‘ವಿಶ್ವ ಶೌಚಾಲಯ ದಿನಾಚರಣೆ’ ಅಂಗವಾಗಿ ಮೈಸೂರಿನ ನಗರ ಬಸ್ನಿಲ್ದಾಣದಲ್ಲಿ ತೃತೀಯ ಲಿಂಗಿಗಳಿಗೆ ನಿರ್ಮಿಸಿದ ಶೌಚಾಲ ಯವನ್ನು ತೃತೀಯ ಲಿಂಗಿ ಪ್ರಣತಿ ಪ್ರಕಾಶ್ ಉದ್ಘಾಟಿಸಿದರು. ಕೆಎಸ್ಆರ್ಟಿಸಿಯ ಮೈಸೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಮಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಇದ್ದಾರೆ. ಜಿ.ಪಂ. ಕೆಡಿಪಿ ಸಭೆಯಲ್ಲಿ ಪ್ರತ್ಯೇಕ ಶೌಚಾಲಯಬೇಕೆಂದು ತೃತೀಯ ಲಿಂಗಿ ಪ್ರಣತಿ ಪ್ರಕಾಶ್ ಅವರು ಕಳೆದ ತಿಂಗಳು ಮನವಿ ಸಲ್ಲಿಸಿದ್ದರು. ಅವರ ಮನವಿ ಮೇರೆಗೆ ಇದು ಸಿದ್ಧಗೊಂಡಿದ್ದು, ದೇಶದಲ್ಲೇ ಮೊದಲ ಬಾರಿಗೆ ತೃತೀಯ ಲಿಂಗಿಗಳಿಗೆ ಶೌಚಾಲಯ ನಿರ್ಮಿಸಿದಂತಾಗಿದೆ ಪ್ರಜಾವಾಣಿ ಚಿತ್ರ