ಸೋಮವಾರ, 18 ಆಗಸ್ಟ್ 2025
×
ADVERTISEMENT
ಆಳ–ಅಗಲ: ಬೊಜ್ಜು ‘ಭಾರ’
ಆಳ–ಅಗಲ: ಬೊಜ್ಜು ‘ಭಾರ’
ಜಾಗತಿಕ ಮಟ್ಟದಲ್ಲಿ ಬೊಜ್ಜು, ಹೃದಯ ಕಾಯಿಲೆಗಳಲ್ಲಿ ಭಾರತಕ್ಕೆ ಮುಂಚೂಣಿ ಸ್ಥಾನ
ಫಾಲೋ ಮಾಡಿ
Published 26 ಫೆಬ್ರುವರಿ 2025, 19:23 IST
Last Updated 26 ಫೆಬ್ರುವರಿ 2025, 19:23 IST
Comments
ಬೊಜ್ಜು ಈಗ ಜಾಗತಿಕ ಸಮಸ್ಯೆಯಾಗಿದೆ. ಭಾರತದಲ್ಲೂ ಜನಾರೋಗ್ಯಕ್ಕೆ ದೊಡ್ಡ ಕಂಟಕವಾಗಿದೆ. ದೇಶದಲ್ಲಿ ಬೊಜ್ಜಿನ ಸಮಸ್ಯೆ ಮೂರು ಪಟ್ಟು ಹೆಚ್ಚಾಗಿದ್ದು, ಜನರಲ್ಲಿ ಮಧುಮೇಹ, ರಕ್ತದೊತ್ತಡ, ಹೃದ್ರೋಗ ಮುಂತಾದ  ಕಾಯಿಲೆಗಳು ಹೆಚ್ಚುತ್ತಿವೆ. ಬೊಜ್ಜಿನ ಮೂಲ ಆಹಾರ ಪದ್ಧತಿಯಲ್ಲಿದೆ. ಅಧಿಕ ಉಪ್ಪು, ಸಕ್ಕರೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯು ಸ್ಥೂಲಕಾಯಕ್ಕೆ ಕಾರಣವಾಗುವುದಲ್ಲದೆ, ತೀವ್ರಗತಿಯಲ್ಲಿ ಕಾಯಿಲೆಗಳು ಹೆಚ್ಚಾಗಲು ಕಾರಣವಾಗಿದೆ.
ಬೊಜ್ಜಿನಿಂದ ಕಾಯಿಲೆಗಳು
ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ, ಮಿದಳು ರಕ್ತಸ್ರಾವ, ಕೊಬ್ಬಿದ ಯಕೃತ್ತಿನ ಕಾಯಿಲೆ (ಎನ್‌ಎಎಫ್‌ಎಲ್‌ಡಿ), ಸ್ತನ ಕ್ಯಾನ್ಸರ್, ನಿದ್ರಾಹೀನತೆ, ಮೂಳೆ ಸವೆತ, ಕೀಲು ನೋವು
ಪ್ರಸ್ತುತ ಭಾರತದಲ್ಲಿ ತಲಾ ಅಡುಗೆ ಎಣ್ಣೆ ಬಳಕೆಯ ಪ್ರಮಾಣ ವಾರ್ಷಿಕವಾಗಿ 20 ಕೆ.ಜಿ.ಗೂ ಅಧಿಕ ಇದೆ ಎನ್ನಲಾಗಿದೆ. ಐಸಿಎಂಆರ್ ಪ್ರಕಾರ, ತಲಾ ಅಡುಗೆ ಎಣ್ಣೆ ಬಳಕೆ ವಾರ್ಷಿಕ ಮಿತಿ 12 ಕೆ.ಜಿ., ಡಬ್ಲ್ಯುಎಚ್‌ಒ ಪ್ರಕಾರ ತಲಾ 13 ಕೆ.ಜಿ. ಇರಬೇಕು.
ಪ್ರಧಾನಿ ಕರೆಗೆ ಸಿಗುವುದೇ ಸ್ಪಂದನೆ?
ಪ್ರಧಾನಿ ಮೋದಿ ಅವರು ‘ಮನದ ಮಾತು’ ಕಾರ್ಯಕ್ರಮದಲ್ಲಿ ನೀಡಿರುವ ಕರೆಯನ್ನು ವೈದ್ಯರು, ಸೆಲೆಬ್ರಿಟಿಗಳು ಸೇರಿದಂತೆ ವಿವಿಧ ವಲಯಗಳ ಕೆಲವು ಗಣ್ಯರು ಸ್ವಾಗತಿಸಿದ್ದಾರೆ. 2015ರ ಮಾರ್ಚ್‌ನಲ್ಲಿ ಮೋದಿ ಅವರು ‘ಅನುಕೂಲಸ್ಥರು ಎಲ್‌ಪಿಜಿ ಸಬ್ಸಿಡಿ ಬಿಟ್ಟುಕೊಡಿ. ಇದರಿಂದ ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲು ಸಹಾಯವಾಗಲಿದೆ’ ಎಂದು ಕರೆ ನೀಡಿದ್ದರು. ಸುಮಾರು ಒಂದು ಕೋಟಿ ಮಂದಿ ತಮ್ಮ ಎಲ್‌ಪಿಜಿ ಸಬ್ಸಿಡಿ ಬಿಟ್ಟುಕೊಟ್ಟಿದ್ದಾರೆ ಎಂದು ವರದಿಯಾಗಿತ್ತು. ಕೊನೆಗೆ, ಸರ್ಕಾರ ಸದ್ದಿಲ್ಲದೇ ಎಲ್‌ಪಿಜಿ ಸಬ್ಸಿಡಿ ರದ್ದು ಮಾಡಿತ್ತು. ವಿವಿಧ ವಿಷಯಗಳ ಬಗ್ಗೆ ದೇಶದ ಜನರಲ್ಲಿ ಜಾಗೃತಿ ಮೂಡಿಸಲು ಮೋದಿ ಅವರು ‘ಮನದ ಮಾತು’ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದು, ಈ ಹಿಂದೆ ಖಾದಿ ಬಟ್ಟೆ ಬಳಕೆ, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸುವುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದರು.
ದೊಡ್ಡವರಲ್ಲಿ ಮಾತ್ರವಲ್ಲ, ಮಕ್ಕಳಲ್ಲೂ ಸ್ಥೂಲಕಾಯದ ಸಮಸ್ಯೆ ಹೆಚ್ಚುತ್ತಿದೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ ಒಳ್ಳೆಯದಲ್ಲ. ಕುರುಕಲು ತಿಂಡಿಗಳ ಅತಿಯಾದ ಸೇವನೆಯೂ ಮುಖ್ಯ ಕಾರಣ. ಮಕ್ಕಳಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುತ್ತಿದ್ದು, ಟಿ.ವಿ. ವೀಕ್ಷಿಸುತ್ತಾ ಕುರುಕಲು ತಿಂಡಿ ತಿನ್ನುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಮಕ್ಕಳಿಗೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಆದ್ದರಿಂದ ಎಣ್ಣೆಯಲ್ಲಿ ಕರಿದ ತಿನಿಸುಗಳ ಸೇವನೆ ಕಡಿಮೆ ಮಾಡಬೇಕು. ಬಾಲ್ಯಾವಸ್ಥೆಯಲ್ಲಿ ಕಂಡು ಬರುವ ಸ್ಥೂಲಕಾಯವು ಬಹುಬೇಗ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ, ನಿದ್ರಾಹೀನತೆ, ಸಂಧಿವಾತ ಸೇರಿ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು..
–ಡಾ.ಸಂಜಯ್ ಕೆ.ಎಸ್., ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT