ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರಿನ ನಂತೂರು ವೃತ್ತದಿಂದ ತಲಪಾಡಿವರೆಗೆ 14 ಕಿ.ಮೀ ಅಂತರದಲ್ಲಿ ಔಷಧ ಗಿಡಗಳು, ಕದಂಬ, ಹೊಂಗೆ, ಹೊನ್ನೆ, ಅರ್ಜುನ, ಕೋಕಂ, ಹೊಳೆ ದಾಸವಾಳ ಹೀಗೆ ಸಸ್ಯ ವೈವಿಧ್ಯಗಳು ಕಣ್ಣಿಗೆ ಬೀಳುತ್ತವೆ. ಈ ಹಸಿರು ಖಜಾನೆಗೆ ಕಾರಣೀಕರ್ತರು ಮಾಧವ್ ಉಳ್ಳಾಲ್. ಇದಕ್ಕೆ ಅವರು ‘ಬ್ರಹ್ಮಶ್ರೀ ನಾರಾಯಣಗುರು ಸಾಲು ಮರಗಳು’ ಎಂದು ಹೆಸರಿಸಿದ್ದಾರೆ.