<p>ಸರಳಾ, ಒಬ್ಬ ಗೃಹಿಣಿ; ಎರಡು ಮಕ್ಕಳ ತಾಯಿ. ಪದೇ ಪದೇ ಮೂತ್ರ ಸೋಂಕಿಗೆ ಒಳಗಾಗುವ ಸರಳಾ, ಮೂತ್ರಸೋಂಕಿನ ಲಕ್ಷಣ ಕಂಡ ತಕ್ಷಣವೇ ವೈದ್ಯರು ಕೊಟ್ಟ ಎರಡು ಗುಳಿಗೆಗಳನ್ನು ನುಂಗಿ, ಸೋಂಕು ಕಡಿಮೆಯಾದ ತಕ್ಷಣವೇ ಮಾತ್ರೆಯನ್ನು ನಿಲ್ಲಿಸಿಬಿಡುತ್ತಿದ್ದಳು. ಆದರೆ ಈ ಬಾರಿ ಮಾತ್ರೆ ತೆಗೆದುಕೊಂಡರೂ ಸೋಂಕು ಕಡಿಮೆಯಾಗಲಿಲ್ಲ. ಹತ್ತಿರದ ವೈದ್ಯರಲ್ಲಿ ಮೂತ್ರ ಪರೀಕ್ಷೆ ಮಾಡಿಸಿದಾಗ ‘ಇ-ಕೊಲಿ’ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗಿರುವ ಸೋಂಕು ಎಂದು ತಿಳಿಯಿತು. ಯಾವ ಮಾತ್ರೆಗಳಿಗೂ ತಗ್ಗದ ಸೋಂಕಿಗೆ ಕೊನೆಗೂ ಇಂಜೆಕ್ಷನ್ನಿನ ಮೊರೆ ಹೋಗಬೇಕಾಯಿತು.</p><p>ಪ್ರತಿ ವರ್ಷ ನವೆಂಬರ್ ತಿಂಗಳ ಮೂರನೇ ವಾರವನ್ನು ‘ವಿಶ್ವ ಆ್ಯಂಟಿಮೈಕ್ರೋಬಿಯಲ್ ಪ್ರತಿರೋಧ’ದ ವಾರವಾಗಿ ಆಚರಿಸಲಾಗುತ್ತದೆ.</p><p><strong>ಆ್ಯಂಟಿಮೈಕ್ರೋಬಿಯಲ್ ಪ್ರತಿರೋಧವೆಂದರೇನು?</strong></p><p>‘ಆ್ಯಂಟಿಮೈಕ್ರೋಬಿಯಲ್’ ಎಂದರೆ ರೋಗಾಣುಗಳಾದ ಬ್ಯಾಕ್ಟಿರೀಯಾ, ವೈರಸ್, ಫಂಗಸ್, ಪ್ಯಾರಾಸೈಟ್ಗಳ ವಿರುದ್ಧ ಹೋರಾಡುವ ಅಥವಾ ಕೊಲ್ಲುವ ಔಷಧಗಳು. ಎಂದರೆ ನಾವು ಬಳಸುವ ಆ್ಯಂಟಿಬಯಾಟಿಕ್ಸ್, ಆ್ಯಂಟಿಫಂಗಲ್, ಆ್ಯಂಟಿವೈರಲ್ ಔಷಧಗಳು. ಆ್ಯಂಟಿಮೈಕ್ರೋಬಿಯಲ್ ಪ್ರತಿರೋಧವೆಂದರೆ – ರೋಗಾಣುಜೀವಿಗಳು ಔಷಧಗಳಿಗೆ ಪ್ರತಿರೋಧವನ್ನು ತೋರುವುದು. ಎಂದರೆ- ಔಷಧಗಳು ಕೆಲಸ ಮಾಡದೇ ಹೋಗುವುದು, ರೋಗಾಣುಗಳು ಸಾಯದೇ ಹೋಗುವುದು ಅಥವಾ ನಿಯಂತ್ರಣಕ್ಕೆ ಬಾರದೇ ಇರುವುದು.</p><p>ಉದಾಹರಣೆಗೆ ಹೇಳುವುದಾದರೆ, ಸುಲಭವಾಗಿ ಗುಣವಾಗುತ್ತಿದ್ದ ಸಾಮಾನ್ಯ ಸೋಂಕುಗಳು ಗುಣವಾಗದೇ ಇರುವುದು. ಕ್ಷಯರೋಗವು ಮೊದಲೆಲ್ಲಾ ಆರು ತಿಂಗಳ ಅವಧಿಯ ಚಿಕಿತ್ಸೆ ನೀಡಿದರೆ ಗುಣವಾಗುತ್ತಿತ್ತು. ಈಗ ಕ್ಷಯ ರೋಗಕ್ಕೆ ಡ್ರಗ್ ರೆಸಿಸ್ಟೆಂಟ್, ಏಕ್ಸ್ಟೆನ್ಸಿವ್ ಡ್ರಗ್ ರೆಸಿಸ್ಟೆಂಟ್ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಸರಳಾರ ಮೂತ್ರನಾಳದ ಸೋಂಕು ‘ಇ-ಕೊಲಿ’ ಎಂಬ ರೋಗಾಣುವಿನಿಂದ ಉಂಟಾಗಿರಬಹುದು. ಈ ರೋಗಾಣುವೂ ಹಲವಾರು ಔಷಧಗಳಿಗೆ ಪ್ರತಿರೋಧವನ್ನು ತೋರುತ್ತದೆ.</p><p><strong>ಯಾಕೆ ಈ ಪ್ರತಿರೋಧ?</strong></p><p>ಔಷಧಗಳ ತಪ್ಪು ಅಥವಾ ಅತಿಯಾದ ಬಳಕೆಯಿಂದ ಈ ರೀತಿಯ ಪ್ರತಿರೋಧದ ಪರಿಸ್ಥಿತಿ ಉಂಟಾಗಬಲ್ಲದು. ನಾವು ಮಾಡುವ ತಪ್ಪುಗಳ ಪಟ್ಟಿ ಹೀಗಿದೆ:</p><p>l ವೈದ್ಯರ ಸಲಹೆಯಿಲ್ಲದೇ ಆ್ಯಂಟಿಬಯಾಟಿಕ್ಗಳನ್ನು ತೆಗೆದುಕೊಳ್ಳುವುದು. ಸ್ವಲ್ಪ ಗುಣವಾದಂತೆ ಅನ್ನಿಸಿದ ತಕ್ಷಣವೇ , ಈ ಆ್ಯಂಟಿಬಯಾಟಿಕ್ ಬಳಕೆಯನ್ನು ನಿಲ್ಲಿಸುವುದು.</p><p>l ಸಣ್ಣ ಜ್ವರ, ಕೆಮ್ಮುಗಳಿಗೂ ಆ್ಯಂಟಿಬಯಾಟಿಕ್ಗಳನ್ನು ತೆಗೆದುಕೊಳ್ಳುವುದು.</p><p>l ಸ್ವಚ್ಛತೆಯ ಕೊರತೆ. ಆಸ್ಪತ್ರೆಯಲ್ಲಿ ಸೋಂಕು ಉಂಟಾಗುವ ಅಪಾಯ.</p><p><strong>ಪರಿಣಾಮಗಳು</strong></p><p>l ಸಾಮಾನ್ಯ ಸೋಂಕುಗಳು, ರೋಗಗಳು ಗುಣವಾಗದೇ ಉಳಿಯುತ್ತವೆ. ಇದರಿಂದ ಚಿಕಿತ್ಸೆಯ ಸಮಯ ದೀರ್ಘಗೊಳ್ಳುತ್ತದೆ. ಚಿಕಿತ್ಸೆಯ ವೆಚ್ಚ ಹೆಚ್ಚುತ್ತದೆ.</p><p>l ಹೊಸ ಔಷಧಗಳನ್ನು ಅಭಿವೃದ್ಧಿ ಪಡಿಸಬೇಕಾಗಬಹುದು. ಆಸ್ಪತ್ರೆಯಲ್ಲಿ ಹೆಚ್ಚು ದಿನಗಳ ಕಾಲ ಇರಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಮತ್ತು ಹೆರಿಗೆಯ ಸಮಯದಲ್ಲಿ ಸೋಂಕು ಉಂಟಾಗುವ ಅಪಾಯ ಹೆಚ್ಚಾಗುತ್ತದೆ. ಸಾವಿನ ಪ್ರಮಾಣವೂ ಹೆಚ್ಚಾಗಬಹುದು.</p><p><strong>ಹೀಗೆ ಮಾಡಿ</strong></p><p>l ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಅನೇಕ ಭಾರತೀಯರು ವೈದ್ಯರ ಸಲಹೆಯಿಲ್ಲದೆ ಔಷಧಗಳನ್ನು ಖರೀದಿಸಿ, ಸೇವಿಸುತ್ತಾರೆ. ಔಷಧಗಳ ವಿಚಾರದಲ್ಲಿ ಕಟ್ಟುನಿಟ್ಟಿನ ಸಲಹೆಯನ್ನು ಪಾಲಿಸಿ.</p><p>l ಉಳಿಕೆ ಔಷಧಗಳನ್ನು ಬಳಸುವುದು ಅಥವಾ ಬೇರೆಯವರ ಔಷಧಗಳನ್ನು ಬಳಸುವುದನ್ನು ಮಾಡಬಾರದು.</p><p>l ಕೊಟ್ಟಿರುವ ಅವಧಿಗೆ ಮಾತ್ರ ಆ್ಯಂಟಿಬಯಾಟಿಕ್ಗಳನ್ನು ಬಳಸಬೇಕು. ಐದು ಅಥವಾ ಏಳು ದಿನಗಳಿಗೆ ಔಷಧವನ್ನು ನೀಡಿದರೆ, ಅದನ್ನು ಸಂಪೂರ್ಣವಾಗಿ ತೆಗೆದುಕೊಳ್ಳಬೇಕು.</p><p>l ಪ್ರಾಣಿಗಳಲ್ಲಿ ಆ್ಯಂಟಿಬಯಾಟಿಕ್ ಬಳಕೆಯನ್ನು ನಿಯಂತ್ರಿಸಬೇಕು. ಸ್ವಚ್ಛತೆಯನ್ನು ಪಾಲಿಸಬೇಕು. ಶುದ್ಧ ಆಹಾರ ಮತ್ತು ನೀರನ್ನು ಬಳಸಬೇಕು. ರೋಗನಿರೋಧಕ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವುದು ಅಗತ್ಯ.</p>.<p><strong>ಆರೋಗ್ಯ ಸಂಸ್ಥೆಗಳ ಪಾತ್ರ</strong></p><p>ಸರ್ಕಾರ ಪಶುವೈದ್ಯಕೀಯ, ಜಿಲ್ಲಾ ಆಸ್ಪತ್ರೆಗಳಲ್ಲಿ ಆ್ಯಂಟಿ ಬಯಾಟಿಕ್ ಸ್ಟೀವರ್ಡ್ ಷಿಪ್ ಕಾರ್ಯಕ್ರಮ ಹಮ್ಮಿಕೊಂಡಿದೆ . ಔಷಧಗಳ ಬಳಕೆ ಯಾವ ಸಂದರ್ಭಕ್ಕೆ ಹೇಗಿರಬೇಕು, ಯಾವಾಗ ಬಳಸಬಾರದೆಂಬ ಸ್ಪಷ್ಟ ಮಾರ್ಗಸೂಚಿಯನ್ನು ಹೊರಡಿಸಿದೆ.</p><p><strong>ರೈತರ ಮತ್ತು ಪಶುಪಾಲಕರ ಪಾತ್ರ</strong></p><p>ಪ್ರಾಣಿಗಳಿಗೆ ಹೆಚ್ಚು ಆ್ಯಂಟಿಬಯಾಟಿಕ್ಗಳನ್ನು ಕೊಟ್ಟರೆ, ಈ ಅಂಶ ಅವುಗಳ ಹಾಲು, ಮಾಂಸ ಹಾಗೂ ಪರಿಸರದಲ್ಲಿಯೂ ಉಳಿದುಬಿಡುತ್ತದೆ. ಇದರಿಂದ ಪ್ರತಿರೋಧದ ಪ್ರಮಾಣ ಹೆಚ್ಚುತ್ತದೆ. ಆಹಾರ ಸರಪಳಿ, ನೀರಿನ ಮೂಲಕ ಈ ಸಮಸ್ಯೆ ಉಲ್ಬಣಿಸಬಹುದು. ಹಾಗಾಗಿ ಕೃಷಿಕರು ಕೆಲವು ಮಾರ್ಗಸೂಚಿಯನ್ನು ಅನುಸರಿಸಬೇಕಾಗುತ್ತದೆ.</p><p>ಕೀಟನಾಶಕ/ರಾಸಾಯನಿಕಗಳ ಬಳಕೆಯಲ್ಲಿ ನಿಯಂತ್ರಣ, ಸಹಜ ಕೃಷಿ ಪದ್ಧತಿ ಅನುಸರಿಸುವುದು, ಪಶುಗಳಿಗೆ ಸರಿಯಾದ ಲಸಿಕೆ ಹಾಕುವುದು ಮತ್ತು ಆ್ಯಂಟಿಬಯಾಟಿಕ್ಗಳನ್ನು ಸೇವಿಸುವ ಪ್ರಾಣಿಗಳ ಹಾಲು ಅಥವಾ ಮಾಂಸವನ್ನು ತಕ್ಷಣಕ್ಕೆ ಬಳಸಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸರಳಾ, ಒಬ್ಬ ಗೃಹಿಣಿ; ಎರಡು ಮಕ್ಕಳ ತಾಯಿ. ಪದೇ ಪದೇ ಮೂತ್ರ ಸೋಂಕಿಗೆ ಒಳಗಾಗುವ ಸರಳಾ, ಮೂತ್ರಸೋಂಕಿನ ಲಕ್ಷಣ ಕಂಡ ತಕ್ಷಣವೇ ವೈದ್ಯರು ಕೊಟ್ಟ ಎರಡು ಗುಳಿಗೆಗಳನ್ನು ನುಂಗಿ, ಸೋಂಕು ಕಡಿಮೆಯಾದ ತಕ್ಷಣವೇ ಮಾತ್ರೆಯನ್ನು ನಿಲ್ಲಿಸಿಬಿಡುತ್ತಿದ್ದಳು. ಆದರೆ ಈ ಬಾರಿ ಮಾತ್ರೆ ತೆಗೆದುಕೊಂಡರೂ ಸೋಂಕು ಕಡಿಮೆಯಾಗಲಿಲ್ಲ. ಹತ್ತಿರದ ವೈದ್ಯರಲ್ಲಿ ಮೂತ್ರ ಪರೀಕ್ಷೆ ಮಾಡಿಸಿದಾಗ ‘ಇ-ಕೊಲಿ’ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗಿರುವ ಸೋಂಕು ಎಂದು ತಿಳಿಯಿತು. ಯಾವ ಮಾತ್ರೆಗಳಿಗೂ ತಗ್ಗದ ಸೋಂಕಿಗೆ ಕೊನೆಗೂ ಇಂಜೆಕ್ಷನ್ನಿನ ಮೊರೆ ಹೋಗಬೇಕಾಯಿತು.</p><p>ಪ್ರತಿ ವರ್ಷ ನವೆಂಬರ್ ತಿಂಗಳ ಮೂರನೇ ವಾರವನ್ನು ‘ವಿಶ್ವ ಆ್ಯಂಟಿಮೈಕ್ರೋಬಿಯಲ್ ಪ್ರತಿರೋಧ’ದ ವಾರವಾಗಿ ಆಚರಿಸಲಾಗುತ್ತದೆ.</p><p><strong>ಆ್ಯಂಟಿಮೈಕ್ರೋಬಿಯಲ್ ಪ್ರತಿರೋಧವೆಂದರೇನು?</strong></p><p>‘ಆ್ಯಂಟಿಮೈಕ್ರೋಬಿಯಲ್’ ಎಂದರೆ ರೋಗಾಣುಗಳಾದ ಬ್ಯಾಕ್ಟಿರೀಯಾ, ವೈರಸ್, ಫಂಗಸ್, ಪ್ಯಾರಾಸೈಟ್ಗಳ ವಿರುದ್ಧ ಹೋರಾಡುವ ಅಥವಾ ಕೊಲ್ಲುವ ಔಷಧಗಳು. ಎಂದರೆ ನಾವು ಬಳಸುವ ಆ್ಯಂಟಿಬಯಾಟಿಕ್ಸ್, ಆ್ಯಂಟಿಫಂಗಲ್, ಆ್ಯಂಟಿವೈರಲ್ ಔಷಧಗಳು. ಆ್ಯಂಟಿಮೈಕ್ರೋಬಿಯಲ್ ಪ್ರತಿರೋಧವೆಂದರೆ – ರೋಗಾಣುಜೀವಿಗಳು ಔಷಧಗಳಿಗೆ ಪ್ರತಿರೋಧವನ್ನು ತೋರುವುದು. ಎಂದರೆ- ಔಷಧಗಳು ಕೆಲಸ ಮಾಡದೇ ಹೋಗುವುದು, ರೋಗಾಣುಗಳು ಸಾಯದೇ ಹೋಗುವುದು ಅಥವಾ ನಿಯಂತ್ರಣಕ್ಕೆ ಬಾರದೇ ಇರುವುದು.</p><p>ಉದಾಹರಣೆಗೆ ಹೇಳುವುದಾದರೆ, ಸುಲಭವಾಗಿ ಗುಣವಾಗುತ್ತಿದ್ದ ಸಾಮಾನ್ಯ ಸೋಂಕುಗಳು ಗುಣವಾಗದೇ ಇರುವುದು. ಕ್ಷಯರೋಗವು ಮೊದಲೆಲ್ಲಾ ಆರು ತಿಂಗಳ ಅವಧಿಯ ಚಿಕಿತ್ಸೆ ನೀಡಿದರೆ ಗುಣವಾಗುತ್ತಿತ್ತು. ಈಗ ಕ್ಷಯ ರೋಗಕ್ಕೆ ಡ್ರಗ್ ರೆಸಿಸ್ಟೆಂಟ್, ಏಕ್ಸ್ಟೆನ್ಸಿವ್ ಡ್ರಗ್ ರೆಸಿಸ್ಟೆಂಟ್ ಚಿಕಿತ್ಸೆಯನ್ನು ನೀಡಬೇಕಾಗುತ್ತದೆ. ಸರಳಾರ ಮೂತ್ರನಾಳದ ಸೋಂಕು ‘ಇ-ಕೊಲಿ’ ಎಂಬ ರೋಗಾಣುವಿನಿಂದ ಉಂಟಾಗಿರಬಹುದು. ಈ ರೋಗಾಣುವೂ ಹಲವಾರು ಔಷಧಗಳಿಗೆ ಪ್ರತಿರೋಧವನ್ನು ತೋರುತ್ತದೆ.</p><p><strong>ಯಾಕೆ ಈ ಪ್ರತಿರೋಧ?</strong></p><p>ಔಷಧಗಳ ತಪ್ಪು ಅಥವಾ ಅತಿಯಾದ ಬಳಕೆಯಿಂದ ಈ ರೀತಿಯ ಪ್ರತಿರೋಧದ ಪರಿಸ್ಥಿತಿ ಉಂಟಾಗಬಲ್ಲದು. ನಾವು ಮಾಡುವ ತಪ್ಪುಗಳ ಪಟ್ಟಿ ಹೀಗಿದೆ:</p><p>l ವೈದ್ಯರ ಸಲಹೆಯಿಲ್ಲದೇ ಆ್ಯಂಟಿಬಯಾಟಿಕ್ಗಳನ್ನು ತೆಗೆದುಕೊಳ್ಳುವುದು. ಸ್ವಲ್ಪ ಗುಣವಾದಂತೆ ಅನ್ನಿಸಿದ ತಕ್ಷಣವೇ , ಈ ಆ್ಯಂಟಿಬಯಾಟಿಕ್ ಬಳಕೆಯನ್ನು ನಿಲ್ಲಿಸುವುದು.</p><p>l ಸಣ್ಣ ಜ್ವರ, ಕೆಮ್ಮುಗಳಿಗೂ ಆ್ಯಂಟಿಬಯಾಟಿಕ್ಗಳನ್ನು ತೆಗೆದುಕೊಳ್ಳುವುದು.</p><p>l ಸ್ವಚ್ಛತೆಯ ಕೊರತೆ. ಆಸ್ಪತ್ರೆಯಲ್ಲಿ ಸೋಂಕು ಉಂಟಾಗುವ ಅಪಾಯ.</p><p><strong>ಪರಿಣಾಮಗಳು</strong></p><p>l ಸಾಮಾನ್ಯ ಸೋಂಕುಗಳು, ರೋಗಗಳು ಗುಣವಾಗದೇ ಉಳಿಯುತ್ತವೆ. ಇದರಿಂದ ಚಿಕಿತ್ಸೆಯ ಸಮಯ ದೀರ್ಘಗೊಳ್ಳುತ್ತದೆ. ಚಿಕಿತ್ಸೆಯ ವೆಚ್ಚ ಹೆಚ್ಚುತ್ತದೆ.</p><p>l ಹೊಸ ಔಷಧಗಳನ್ನು ಅಭಿವೃದ್ಧಿ ಪಡಿಸಬೇಕಾಗಬಹುದು. ಆಸ್ಪತ್ರೆಯಲ್ಲಿ ಹೆಚ್ಚು ದಿನಗಳ ಕಾಲ ಇರಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಮತ್ತು ಹೆರಿಗೆಯ ಸಮಯದಲ್ಲಿ ಸೋಂಕು ಉಂಟಾಗುವ ಅಪಾಯ ಹೆಚ್ಚಾಗುತ್ತದೆ. ಸಾವಿನ ಪ್ರಮಾಣವೂ ಹೆಚ್ಚಾಗಬಹುದು.</p><p><strong>ಹೀಗೆ ಮಾಡಿ</strong></p><p>l ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಅನೇಕ ಭಾರತೀಯರು ವೈದ್ಯರ ಸಲಹೆಯಿಲ್ಲದೆ ಔಷಧಗಳನ್ನು ಖರೀದಿಸಿ, ಸೇವಿಸುತ್ತಾರೆ. ಔಷಧಗಳ ವಿಚಾರದಲ್ಲಿ ಕಟ್ಟುನಿಟ್ಟಿನ ಸಲಹೆಯನ್ನು ಪಾಲಿಸಿ.</p><p>l ಉಳಿಕೆ ಔಷಧಗಳನ್ನು ಬಳಸುವುದು ಅಥವಾ ಬೇರೆಯವರ ಔಷಧಗಳನ್ನು ಬಳಸುವುದನ್ನು ಮಾಡಬಾರದು.</p><p>l ಕೊಟ್ಟಿರುವ ಅವಧಿಗೆ ಮಾತ್ರ ಆ್ಯಂಟಿಬಯಾಟಿಕ್ಗಳನ್ನು ಬಳಸಬೇಕು. ಐದು ಅಥವಾ ಏಳು ದಿನಗಳಿಗೆ ಔಷಧವನ್ನು ನೀಡಿದರೆ, ಅದನ್ನು ಸಂಪೂರ್ಣವಾಗಿ ತೆಗೆದುಕೊಳ್ಳಬೇಕು.</p><p>l ಪ್ರಾಣಿಗಳಲ್ಲಿ ಆ್ಯಂಟಿಬಯಾಟಿಕ್ ಬಳಕೆಯನ್ನು ನಿಯಂತ್ರಿಸಬೇಕು. ಸ್ವಚ್ಛತೆಯನ್ನು ಪಾಲಿಸಬೇಕು. ಶುದ್ಧ ಆಹಾರ ಮತ್ತು ನೀರನ್ನು ಬಳಸಬೇಕು. ರೋಗನಿರೋಧಕ ಚುಚ್ಚುಮದ್ದುಗಳನ್ನು ತೆಗೆದುಕೊಳ್ಳುವುದು ಅಗತ್ಯ.</p>.<p><strong>ಆರೋಗ್ಯ ಸಂಸ್ಥೆಗಳ ಪಾತ್ರ</strong></p><p>ಸರ್ಕಾರ ಪಶುವೈದ್ಯಕೀಯ, ಜಿಲ್ಲಾ ಆಸ್ಪತ್ರೆಗಳಲ್ಲಿ ಆ್ಯಂಟಿ ಬಯಾಟಿಕ್ ಸ್ಟೀವರ್ಡ್ ಷಿಪ್ ಕಾರ್ಯಕ್ರಮ ಹಮ್ಮಿಕೊಂಡಿದೆ . ಔಷಧಗಳ ಬಳಕೆ ಯಾವ ಸಂದರ್ಭಕ್ಕೆ ಹೇಗಿರಬೇಕು, ಯಾವಾಗ ಬಳಸಬಾರದೆಂಬ ಸ್ಪಷ್ಟ ಮಾರ್ಗಸೂಚಿಯನ್ನು ಹೊರಡಿಸಿದೆ.</p><p><strong>ರೈತರ ಮತ್ತು ಪಶುಪಾಲಕರ ಪಾತ್ರ</strong></p><p>ಪ್ರಾಣಿಗಳಿಗೆ ಹೆಚ್ಚು ಆ್ಯಂಟಿಬಯಾಟಿಕ್ಗಳನ್ನು ಕೊಟ್ಟರೆ, ಈ ಅಂಶ ಅವುಗಳ ಹಾಲು, ಮಾಂಸ ಹಾಗೂ ಪರಿಸರದಲ್ಲಿಯೂ ಉಳಿದುಬಿಡುತ್ತದೆ. ಇದರಿಂದ ಪ್ರತಿರೋಧದ ಪ್ರಮಾಣ ಹೆಚ್ಚುತ್ತದೆ. ಆಹಾರ ಸರಪಳಿ, ನೀರಿನ ಮೂಲಕ ಈ ಸಮಸ್ಯೆ ಉಲ್ಬಣಿಸಬಹುದು. ಹಾಗಾಗಿ ಕೃಷಿಕರು ಕೆಲವು ಮಾರ್ಗಸೂಚಿಯನ್ನು ಅನುಸರಿಸಬೇಕಾಗುತ್ತದೆ.</p><p>ಕೀಟನಾಶಕ/ರಾಸಾಯನಿಕಗಳ ಬಳಕೆಯಲ್ಲಿ ನಿಯಂತ್ರಣ, ಸಹಜ ಕೃಷಿ ಪದ್ಧತಿ ಅನುಸರಿಸುವುದು, ಪಶುಗಳಿಗೆ ಸರಿಯಾದ ಲಸಿಕೆ ಹಾಕುವುದು ಮತ್ತು ಆ್ಯಂಟಿಬಯಾಟಿಕ್ಗಳನ್ನು ಸೇವಿಸುವ ಪ್ರಾಣಿಗಳ ಹಾಲು ಅಥವಾ ಮಾಂಸವನ್ನು ತಕ್ಷಣಕ್ಕೆ ಬಳಸಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>