ಸತ್ಯವನ್ನು ತಿರುಚಿ ಆದಿತ್ಯ ಠಾಕ್ರೆ ಅವರನ್ನು ಲೇವಡಿ ಮಾಡಲಾಗುತ್ತಿದೆ ಎಂದುಆಲ್ಟ್ನ್ಯೂಸ್ಫ್ಯಾಕ್ಟ್ಚೆಕ್ಪ್ರಕಟಿಸಿದೆ. 2019ರಲ್ಲಿ ಚುನಾವಣೆ ಸಂದರ್ಭದಲ್ಲಿ ಪ್ರಚಾರಕ್ಕಾಗಿ ನಮಸ್ತೆ ವರ್ಲಿ ಎಂಬ ಅರ್ಥದ ಹಲವು ಹೋರ್ಡಿಂಗ್ಗಳನ್ನು ಹಾಕಿದ್ದರು.ಈ ಪೋಸ್ಟರ್ ಹಾಕಿದಾಗ ಶಿವಸೇನಾ ಬಿಜೆಪಿಯ ಜತೆಗೇ ಇತ್ತು. ಉರ್ದು, ಕನ್ನಡ, ತೆಲುಗು, ಮರಾಠಿ ಭಾಷೆಗಳಲ್ಲಿ ಈ ಹೋರ್ಡಿಂಗ್ ಹಾಕಲಾಗಿದೆ. ಎಲ್ಲಾ ಭಾಷೆಯ ಹೋರ್ಡಿಂಗ್ನ ಬಣ್ಣ ಹಸಿರೇ ಆಗಿದೆ. ಆದರೆ ಉರ್ದು ಭಾಷೆಯಲ್ಲಿ ಹಾಕಲಾಗಿರುವ ಚಿತ್ರವನ್ನು ಮಾತ್ರ ಆಯ್ಕೆ ಮಾಡಿಕೊಂಡು ಈ ಟ್ವೀಟ್ ಮಾಡಲಾಗಿದೆ. ಆದಿತ್ಯ ಠಾಕ್ರೆ ಅವರು ಮುಸ್ಲಿಮರನ್ನು ಓಲೈಸುತ್ತಿದ್ದಾರೆ ಎಂದು ತೋರಿಸಲು ಯತ್ನಿಸಲಾಗಿದೆ ಎಂದು ಆಲ್ಟ್ನ್ಯೂಸ್ ತನ್ನಫ್ಯಾಕ್ಟ್ಚೆಕ್ನಲ್ಲಿ ವಿವರಿಸಿದೆ.