<p>ಉಕ್ರೇನ್ನಿಂದ ಜನರನ್ನು ತೆರವು ಮಾಡುತ್ತಿರುವ ವಿಮಾನವೊಂದರ ಒಳಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ತಿ ಹೋಗುತ್ತಿದ್ದಾರೆ ಎನ್ನಲಾದ ವಿಡಿಯೊವೊಂದು ವೈರಲ್ ಆಗಿದೆ. ಯುದ್ಧಪೀಡಿತ ದೇಶದಿಂದ ಭಾರತಕ್ಕೆ ವಾಪಸಾಗಲು ವಿಮಾನ ಹತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಪುಟಿನ್ ಅವರು ಖುದ್ದಾಗಿ ಭೇಟಿ ಮಾಡಿದ್ದಾರೆ ಎಂದು ಈ ವಿಡಿಯೊಗೆ ವಿವರಣೆ ನೀಡಲಾಗಿದೆ. ಭಾರತಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುಟಿನ್ ಅವರು ನೀಡುತ್ತಿರುವ ಗೌರವ ಇದು ಎಂದು ಈ ವಿಡಿಯೊ ಹಂಚಿಕೊಂಡಿರುವವರು ವಿಶ್ಲೇಷಿಸಿದ್ದಾರೆ.</p>.<p>ಈ ವಿಡಿಯೊದಲ್ಲಿ ಇರುವ ವ್ಯಕ್ತಿ ಪುಟಿನ್ ಅಲ್ಲ. ಅವರು ರೊಮೇನಿಯಾದ ಭಾರತ ರಾಯಭಾರಿ ರಾಹುಲ್ ಶ್ರೀವಾತ್ಸವ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಫೆಬ್ರುವರಿ 26ರಂದು ಎಎನ್ಐ ಸುದ್ದಿಸಂಸ್ಥೆ ಈ ವಿಡಿಯೊವನ್ನು ಟ್ವೀಟ್ ಮಾಡಿದೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ಹಗಲು ರಾತ್ರಿ ಶ್ರಮಿಸುತ್ತಿದೆ ಎಂದು ಅವರು ಶ್ರೀವಾತ್ಸವ ಅವರು ಹೇಳಿರುವುದು ವಿಡಿಯೊದಲ್ಲಿ ಉಲ್ಲೇಖವಾಗಿದೆ. ಉಕ್ರೇನ್ನಿಂದ ಸ್ಥಳಾಂತರ ಸಾಧ್ಯವಾಗದ ವಿದ್ಯಾರ್ಥಿಗಳನ್ನು ಕುರಿತೂ ಅವರು ಮಾತನಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಕ್ರೇನ್ನಿಂದ ಜನರನ್ನು ತೆರವು ಮಾಡುತ್ತಿರುವ ವಿಮಾನವೊಂದರ ಒಳಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹತ್ತಿ ಹೋಗುತ್ತಿದ್ದಾರೆ ಎನ್ನಲಾದ ವಿಡಿಯೊವೊಂದು ವೈರಲ್ ಆಗಿದೆ. ಯುದ್ಧಪೀಡಿತ ದೇಶದಿಂದ ಭಾರತಕ್ಕೆ ವಾಪಸಾಗಲು ವಿಮಾನ ಹತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಪುಟಿನ್ ಅವರು ಖುದ್ದಾಗಿ ಭೇಟಿ ಮಾಡಿದ್ದಾರೆ ಎಂದು ಈ ವಿಡಿಯೊಗೆ ವಿವರಣೆ ನೀಡಲಾಗಿದೆ. ಭಾರತಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪುಟಿನ್ ಅವರು ನೀಡುತ್ತಿರುವ ಗೌರವ ಇದು ಎಂದು ಈ ವಿಡಿಯೊ ಹಂಚಿಕೊಂಡಿರುವವರು ವಿಶ್ಲೇಷಿಸಿದ್ದಾರೆ.</p>.<p>ಈ ವಿಡಿಯೊದಲ್ಲಿ ಇರುವ ವ್ಯಕ್ತಿ ಪುಟಿನ್ ಅಲ್ಲ. ಅವರು ರೊಮೇನಿಯಾದ ಭಾರತ ರಾಯಭಾರಿ ರಾಹುಲ್ ಶ್ರೀವಾತ್ಸವ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಫೆಬ್ರುವರಿ 26ರಂದು ಎಎನ್ಐ ಸುದ್ದಿಸಂಸ್ಥೆ ಈ ವಿಡಿಯೊವನ್ನು ಟ್ವೀಟ್ ಮಾಡಿದೆ. ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ಹಗಲು ರಾತ್ರಿ ಶ್ರಮಿಸುತ್ತಿದೆ ಎಂದು ಅವರು ಶ್ರೀವಾತ್ಸವ ಅವರು ಹೇಳಿರುವುದು ವಿಡಿಯೊದಲ್ಲಿ ಉಲ್ಲೇಖವಾಗಿದೆ. ಉಕ್ರೇನ್ನಿಂದ ಸ್ಥಳಾಂತರ ಸಾಧ್ಯವಾಗದ ವಿದ್ಯಾರ್ಥಿಗಳನ್ನು ಕುರಿತೂ ಅವರು ಮಾತನಾಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>