ರಾಜನ್ ಅವರು ಶ್ರೀಲಂಕಾದ ಆರ್ಥಿಕತೆ ಜೊತೆ ಭಾರತದ ಆರ್ಥಿಕತೆಯನ್ನು ಹೋಲಿಸಿದ್ದಾರೆ ಎಂಬುದು ತಪ್ಪು ಮಾಹಿತಿ ಎಂದು ‘ದಿ ಕ್ವಿಂಟ್’ ಜಾಲತಾಣ ವರದಿ ಮಾಡಿದೆ. ಎಎನ್ಐ ಸುದ್ದಿಸಂಸ್ಥೆಗೆ 2022ರ ಜುಲೈನಲ್ಲಿ ನೀಡಿದ ಸಂದರ್ಶನದಲ್ಲಿ, ಶ್ರೀಲಂಕಾ ಹಾಗೂ ಪಾಕಿಸ್ತಾನದ ಸ್ಥಿತಿಗೂ ಭಾರತದ ಸ್ಥಿತಿಗೂ ಬಹಳ ವ್ಯತ್ಯಾಸವಿದೆ ಎಂದು ರಾಜನ್ ಹೇಳಿದ್ದರು. ‘ಭಾರತದಲ್ಲಿ 500 ಕೋಟಿ ಡಾಲರ್ನಷ್ಟು ವಿದೇಶಿ ಮೀಸಲು ನಿಧಿ ಇದೆ. ವಿದೇಶಿ ವಿನಿಮಯ ಗಳಿಕೆ ಹೆಚ್ಚಿಸಲಾಗುತ್ತಿದೆ. ಆದರೆ ಆ ಎರಡೂ ದೇಶಗಳಲ್ಲಿ ವಿದೇಶಿ ಮೀಸಲು ನಿಧಿ ಬರಿದಾಗಿದೆ. ಭಾರತದ ಪರಿಸ್ಥಿತಿ ಅಷ್ಟೊಂದು ಗಂಭೀರವಾಗಿಲ್ಲ’ ಎಂದು ಹೇಳಿದ್ದರು. ತಾವು ಇಂತಹ ಹೇಳಿಕೆ ನೀಡಿಲ್ಲ ಎಂಬುದಾಗಿ ರಾಜನ್ ಸ್ಪಷ್ಪಪಡಿಸಿದ್ದಾರೆ ಎಂದು ‘ದಿ ಕ್ವಿಂಟ್’ ವರದಿ ಮಾಡಿದೆ.