ಕ್ಯಾನ್ಸರ್, ಮಧುಮೇಹದಂಥ ಕಾಯಿಲೆ ಹೆಚ್ಚಳಕ್ಕೆ ಪಾಶ್ಚಿಮಾತ್ಯ ಆಹಾರ ಪದ್ಧತಿಯೂ ಕಾರಣ ಎಂದು ಕಳವಳ ವ್ಯಕ್ತಪಡಿಸುವ ಆಹಾರ ತಜ್ಞರು, ಆರೋಗ್ಯ ವೃದ್ಧಿ ಹಾಗೂ ರೋಗಗಳ ನಿಯಂತ್ರಣಕ್ಕೆ ಅಧಿಕ ಪೌಷ್ಟಿಕಾಂಶ ಒಳಗೊಂಡ ರಾಗಿ, ಜೋಳ, ಸಜ್ಜೆ, ನವಣೆ ಸೇರಿದಂತೆ ವಿವಿಧ ಸಿರಿಧಾನ್ಯಗಳನ್ನು ದೈನಂದಿನ ಆಹಾರದಲ್ಲಿ ಬಳಸಬೇಕೆಂದು ಸೂಚಿಸುತ್ತಾರೆ.