ಹೆಗ್ಗಾರ, ಕಲ್ಲೇಶ್ವರ, ಶೇವ್ಕಾರ, ಗುಳ್ಳಾಪುರ, ಡೋಂಗ್ರಿ ಗ್ರಾಮಗಳ ಜನರು ಈ ನದಿಯ ನೀರನ್ನೇ ಅವಲಂಬಿಸಿದ್ದಾರೆ. ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಅಲ್ಲದೇ ಅಗಸೂರಿನಿಂದ ಕಾರವಾರಕ್ಕೆ ಕುಡಿಯುವ ನೀರನ್ನೂ ಪೂರೈಕೆ ಮಾಡಲಾಗುತ್ತಿದೆ. ಈಗ ನೀರು ಕಡು ಹಸಿರು ಬಣ್ಣಕ್ಕೆ ತಿರುಗಿದೆ. ನೀರಿನ ಮೇಲ್ಭಾಗದಲ್ಲಿ ಹಸಿರು ಪಾಚಿಗಟ್ಟಿದಂಥ ರಚನೆ ಕಂಡುಬರುತ್ತಿದೆ. ಈ ನೀರಿನ ಸೇವನೆ ಜನ ಹಾಗೂ ಜಾನುವಾರಿಗೆ ಮಾರಕವೇ ಎಂದು ಜನರು ಗೊಂದಲದಲ್ಲಿದ್ದಾರೆ.