<p>ಬೆಳೆಯುವ ಮಕ್ಕಳಲ್ಲಿ ಪೋಷಕಾಂಶದ ಕೊರತೆಯುಂಟುವಾಗುವಂತೆ ಮಾಡಿ, ಶಕ್ತಿಯನ್ನು ಕುಂದಿಸುವುದು ಜಂತು ಹುಳುಗಳು. </p><p>ಸಾಮಾನ್ಯವಾಗಿ ಆರು ವರ್ಷದ ಒಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜಂತು ಹುಳುಗಳು, ರಕ್ತಹೀನತೆ, ಸುಸ್ತು, ಏಕಾಗ್ರತೆಯ ಕೊರತೆ, ಮಲವಿಸರ್ಜನೆಯ ಸಂದರ್ಭದಲ್ಲಿ ರಕ್ತ ಹೋಗುವಂತಹ ಸಮಸ್ಯೆಗಳನ್ನು ಎದುರಿಸುವಂತೆ ಮಾಡುತ್ತವೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದೂ ಇದೇ ಕಾರಣಕ್ಕೆ.</p><p>ಜಂತು ಹುಳುಗಳ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರುವರಿ 10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಆಚರಿಸಲಾಗುತ್ತದೆ. </p><p><strong>ಜಂತು ಹುಳುಗಳಾಗಲು ಮುಖ್ಯ ಕಾರಣಗಳೆಂದರೆ...</strong></p><ul><li><p>ಜಂತುಹುಳುವಿಗೆ ಮುಖ್ಯ ಕಾರಣ ಅಶುದ್ಧತೆ. ಮಕ್ಕಳು ಮಣ್ಣು, ನೀರಿನಲ್ಲಿ ಆಟವಾಡುವುದು ಹೆಚ್ಚು. ಆಟವಾಡಿ, ಕೈ ಬಾಯಿ ತೊಳೆಯದೆ ಆಹಾರ ಸೇವಿಸುತ್ತಾರೆ. ಆ ಮೂಲಕ ಅವುಗಳು ದೇಹದೊಳಗೆ ಸೇರಿಕೊಳ್ಳುತ್ತವೆ. </p></li><li><p>ಕೆಲಮೊಮ್ಮೆ ಚಪ್ಪಲಿ ಧರಿಸದೆ ಬರಿಗಾಲಿನಲ್ಲಿ ಮಣ್ಣಿನ ಮೇಲೆ ನಡೆದಾಡಿದರೂ ಜಂತುಹುಳುಗಳು ದೇಹವನ್ನು ಸೇರುತ್ತವೆ. ಚಪ್ಪಲಿ ಧರಿಸದೆ ಇದ್ದಾಗ ಕಾಲನ್ನು ಕಚ್ಚಿ ಆ ಗಾಯದ ಮೂಲಕ ದೇಹವನ್ನು ಪ್ರವೇಶಿಸುತ್ತವೆ.</p></li><li><p>ಕುಡಿಯುವ ನೀರು ಶುದ್ಧವಾಗಿ ಇಲ್ಲದಿದ್ದರೆ, ಶುಚಿಯಾದ ಆಹಾರ ಸೇವನೆ ಮಾಡದಿದ್ದರೆ ಅಥವಾ ಮಾಂಸಹಾರಿಗಳಾಗಿದ್ದರೆ ಅರೆಬೆಂದ ಮಾಂಸವನ್ನು ತಿನ್ನುವುದರಿಂದಲೂ ಜಂತುಹುಳುಗಳು ಕಾಡುತ್ತವೆ. </p></li></ul><p><strong>ಹೀಗೆ ನಿಭಾಯಿಸಿ</strong></p><ul><li><p>ಸಾಧ್ಯವಾದಷ್ಟು ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ. ನೆಲಕ್ಕೆ ಬಿದ್ದ ಆಹಾರವನ್ನು ಅಥವಾ ಹಳಸಿದ, ಫ್ರಿಡ್ಜ್ನಲ್ಲಿಟ್ಟ ಆಹಾರವನ್ನು ಮಕ್ಕಳಿಗೆ ನೀಡಬೇಡಿ.</p></li><li><p>ಜಂಕ್ಫುಡ್, ಹೊರಗಿನ ಆಹಾರವನ್ನು ಮಕ್ಕಳಿಗೆ ನೀಡಬೇಡಿ. ಇದರಿಂದ ಹೊಟ್ಟೆಯಲ್ಲಿ ಜಂತು ಹುಳುಗಳು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.</p></li><li><p>ಮಕ್ಕಳಲ್ಲಿ ಗುದದ್ವಾರ ಜಾಗ ಸ್ಚಚ್ಛವಾಗಿರುವಂತೆ ನೋಡಿಕೊಳ್ಳಿ. ಮಲ, ಮೂತ್ರ ವಿಸರ್ಜನೆ ಬಳಿಕ ಬಿಸಿ ನೀರಿನಿಂದ ಶುಚಿಗೊಳಿಸಲು ಮರೆಯದಿರಿ.</p></li><li><p>ಆಟವಾಡಿ ಬಂದ ಮೇಲೆ ಮಕ್ಕಳ ಕೈ ಕಾಲುಗಳನ್ನು ಸ್ವಚ್ಛಗೊಳಿಸಿದ ಬಳಿಕವೇ ಆಹಾರ ನೀಡಿ.</p></li><li><p>ಆಗಾಗ ಸೋರೆಕಾಯಿ ಅಥವಾ ಹಾಗಲಕಾಯಿ ಜ್ಯೂಸ್ ನೀಡುತ್ತಿರಿ. ಇದರಿಂದ ರಕ್ತವೂ ಶುದ್ಧವಾಗುತ್ತದೆ, ಜಂತು ಹುಳುಗಳ ಸಮಸ್ಯೆಯೂ ಕಾಡದು. ಆದರೆ ನೆನಪಿಡಿ ಮಕ್ಕಳಿಗೆ 2 ಅಥವಾ 3 ಎಂ.ಎಲ್ನಷ್ಟು ಮಾತ್ರ ನೀಡಿ.</p></li></ul>.<div><blockquote>ಮುಖ್ಯವಾಗಿ ಉಗುರು ಕಚ್ಚುವ ಅಭ್ಯಾಸವಿದ್ದರೆ ಜಂತು ಹುಳುಗಳ ಸಮಸ್ಯೆ ಕಾಡುತ್ತದೆ. ಉಗುರುಗಳ ಮೂಲಕ ಕೊಳೆ ಹೊಟ್ಟೆ ಸೇರಿ ಜಂತು ಹುಳುಗಳಾಗುವಂತೆ ಮಾಡುತ್ತದೆ. ದೊಡ್ಡವರಿಗೂ ಜಂತು ಹುಳು ಸಮಸ್ಯೆ ಕಾಡುತ್ತದೆ. ಈ ಸಮಸ್ಯೆ ನಿವಾರಣೆಗೆ ಸ್ಚಚ್ಛತೆಯೇ ಸೂತ್ರವಾಗಿದೆ.</blockquote><span class="attribution">ಡಾ. ಶರದ್ ಕುಲಕರ್ಣಿ, ಆಯುರ್ವೇದ ವೈದ್ಯರು, ಬೆಂಗಳೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳೆಯುವ ಮಕ್ಕಳಲ್ಲಿ ಪೋಷಕಾಂಶದ ಕೊರತೆಯುಂಟುವಾಗುವಂತೆ ಮಾಡಿ, ಶಕ್ತಿಯನ್ನು ಕುಂದಿಸುವುದು ಜಂತು ಹುಳುಗಳು. </p><p>ಸಾಮಾನ್ಯವಾಗಿ ಆರು ವರ್ಷದ ಒಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜಂತು ಹುಳುಗಳು, ರಕ್ತಹೀನತೆ, ಸುಸ್ತು, ಏಕಾಗ್ರತೆಯ ಕೊರತೆ, ಮಲವಿಸರ್ಜನೆಯ ಸಂದರ್ಭದಲ್ಲಿ ರಕ್ತ ಹೋಗುವಂತಹ ಸಮಸ್ಯೆಗಳನ್ನು ಎದುರಿಸುವಂತೆ ಮಾಡುತ್ತವೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದೂ ಇದೇ ಕಾರಣಕ್ಕೆ.</p><p>ಜಂತು ಹುಳುಗಳ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಫೆಬ್ರುವರಿ 10ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಆಚರಿಸಲಾಗುತ್ತದೆ. </p><p><strong>ಜಂತು ಹುಳುಗಳಾಗಲು ಮುಖ್ಯ ಕಾರಣಗಳೆಂದರೆ...</strong></p><ul><li><p>ಜಂತುಹುಳುವಿಗೆ ಮುಖ್ಯ ಕಾರಣ ಅಶುದ್ಧತೆ. ಮಕ್ಕಳು ಮಣ್ಣು, ನೀರಿನಲ್ಲಿ ಆಟವಾಡುವುದು ಹೆಚ್ಚು. ಆಟವಾಡಿ, ಕೈ ಬಾಯಿ ತೊಳೆಯದೆ ಆಹಾರ ಸೇವಿಸುತ್ತಾರೆ. ಆ ಮೂಲಕ ಅವುಗಳು ದೇಹದೊಳಗೆ ಸೇರಿಕೊಳ್ಳುತ್ತವೆ. </p></li><li><p>ಕೆಲಮೊಮ್ಮೆ ಚಪ್ಪಲಿ ಧರಿಸದೆ ಬರಿಗಾಲಿನಲ್ಲಿ ಮಣ್ಣಿನ ಮೇಲೆ ನಡೆದಾಡಿದರೂ ಜಂತುಹುಳುಗಳು ದೇಹವನ್ನು ಸೇರುತ್ತವೆ. ಚಪ್ಪಲಿ ಧರಿಸದೆ ಇದ್ದಾಗ ಕಾಲನ್ನು ಕಚ್ಚಿ ಆ ಗಾಯದ ಮೂಲಕ ದೇಹವನ್ನು ಪ್ರವೇಶಿಸುತ್ತವೆ.</p></li><li><p>ಕುಡಿಯುವ ನೀರು ಶುದ್ಧವಾಗಿ ಇಲ್ಲದಿದ್ದರೆ, ಶುಚಿಯಾದ ಆಹಾರ ಸೇವನೆ ಮಾಡದಿದ್ದರೆ ಅಥವಾ ಮಾಂಸಹಾರಿಗಳಾಗಿದ್ದರೆ ಅರೆಬೆಂದ ಮಾಂಸವನ್ನು ತಿನ್ನುವುದರಿಂದಲೂ ಜಂತುಹುಳುಗಳು ಕಾಡುತ್ತವೆ. </p></li></ul><p><strong>ಹೀಗೆ ನಿಭಾಯಿಸಿ</strong></p><ul><li><p>ಸಾಧ್ಯವಾದಷ್ಟು ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ. ನೆಲಕ್ಕೆ ಬಿದ್ದ ಆಹಾರವನ್ನು ಅಥವಾ ಹಳಸಿದ, ಫ್ರಿಡ್ಜ್ನಲ್ಲಿಟ್ಟ ಆಹಾರವನ್ನು ಮಕ್ಕಳಿಗೆ ನೀಡಬೇಡಿ.</p></li><li><p>ಜಂಕ್ಫುಡ್, ಹೊರಗಿನ ಆಹಾರವನ್ನು ಮಕ್ಕಳಿಗೆ ನೀಡಬೇಡಿ. ಇದರಿಂದ ಹೊಟ್ಟೆಯಲ್ಲಿ ಜಂತು ಹುಳುಗಳು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.</p></li><li><p>ಮಕ್ಕಳಲ್ಲಿ ಗುದದ್ವಾರ ಜಾಗ ಸ್ಚಚ್ಛವಾಗಿರುವಂತೆ ನೋಡಿಕೊಳ್ಳಿ. ಮಲ, ಮೂತ್ರ ವಿಸರ್ಜನೆ ಬಳಿಕ ಬಿಸಿ ನೀರಿನಿಂದ ಶುಚಿಗೊಳಿಸಲು ಮರೆಯದಿರಿ.</p></li><li><p>ಆಟವಾಡಿ ಬಂದ ಮೇಲೆ ಮಕ್ಕಳ ಕೈ ಕಾಲುಗಳನ್ನು ಸ್ವಚ್ಛಗೊಳಿಸಿದ ಬಳಿಕವೇ ಆಹಾರ ನೀಡಿ.</p></li><li><p>ಆಗಾಗ ಸೋರೆಕಾಯಿ ಅಥವಾ ಹಾಗಲಕಾಯಿ ಜ್ಯೂಸ್ ನೀಡುತ್ತಿರಿ. ಇದರಿಂದ ರಕ್ತವೂ ಶುದ್ಧವಾಗುತ್ತದೆ, ಜಂತು ಹುಳುಗಳ ಸಮಸ್ಯೆಯೂ ಕಾಡದು. ಆದರೆ ನೆನಪಿಡಿ ಮಕ್ಕಳಿಗೆ 2 ಅಥವಾ 3 ಎಂ.ಎಲ್ನಷ್ಟು ಮಾತ್ರ ನೀಡಿ.</p></li></ul>.<div><blockquote>ಮುಖ್ಯವಾಗಿ ಉಗುರು ಕಚ್ಚುವ ಅಭ್ಯಾಸವಿದ್ದರೆ ಜಂತು ಹುಳುಗಳ ಸಮಸ್ಯೆ ಕಾಡುತ್ತದೆ. ಉಗುರುಗಳ ಮೂಲಕ ಕೊಳೆ ಹೊಟ್ಟೆ ಸೇರಿ ಜಂತು ಹುಳುಗಳಾಗುವಂತೆ ಮಾಡುತ್ತದೆ. ದೊಡ್ಡವರಿಗೂ ಜಂತು ಹುಳು ಸಮಸ್ಯೆ ಕಾಡುತ್ತದೆ. ಈ ಸಮಸ್ಯೆ ನಿವಾರಣೆಗೆ ಸ್ಚಚ್ಛತೆಯೇ ಸೂತ್ರವಾಗಿದೆ.</blockquote><span class="attribution">ಡಾ. ಶರದ್ ಕುಲಕರ್ಣಿ, ಆಯುರ್ವೇದ ವೈದ್ಯರು, ಬೆಂಗಳೂರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>