<p>ದಿನೇ ದಿನೇ ಹೆಚ್ಚುತ್ತಿರುವ ಅನೇಕ ಆರೋಗ್ಯ ಸಮಸ್ಯೆಗೆ ಎಳೆ ಮಕ್ಕಳು ಬಲಿ ಆಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಆರೈಕೆ ಬಗ್ಗೆ ಪೋಷಕರು ಹೆಚ್ಚಿನ ಗಮನ ವಹಿಸಬೇಕು ಎನ್ನುತ್ತಾರೆ ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು . ಶಿಶುಗಳ ರೋಗನಿರೋಧಕ ಶಕ್ತಿ ಹೆಚ್ಚಳ ಹಾಗೂ ಅವರನ್ನು ಅನಾರೋಗ್ಯದಿಂದ ಮುಕ್ತರಾಗಿಸಲು ಕೆಲವು ಕಿವಿಮಾತುಗಳು ಇಲ್ಲಿವೆ.</p><p><strong>ಮಕ್ಕಳ ರೋಗನಿರೋಧಕ ಶಕ್ತಿಹೆಚ್ಚಳಕ್ಕೆ ಇಲ್ಲಿವೆ ಕೆಲವು ಸಲಹೆಗಳು</strong></p><p>ಸ್ವರ್ಣಪ್ರಾಶನ (ಜೇನುತುಪ್ಪ, ತುಪ್ಪ ಮತ್ತು ಕೆಲವು ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿ). </p><p> ರೋಗನಿರೋಧಕ ಶಕ್ತಿ ವೃದ್ಧಿ(immuno modulation)</p><p> ಪದೇಪದೇ ಉಸಿರಾಟದ ತೊಂದರೆಗಳನ್ನು ತಡೆಯುವಲ್ಲಿ ಸಹಕಾರಿ</p><p>(ಗಮನಿಸಿ: ಆಯುರ್ವೇದ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಮಕ್ಕಳಿಗೆ ಈ ಔಷಧಿ ನೀಡಬೇಕು.)</p><p> <strong>ಹರಿದ್ರಾಖಂಡ</strong></p><p>ಹರಿದ್ರಾಖಂಡ ಒಂದು ಪ್ರಸಿದ್ಧ ಕಫಹರ ಮತ್ತು ಅಲರ್ಜಿ ನಿವಾರಕ ಆಯುರ್ವೇದ ಔಷಧಿ.</p><p>ಹರಿದ್ರಾಖಂಡ ಒಔಷಧಿಯು ಅಲರ್ಜಿಕ್ ನೆಗಡಿ,ಕೆಮ್ಮುಗಳ ನಿಯಂತ್ರಣಕ್ಕೆ ಸಹಕಾರಿ</p><p>ಉಸಿರಾಟದ ತೊಂದರೆ ಇರುವ ಮಕ್ಕಳಲ್ಲಿ ವೈದ್ಯರ ಸಲಹೆಯೊಂದಿಗೆ ಬಳಸಿಬೇಕು</p><p>ಆಯುರ್ವೇದ ಚಿಕಿತ್ಸೆ – ಮೂಲ ಕಾರಣಕ್ಕೆ ಪರಿಹಾರ</p><p>ಪದೇಪದೇ ಉಸಿರಾಟದ ತೊಂದರೆ ಇರುವ ಮಕ್ಕಳಿಗೆ ಆಯುರ್ವೇದದಲ್ಲಿ </p><p> ಪ್ರತಿಮರ್ಷ ನಸ್ಯ (ಅನು ತೈಲ / ಶದ್ಬಿಂದು ತೈಲ)</p><p> ಕಫಹರ ಮತ್ತು ರಸಾಯನ ಔಷಧಗಳು</p><p>ಆಹಾರ–ವಿಹಾರ ಮಾರ್ಗದರ್ಶನ (ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸುವುದು)</p><p>ದೀರ್ಘಕಾಲೀನ, ಸುರಕ್ಷಿತ ಚಿಕಿತ್ಸೆಯನ್ನೂ ಪಡೆದುಕೊಳ್ಳಬಹುದು.</p><p> <strong>ಪೋಷಕರಿಗೆ ಸಲಹೆ</strong></p><p>ಮಕ್ಕಳ ಆರೋಗ್ಯವು ಋತುಚರ್ಯೆಯ ಪಾಲನೆಯ ಮೇಲೆ ನಿಂತಿದೆ. ಹೇಮಂತ ಋತುವಿನಲ್ಲಿ ಪೋಷಕರು ಆಹಾರ, ಜೀವನಶೈಲಿ ಮತ್ತು ಸರಳ ಆಯುರ್ವೇದ ಕ್ರಮಗಳನ್ನು ಅನುಸರಿಸಿದರೆ, ಮಕ್ಕಳನ್ನು ಪುನಃಪುನಃ ಉಸಿರಾಟದ ಸೋಂಕುಗಳಿಂದ ರಕ್ಷಿಸಬಹುದು.</p><p><em><strong>(ಲೇಖಕರು: </strong>ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು, ಹುಬ್ಬಳ್ಳಿಯ ಆಯುರ್ವೇದ ಕಾಲೇಜು ಆಸ್ಪತ್ರೆ)</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಿನೇ ದಿನೇ ಹೆಚ್ಚುತ್ತಿರುವ ಅನೇಕ ಆರೋಗ್ಯ ಸಮಸ್ಯೆಗೆ ಎಳೆ ಮಕ್ಕಳು ಬಲಿ ಆಗುತ್ತಿದ್ದಾರೆ. ಆದ್ದರಿಂದ ಮಕ್ಕಳ ಆರೈಕೆ ಬಗ್ಗೆ ಪೋಷಕರು ಹೆಚ್ಚಿನ ಗಮನ ವಹಿಸಬೇಕು ಎನ್ನುತ್ತಾರೆ ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು . ಶಿಶುಗಳ ರೋಗನಿರೋಧಕ ಶಕ್ತಿ ಹೆಚ್ಚಳ ಹಾಗೂ ಅವರನ್ನು ಅನಾರೋಗ್ಯದಿಂದ ಮುಕ್ತರಾಗಿಸಲು ಕೆಲವು ಕಿವಿಮಾತುಗಳು ಇಲ್ಲಿವೆ.</p><p><strong>ಮಕ್ಕಳ ರೋಗನಿರೋಧಕ ಶಕ್ತಿಹೆಚ್ಚಳಕ್ಕೆ ಇಲ್ಲಿವೆ ಕೆಲವು ಸಲಹೆಗಳು</strong></p><p>ಸ್ವರ್ಣಪ್ರಾಶನ (ಜೇನುತುಪ್ಪ, ತುಪ್ಪ ಮತ್ತು ಕೆಲವು ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿ). </p><p> ರೋಗನಿರೋಧಕ ಶಕ್ತಿ ವೃದ್ಧಿ(immuno modulation)</p><p> ಪದೇಪದೇ ಉಸಿರಾಟದ ತೊಂದರೆಗಳನ್ನು ತಡೆಯುವಲ್ಲಿ ಸಹಕಾರಿ</p><p>(ಗಮನಿಸಿ: ಆಯುರ್ವೇದ ವೈದ್ಯರ ಮೇಲ್ವಿಚಾರಣೆಯಲ್ಲಿ ಮಾತ್ರ ಮಕ್ಕಳಿಗೆ ಈ ಔಷಧಿ ನೀಡಬೇಕು.)</p><p> <strong>ಹರಿದ್ರಾಖಂಡ</strong></p><p>ಹರಿದ್ರಾಖಂಡ ಒಂದು ಪ್ರಸಿದ್ಧ ಕಫಹರ ಮತ್ತು ಅಲರ್ಜಿ ನಿವಾರಕ ಆಯುರ್ವೇದ ಔಷಧಿ.</p><p>ಹರಿದ್ರಾಖಂಡ ಒಔಷಧಿಯು ಅಲರ್ಜಿಕ್ ನೆಗಡಿ,ಕೆಮ್ಮುಗಳ ನಿಯಂತ್ರಣಕ್ಕೆ ಸಹಕಾರಿ</p><p>ಉಸಿರಾಟದ ತೊಂದರೆ ಇರುವ ಮಕ್ಕಳಲ್ಲಿ ವೈದ್ಯರ ಸಲಹೆಯೊಂದಿಗೆ ಬಳಸಿಬೇಕು</p><p>ಆಯುರ್ವೇದ ಚಿಕಿತ್ಸೆ – ಮೂಲ ಕಾರಣಕ್ಕೆ ಪರಿಹಾರ</p><p>ಪದೇಪದೇ ಉಸಿರಾಟದ ತೊಂದರೆ ಇರುವ ಮಕ್ಕಳಿಗೆ ಆಯುರ್ವೇದದಲ್ಲಿ </p><p> ಪ್ರತಿಮರ್ಷ ನಸ್ಯ (ಅನು ತೈಲ / ಶದ್ಬಿಂದು ತೈಲ)</p><p> ಕಫಹರ ಮತ್ತು ರಸಾಯನ ಔಷಧಗಳು</p><p>ಆಹಾರ–ವಿಹಾರ ಮಾರ್ಗದರ್ಶನ (ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ರೂಢಿಸುವುದು)</p><p>ದೀರ್ಘಕಾಲೀನ, ಸುರಕ್ಷಿತ ಚಿಕಿತ್ಸೆಯನ್ನೂ ಪಡೆದುಕೊಳ್ಳಬಹುದು.</p><p> <strong>ಪೋಷಕರಿಗೆ ಸಲಹೆ</strong></p><p>ಮಕ್ಕಳ ಆರೋಗ್ಯವು ಋತುಚರ್ಯೆಯ ಪಾಲನೆಯ ಮೇಲೆ ನಿಂತಿದೆ. ಹೇಮಂತ ಋತುವಿನಲ್ಲಿ ಪೋಷಕರು ಆಹಾರ, ಜೀವನಶೈಲಿ ಮತ್ತು ಸರಳ ಆಯುರ್ವೇದ ಕ್ರಮಗಳನ್ನು ಅನುಸರಿಸಿದರೆ, ಮಕ್ಕಳನ್ನು ಪುನಃಪುನಃ ಉಸಿರಾಟದ ಸೋಂಕುಗಳಿಂದ ರಕ್ಷಿಸಬಹುದು.</p><p><em><strong>(ಲೇಖಕರು: </strong>ಮಕ್ಕಳ ಆರೋಗ್ಯ ವಿಭಾಗದ ಆಯುರ್ವೇದ ತಜ್ಞರು, ಹುಬ್ಬಳ್ಳಿಯ ಆಯುರ್ವೇದ ಕಾಲೇಜು ಆಸ್ಪತ್ರೆ)</em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>