ತಮ್ಮ ಮಾತು ಎಲ್ಲರೂ ಕೇಳಬೇಕು ಎನ್ನುವುದು ಅವರ ಬಯಕೆ. ಮಾತು ಕೇಳದಿದ್ದರೆ, ಅಂಥ ದೇಶದ ಮೇಲೆ ಸುಂಕದ ಅಸ್ತ್ರ ಝಳಪಿಸುತ್ತಾರೆ. ದಿಢೀರ್ ಆಗಿ ಸುಂಕದ ಪ್ರಮಾಣವನ್ನು ಹತ್ತಾರು ಪಟ್ಟು ಹೆಚ್ಚಿಸುತ್ತಾರೆ. ನಂತರ ಅದನ್ನು ಇಳಿಸುತ್ತಾರೆ, ತಡೆಯುತ್ತಾರೆ, ಮುಂದೂಡುತ್ತಾರೆ. ಒಮ್ಮೆ ಉಕ್ರೇನ್ ಮೇಲೆ ಕೆಂಡಾಮಂಡಲರಾಗಿ ಕೂಗಾಡುತ್ತಾರೆ. ಮತ್ತೊಮ್ಮೆ ಅನಾಥನನ್ನು ಎಳೆದು ಎದೆಗಪ್ಪಿಕೊಳ್ಳುವಂತೆ ಪ್ರೀತಿ ತೋರುತ್ತಾರೆ. ‘ಮೋದಿ ನನ್ನ ಸ್ನೇಹಿತರು’ ಎನ್ನುತ್ತಾರೆ. ಆದರೆ, ಭಾರತದ ಮೇಲೆ ಸುಂಕದ ಪ್ರಮಾಣವನ್ನು ಏರಿಸುತ್ತಲೇ ಇದ್ದಾರೆ.