ಪ್ರಾತಿನಿಧ್ಯ ವಂಚಿತ ವರ್ಗಗಳನ್ನು ಏಕರೀತಿಯಾಗಿ ಕ್ರೋಡೀಕರಿಸಿ ಮೀಸಲಾತಿ ನೀಡಲಾಗಿದೆ. ಆದರೆ, ಪರಿಶಿಷ್ಟರಲ್ಲೇ ಅಸಮಾನತೆಯ ಅನೇಕ ಸ್ತರಗಳಿವೆ. ಆ ಸಮುದಾಯಗಳಲ್ಲೇ ಅತ್ಯಂತ ತಳದಲ್ಲಿರುವ ಅಸ್ಪೃಶ್ಯ ಸಮುದಾಯಗಳು ಅವಕಾಶ ನಿರಾಕರಣೆಯ ತೀವ್ರತೆಯನ್ನು ಅನುಭವಿಸುತ್ತಿವೆ. ಈ ಸಮುದಾಯಗಳಲ್ಲೇ ಇರುವ ಈ ತಾರತಮ್ಯವನ್ನು ಹೋಗಲಾಡಿಸಲು, ಒಳಮೀಸಲಾತಿ ಸೃಷ್ಟಿಸಬೇಕಿದೆ