<p><strong>ಶ್ರೀರಂಗಪಟ್ಟಣ: ಲಾ</strong>ಕ್ಡೌನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ, ಇಲ್ಲಿಗೆ ಸಮೀಪದ ಚಂದ್ರವನ ಅಶ್ರಮದ ಆವರಣದಲ್ಲಿ ಗುರುವಾರದಿಂದ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದೆ.</p>.<p>ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯು ಕೋವಿಡ್ ಕಾರಣದಿಂದ ಸ್ಥಗಿತಗೊಂಡಿತ್ತು. ಚಿತ್ರನಟ ನವೀನ್ ಕೃಷ್ಣ ನಿರ್ದೇಶನದ, ಶ್ರೀನಿವಾಸಗೌಡ ನಿರ್ಮಾಣದ ಈ ಧಾರಾವಾಹಿಯ ಚಿತ್ರೀಕರಣ ಮತ್ತೆ ರಂಭವಾಗಿದ್ದು, ಚಂದ್ರವನದ ಆಸುಪಾಸಿನಲ್ಲಿ ಇನ್ನೂ 4 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ನವೀನ್ಕೃಷ್ಣ ತಿಳಿಸಿದ್ದಾರೆ.</p>.<p>ಕಲಾವಿದರಾದ ಹರುಷ್ ನವೀನ್ಕೃಷ್ಣ, ಅಮೋಘ್, ಹರೀಶ್ರಾಜ್, ಹರ್ಷಲಾ, ನಯನ, ಶ್ರುತಿನಾಯಕ್, ಭರತ್, ಮೋಹನ್, ಆಂಜನಪ್ಪ, ಚರಣ್ ಶೇಖರ್, ಶರತ್ಚಂದ್ರ ಇತರರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.</p>.<p>ಸುಮಿತ್ ಮುಂಬೈ ಮೇಕಪ್ ಮಾಡಿದರು. ಮಹೇಶ್ ಹೆಬ್ಬಾಳು ವಸ್ತ್ರ ವಿನ್ಯಾಸ ಮಾಡಿದರು. ಮಂಜುನಾಥ್, ಕೂಡಲಕುಪ್ಪೆ ಸೋಮಶೇಖರ್, ಉಸ್ತುವಾರಿ ಮ್ಯಾನೇಜರ್ ಲೋಕೇಶ್ ಕಾರ್ಯ ಸ್ಥಳದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ: ಲಾ</strong>ಕ್ಡೌನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ, ಇಲ್ಲಿಗೆ ಸಮೀಪದ ಚಂದ್ರವನ ಅಶ್ರಮದ ಆವರಣದಲ್ಲಿ ಗುರುವಾರದಿಂದ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದೆ.</p>.<p>ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯು ಕೋವಿಡ್ ಕಾರಣದಿಂದ ಸ್ಥಗಿತಗೊಂಡಿತ್ತು. ಚಿತ್ರನಟ ನವೀನ್ ಕೃಷ್ಣ ನಿರ್ದೇಶನದ, ಶ್ರೀನಿವಾಸಗೌಡ ನಿರ್ಮಾಣದ ಈ ಧಾರಾವಾಹಿಯ ಚಿತ್ರೀಕರಣ ಮತ್ತೆ ರಂಭವಾಗಿದ್ದು, ಚಂದ್ರವನದ ಆಸುಪಾಸಿನಲ್ಲಿ ಇನ್ನೂ 4 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ನವೀನ್ಕೃಷ್ಣ ತಿಳಿಸಿದ್ದಾರೆ.</p>.<p>ಕಲಾವಿದರಾದ ಹರುಷ್ ನವೀನ್ಕೃಷ್ಣ, ಅಮೋಘ್, ಹರೀಶ್ರಾಜ್, ಹರ್ಷಲಾ, ನಯನ, ಶ್ರುತಿನಾಯಕ್, ಭರತ್, ಮೋಹನ್, ಆಂಜನಪ್ಪ, ಚರಣ್ ಶೇಖರ್, ಶರತ್ಚಂದ್ರ ಇತರರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.</p>.<p>ಸುಮಿತ್ ಮುಂಬೈ ಮೇಕಪ್ ಮಾಡಿದರು. ಮಹೇಶ್ ಹೆಬ್ಬಾಳು ವಸ್ತ್ರ ವಿನ್ಯಾಸ ಮಾಡಿದರು. ಮಂಜುನಾಥ್, ಕೂಡಲಕುಪ್ಪೆ ಸೋಮಶೇಖರ್, ಉಸ್ತುವಾರಿ ಮ್ಯಾನೇಜರ್ ಲೋಕೇಶ್ ಕಾರ್ಯ ಸ್ಥಳದಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>