ಶ್ರೀರಂಗಪಟ್ಟಣ: ಲಾಕ್ಡೌನ್ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ, ಇಲ್ಲಿಗೆ ಸಮೀಪದ ಚಂದ್ರವನ ಅಶ್ರಮದ ಆವರಣದಲ್ಲಿ ಗುರುವಾರದಿಂದ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯು ಕೋವಿಡ್ ಕಾರಣದಿಂದ ಸ್ಥಗಿತಗೊಂಡಿತ್ತು. ಚಿತ್ರನಟ ನವೀನ್ ಕೃಷ್ಣ ನಿರ್ದೇಶನದ, ಶ್ರೀನಿವಾಸಗೌಡ ನಿರ್ಮಾಣದ ಈ ಧಾರಾವಾಹಿಯ ಚಿತ್ರೀಕರಣ ಮತ್ತೆ ರಂಭವಾಗಿದ್ದು, ಚಂದ್ರವನದ ಆಸುಪಾಸಿನಲ್ಲಿ ಇನ್ನೂ 4 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ನವೀನ್ಕೃಷ್ಣ ತಿಳಿಸಿದ್ದಾರೆ.
ಸುಮಿತ್ ಮುಂಬೈ ಮೇಕಪ್ ಮಾಡಿದರು. ಮಹೇಶ್ ಹೆಬ್ಬಾಳು ವಸ್ತ್ರ ವಿನ್ಯಾಸ ಮಾಡಿದರು. ಮಂಜುನಾಥ್, ಕೂಡಲಕುಪ್ಪೆ ಸೋಮಶೇಖರ್, ಉಸ್ತುವಾರಿ ಮ್ಯಾನೇಜರ್ ಲೋಕೇಶ್ ಕಾರ್ಯ ಸ್ಥಳದಲ್ಲಿದ್ದರು.