ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರವನದಲ್ಲಿ ‘ಯಡಿಯೂರು ಶ್ರೀ ಸಿದ್ದಲಿಂಗೇಶ್ವರ’ ಧಾರಾವಾಹಿ ಚಿತ್ರೀಕರಣ

Last Updated 25 ಜೂನ್ 2021, 2:09 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಲಾಕ್‌ಡೌನ್‌ ಸಡಿಲಗೊಂಡಿರುವ ಹಿನ್ನೆಲೆಯಲ್ಲಿ, ಇಲ್ಲಿಗೆ ಸಮೀಪದ ಚಂದ್ರವನ ಅಶ್ರಮದ ಆವರಣದಲ್ಲಿ ಗುರುವಾರದಿಂದ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯು ಕೋವಿಡ್‌ ಕಾರಣದಿಂದ ಸ್ಥಗಿತಗೊಂಡಿತ್ತು. ಚಿತ್ರನಟ ನವೀನ್‌ ಕೃಷ್ಣ ನಿರ್ದೇಶನದ, ಶ್ರೀನಿವಾಸಗೌಡ ನಿರ್ಮಾಣದ ಈ ಧಾರಾವಾಹಿಯ ಚಿತ್ರೀಕರಣ ಮತ್ತೆ ರಂಭವಾಗಿದ್ದು, ಚಂದ್ರವನದ ಆಸುಪಾಸಿನಲ್ಲಿ ಇನ್ನೂ 4 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ನವೀನ್‌ಕೃಷ್ಣ ತಿಳಿಸಿದ್ದಾರೆ.

ಕಲಾವಿದರಾದ ಹರುಷ್‌ ನವೀನ್‌ಕೃಷ್ಣ, ಅಮೋಘ್‌, ಹರೀಶ್‌ರಾಜ್‌, ಹರ್ಷಲಾ, ನಯನ, ಶ್ರುತಿನಾಯಕ್‌, ಭರತ್‌, ಮೋಹನ್‌, ಆಂಜನಪ್ಪ, ಚರಣ್‌ ಶೇಖರ್‌, ಶರತ್‌ಚಂದ್ರ ಇತರರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಸುಮಿತ್‌ ಮುಂಬೈ ಮೇಕಪ್‌ ಮಾಡಿದರು. ಮಹೇಶ್‌ ಹೆಬ್ಬಾಳು ವಸ್ತ್ರ ವಿನ್ಯಾಸ ಮಾಡಿದರು. ಮಂಜುನಾಥ್‌, ಕೂಡಲಕುಪ್ಪೆ ಸೋಮಶೇಖರ್‌, ಉಸ್ತುವಾರಿ ಮ್ಯಾನೇಜರ್‌ ಲೋಕೇಶ್‌ ಕಾರ್ಯ ಸ್ಥಳದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT