ಶಿವರಾತ್ರಿಯ ತಿಂಡಿ– ತಿನಿಸುಗಳಲ್ಲಿ ‘ಉಪವಾಸದ ಉಪ್ಪು’ ಅಂದರೆ ಸೈಂಧವ ಲವಣ ಬಳಸುವುದು ಕಡ್ಡಾಯ. ಇದನ್ನು ಶುದ್ಧ, ಸಾತ್ವಿಕ ಉಪ್ಪು ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸೈಂಧವ ಲವಣವು ದೇಹದ ನೀರಿನ ಸಮತೋಲನವನ್ನು ಕಾಯುತ್ತದೆ. ಅಷ್ಟೇ ಅಲ್ಲ ಉಪವಾಸದಿಂದ ಆಗಬಹುದಾದ ತಲೆಸುತ್ತು, ದೇಹ ದುರ್ಬಲಗೊಳ್ಳುವುದನ್ನು ತಪ್ಪಿಸಲು ಸಹಾಯಕ ಎನ್ನಲಾಗಿದೆ.