<p><strong>ಬೆಂಗಳೂರು:</strong> ‘ನಾವು ಒಕ್ಕಲಿಗರು. ಮಣ್ಣಿನ ಮಕ್ಕಳು. ಒಕ್ಕಲಿಗರ ಪ್ರಾಬಲ್ಯ ಇರೋ ಸ್ಥಳದಲ್ಲಿ ನಮಗೇ ಸೀಟು ಕೊಡಬೇಕು ಅಂದ್ರು. ಏಳು ಕೊಟ್ರೆ ಅದರಲ್ಲಿ ಇವರೇ ಮೂರನ್ನು ಮನೆಗೆ ತಗೊಂಡು ಹೋದ್ರು. ಏನಿದೆಲ್ಲಾ...?’</p>.<p>ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೊರಹಾಕಿದ ಆಕ್ರೋಶದ ನುಡಿಗಳಿವು.</p>.<p>ನಗರದ ‘ದಿ ಗ್ರೀನ್ ಪಾಥ್’ ಹೋಟೆಲ್ನಲ್ಲಿ ಬುಧವಾರ ನಡೆದ ಉಪನ್ಯಾಸಕ ಕೆ.ಎಲ್.ಮಂಜು ನಾರಾಯಣ ಮತ್ತು ಕವಯತ್ರಿ ಎಸ್.ಪುಷ್ಪಲತಾ ಅವರ ಮಂತ್ರ ಮಾಂಗಲ್ಯ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.</p>.<p>‘ದೇವೇಗೌಡರ ಕುಟುಂಬದವರು ದೇವರನ್ನು ನೋಡೋಕೆ ಅಂತಾ ಎಲ್ಲೆಲ್ಲೋ ಹೋಗ್ತಾರೆ. ಯಜ್ಞ, ಯಾಗಗಳನ್ನೆಲ್ಲಾ ಮಾಡಿಸ್ತಾರೆ. ಅದಕ್ಕೆಲ್ಲಾ ಹಣ ಸುರೀತಾರೆ. ದೇವರನ್ನೇ ನಂಬಿದ್ದೇವೆ ಅಂತಾರೆ. ಇವರೇನು ದೇವರನ್ನು ಕೊಂಡುಕೊಂಡುಬಿಟ್ಟಿದ್ದಾರಾ, ಅಲ್ಲಾರೀ... ಆ ದೇವರು ಅನ್ಯಾಯ ಮಾಡೋರಿಗೆ ನ್ಯಾಯ ಮಾಡ್ತಿದ್ದಾನಲ್ರೀ, ಅದೆಂತಹ ದೇವರು ಅವನು’ ಎಂದು ಪ್ರಶ್ನಿಸಿದರು.</p>.<p>‘ದೇವೇಗೌಡರ ಕುಟುಂಬದವರು ತಮ್ಮದೇ ಚಕ್ರಾಧಿಪತ್ಯ ಮಾಡಿಕೊಂಡು ದೇಶವನ್ನು ಹಂಚಿಕೊಂಡು ಬಿಟ್ಟಿದ್ದಾರೆ. ಇವೆಲ್ಲಾ ತಪ್ಪು ದಾರಿಗಳು. ಆ ದೇವರಿಗಾದ್ರೋ ಒಂದ್ ಸ್ವಲ್ಪ ವಿಚಾರ ಬೇಡವಾ, ಇವರಿಗೆ ಏನೂ ಮಾಡ್ತಾ ಇಲ್ಲ. ಇವರು ಮಾಡಿದ್ದನ್ನು ಒಪ್ಪಿಕೊಂಡು ಹೋಗ್ತಾ ಇದ್ದಾನೆ. ಪ್ರಜ್ಞಾವಂತರಾದ ನಾವೆಲ್ಲಾ ಈ ಸಂಗತಿ ಬಗ್ಗೆ ವಿಚಾರ ಮಾಡಬೇಕಿದೆ’ ಎಂದು ಹೇಳಿದರು.</p>.<p>‘ಜಾತೀಯತೆ ಬೆಳೆಸತಕ್ಕಂತಹ ಕೆಲಸವನ್ನು ಯಾರೇ ಮಾಡುತ್ತಿರಲಿ ಅದನ್ನು ಖಂಡಿಸಬೇಕು. ರಾಜಕೀಯ ಮಾಡು<br />ವವರಿಗೆ ವೋಟಿಗಾಗಿ ಜಾತಿ ಬೇಕಾಗಿದೆ. ಇದು ಅಪಾಯಕಾರಿ. ನಾವು ಜಾತಿ ಮೀರಿ ನಡೆಯಬೇಕು. ಪ್ರೀತಿಯೇ ಯೋಗ್ಯತೆ ಆಗಬೇಕು. ಜಾತಿ ಎಂಬುದು ರಾಜಕೀಯದಲ್ಲಿ ಸೇರಿ ಕುಲಗೆಟ್ಟು ಹೋಗಿದೆ’ ಎಂದು ಹೇಳಿದರು.</p>.<p>ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸಾಹಿತಿ ಬಂಜಗೆರೆ ಜಯಪ್ರಕಾಶ್, ವಕೀಲ ಕೆ.ಬಿ.ಕೆ.ಸ್ವಾಮಿ, ಚಿತ್ರ ನಿರ್ದೇಶಕ ಬಿ.ಸುರೇಶ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ನಾವು ಒಕ್ಕಲಿಗರು. ಮಣ್ಣಿನ ಮಕ್ಕಳು. ಒಕ್ಕಲಿಗರ ಪ್ರಾಬಲ್ಯ ಇರೋ ಸ್ಥಳದಲ್ಲಿ ನಮಗೇ ಸೀಟು ಕೊಡಬೇಕು ಅಂದ್ರು. ಏಳು ಕೊಟ್ರೆ ಅದರಲ್ಲಿ ಇವರೇ ಮೂರನ್ನು ಮನೆಗೆ ತಗೊಂಡು ಹೋದ್ರು. ಏನಿದೆಲ್ಲಾ...?’</p>.<p>ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೊರಹಾಕಿದ ಆಕ್ರೋಶದ ನುಡಿಗಳಿವು.</p>.<p>ನಗರದ ‘ದಿ ಗ್ರೀನ್ ಪಾಥ್’ ಹೋಟೆಲ್ನಲ್ಲಿ ಬುಧವಾರ ನಡೆದ ಉಪನ್ಯಾಸಕ ಕೆ.ಎಲ್.ಮಂಜು ನಾರಾಯಣ ಮತ್ತು ಕವಯತ್ರಿ ಎಸ್.ಪುಷ್ಪಲತಾ ಅವರ ಮಂತ್ರ ಮಾಂಗಲ್ಯ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.</p>.<p>‘ದೇವೇಗೌಡರ ಕುಟುಂಬದವರು ದೇವರನ್ನು ನೋಡೋಕೆ ಅಂತಾ ಎಲ್ಲೆಲ್ಲೋ ಹೋಗ್ತಾರೆ. ಯಜ್ಞ, ಯಾಗಗಳನ್ನೆಲ್ಲಾ ಮಾಡಿಸ್ತಾರೆ. ಅದಕ್ಕೆಲ್ಲಾ ಹಣ ಸುರೀತಾರೆ. ದೇವರನ್ನೇ ನಂಬಿದ್ದೇವೆ ಅಂತಾರೆ. ಇವರೇನು ದೇವರನ್ನು ಕೊಂಡುಕೊಂಡುಬಿಟ್ಟಿದ್ದಾರಾ, ಅಲ್ಲಾರೀ... ಆ ದೇವರು ಅನ್ಯಾಯ ಮಾಡೋರಿಗೆ ನ್ಯಾಯ ಮಾಡ್ತಿದ್ದಾನಲ್ರೀ, ಅದೆಂತಹ ದೇವರು ಅವನು’ ಎಂದು ಪ್ರಶ್ನಿಸಿದರು.</p>.<p>‘ದೇವೇಗೌಡರ ಕುಟುಂಬದವರು ತಮ್ಮದೇ ಚಕ್ರಾಧಿಪತ್ಯ ಮಾಡಿಕೊಂಡು ದೇಶವನ್ನು ಹಂಚಿಕೊಂಡು ಬಿಟ್ಟಿದ್ದಾರೆ. ಇವೆಲ್ಲಾ ತಪ್ಪು ದಾರಿಗಳು. ಆ ದೇವರಿಗಾದ್ರೋ ಒಂದ್ ಸ್ವಲ್ಪ ವಿಚಾರ ಬೇಡವಾ, ಇವರಿಗೆ ಏನೂ ಮಾಡ್ತಾ ಇಲ್ಲ. ಇವರು ಮಾಡಿದ್ದನ್ನು ಒಪ್ಪಿಕೊಂಡು ಹೋಗ್ತಾ ಇದ್ದಾನೆ. ಪ್ರಜ್ಞಾವಂತರಾದ ನಾವೆಲ್ಲಾ ಈ ಸಂಗತಿ ಬಗ್ಗೆ ವಿಚಾರ ಮಾಡಬೇಕಿದೆ’ ಎಂದು ಹೇಳಿದರು.</p>.<p>‘ಜಾತೀಯತೆ ಬೆಳೆಸತಕ್ಕಂತಹ ಕೆಲಸವನ್ನು ಯಾರೇ ಮಾಡುತ್ತಿರಲಿ ಅದನ್ನು ಖಂಡಿಸಬೇಕು. ರಾಜಕೀಯ ಮಾಡು<br />ವವರಿಗೆ ವೋಟಿಗಾಗಿ ಜಾತಿ ಬೇಕಾಗಿದೆ. ಇದು ಅಪಾಯಕಾರಿ. ನಾವು ಜಾತಿ ಮೀರಿ ನಡೆಯಬೇಕು. ಪ್ರೀತಿಯೇ ಯೋಗ್ಯತೆ ಆಗಬೇಕು. ಜಾತಿ ಎಂಬುದು ರಾಜಕೀಯದಲ್ಲಿ ಸೇರಿ ಕುಲಗೆಟ್ಟು ಹೋಗಿದೆ’ ಎಂದು ಹೇಳಿದರು.</p>.<p>ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸಾಹಿತಿ ಬಂಜಗೆರೆ ಜಯಪ್ರಕಾಶ್, ವಕೀಲ ಕೆ.ಬಿ.ಕೆ.ಸ್ವಾಮಿ, ಚಿತ್ರ ನಿರ್ದೇಶಕ ಬಿ.ಸುರೇಶ್ ಮಾತನಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>