಜೊತೆ ಧಾರಾವಾಹಿ ತಂಡ ಒಪ್ಪಂದ ಮಾಡಿಕೊಂಡಿತ್ತು. ಧಾರಾವಾಹಿ ಟೈಟಲ್ ಕಾರ್ಡ್ನಲ್ಲಿ ಇರುತ್ತಿದ್ದ ನಿರ್ಮಾಪಕರ ಹೆಸರು, ಒಪ್ಪಂದದಲ್ಲಿ ಇರಲಿಲ್ಲವೆಂದು ದೂರುದಾರರು ಆರೋಪಿಸಿದ್ದರು’ ಎಂದು ಪೊಲೀಸರು ಹೇಳಿದರು.</p>.<p>‘ಖಾಸಗಿ ವಾಹಿನಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಅದೇ ಕಾರಣಕ್ಕೆ ರೋಹಿತ್, ದೂರು ನೀಡಿದ್ದರು’ ಎಂದೂ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>