ಶ್ರೀಲಂಕಾದಿಂದ ಬಂದ ನಿಯೋಗವು ಬುದ್ಧನಿಗೆ ಸಂಬಂಧಿಸಿದ ಪುರಾತನ ವಸ್ತುವೊಂದನ್ನು ತಂದಿದೆಯೇ ವಿನಾ, ಸೀತೆ ಕುಳಿತಿದ್ದ ಕಲ್ಲನ್ನಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ನಿಯೋಗವನ್ನು ಬರಮಾಡಿಕೊಂಡ ಚಿತ್ರವನ್ನು ಕೇಂದ್ರ ಸಂಸ್ಕೃತಿ ಸಚಿವ ಕೃಷ್ಣಾರೆಡ್ಡಿ ಅವರು ಟ್ವಿಟರ್ನಲ್ಲಿ ಪ್ರಕಟಿಸಿದ್ದರು. ‘ ಈ ವಸ್ತುವನ್ನು ಶ್ರೀಲಂಕಾದ ವಾಸ್ಕಡುವ ಶ್ರೀ ಸುಬುದ್ಧಿ ರಾಜವಿಹಾರ ದೇವಸ್ಥಾನದಿಂದ ತರಲಾಗಿದ್ದು, ಕುಶಿನಗರದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ’ ಎಂದು ಪಿಐಬಿ ವರದಿ ಮಾಡಿತ್ತು.