ದುಬಾರೆ ಶಿಬಿರದ ಸಾಕಾನೆಗಳಾದ ‘ಪ್ರಶಾಂತ್’, ‘ಧನಂಜಯ’, ‘ಸುಗ್ರೀವ’ ಮತ್ತು ‘ಲಕ್ಷ್ಮಣ’ ಸಹಾಯದಿಂದ ಮಂಗಳವಾರ ಬೆಳಿಗ್ಗೆ 5 ಗಂಟೆ ಸಮಯದಲ್ಲಿ ಕುಶಾಲನಗರ ವಲಯದ ಮೀನುಕೊಲ್ಲಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳೊಂದಿಗಿದ್ದ ಕುಶನನ್ನು ಬೇರ್ಪಡಿಸಿ, ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸಂಗಾತಿಯಿಂದ ಬಲವಂತವಾಗಿ ಬೇರ್ಪಡಿಸಿ, ಕುಶನನ್ನು ಬಂಧಿಸಲ್ಪಟ್ಟಿದ್ದು, ಇದೀಗ ಕುಶ ಸಂಗಾತಿ ನೆನೆದು ರೋಧಿಸುತ್ತಿದ್ದಾನೆ.