ಸರ್ಕಾರ ಆರಂಭಿಸಿರುವ ಹೊಸ ಯೋಜನೆಯೊಂದು ಚರ್ಚೆಯಾಗುತ್ತಿದೆ. ಈ ಕುರಿತ ಸಂದೇಶವೊಂದರಲ್ಲಿ ತಾವು ಭಾರತೀಯ ರಿಸರ್ವ್ ಬ್ಯಾಂಕ್ನ ಸಿಬ್ಬಂದಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬರು ಯೋಜನೆಯನ್ನು ವಿವರಿಸಿದ್ದಾರೆ. ₹12,500 ಹೂಡಿಕೆ ಮಾಡಿದರೆ, ಹಿಂತಿರುಗಿ ₹4.62 ಕೋಟಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಆನ್ಲೈನ್ ಬ್ಯಾಂಕ್ ಮ್ಯಾನೇಜರ್ ಅವರು ಹೂಡಿಕೆ ಮಾಡಿದವರ ಖಾತೆಗೆ ಹಣ ವರ್ಗಾವಣೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಈ ಪತ್ರದಲ್ಲಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಚಿತ್ರವೂ ಇದೆ.