ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ ಚೆಕ್‌: ಶ್ರೀಲಂಕಾದಿಂದ ತಂದಿದ್ದು ಸೀತೆ ಕುಳಿತಿದ್ದ ಕಲ್ಲೇ?

Last Updated 9 ನವೆಂಬರ್ 2021, 19:32 IST
ಅಕ್ಷರ ಗಾತ್ರ

ಉತ್ತರ ಪ್ರದೇಶದ ಕುಶಿನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇತ್ತೀಚೆಗೆ ಉದ್ಘಾಟನೆಯಾಯಿತು. ಶ್ರೀಲಂಕಾ ಏರ್‌ಲೈನ್ಸ್‌ನಲ್ಲಿ ಬಂದಿಳಿದ ಬೌದ್ಧ ಬಿಕ್ಕುಗಳ ನಿಯೋಗವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬರಮಾಡಿಕೊಂಡರು. ‘ಸೀತಾಮಾತೆಯು ಅಶೋಕವನದಲ್ಲಿ ಕುಳಿತಿದ್ದ ಬಂಡೆಯ ಭಾಗವನ್ನು ಬಿಕ್ಕುಗಳ ನಿಯೋಗವು ಕುಶಿನಗರಕ್ಕೆ ತಂದಿದೆ. ಅದನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು’ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಶ್ರೀಲಂಕಾದಿಂದ ಬಂದ ನಿಯೋಗವು ಬುದ್ಧನಿಗೆ ಸಂಬಂಧಿಸಿದ ಪುರಾತನ ವಸ್ತುವೊಂದನ್ನು ತಂದಿದೆಯೇ ವಿನಾ, ಸೀತೆ ಕುಳಿತಿದ್ದ ಕಲ್ಲನ್ನಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ನಿಯೋಗವನ್ನು ಬರಮಾಡಿಕೊಂಡ ಚಿತ್ರವನ್ನು ಕೇಂದ್ರ ಸಂಸ್ಕೃತಿ ಸಚಿವ ಕೃಷ್ಣಾರೆಡ್ಡಿ ಅವರು ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. ‘ ಈ ವಸ್ತುವನ್ನು ಶ್ರೀಲಂಕಾದ ವಾಸ್ಕಡುವ ಶ್ರೀ ಸುಬುದ್ಧಿ ರಾಜವಿಹಾರ ದೇವಸ್ಥಾನದಿಂದ ತರಲಾಗಿದ್ದು, ಕುಶಿನಗರದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುತ್ತದೆ’ ಎಂದು ಪಿಐಬಿ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT