ಶಿವರಾತ್ರಿ ಬಂತಲ್ಲ. ಚಳಿಗಾಲ ಶಿವಶಿವಾ ಎಂದು ಹೋಗಿ ಬಿಡುತ್ತದೆ ಎಂಬ ವಾಡಿಕೆ ಮಾತು ಬಲು ಪ್ರಸಿದ್ಧ. ಇಂತಹ ಚಳಿ ದಿನ ಕಳೆದು ಸೆಕೆಗಾಲ ಆರಂಭದ ಋತು ಸಂಧಿಯ ಸಂದರ್ಭ. ಭೂಮಿ ಮತ್ತು ದೇಹದಲ್ಲಿ ನಾನಾ ಬದಲಾವಣೆಗಳ ಪರ್ವ. ಅಂತಹ ಸಂದರ್ಭಗಳಲ್ಲಿ ಹೊಸ ಸಮಸ್ಯೆಗಳು ದಾಂಗುಡಿಯಿಡುವವು. ಮೂತ್ರ ಎಂಬುದು ನಮ್ಮ ದೇಹದಿಂದ ಹೊರಹೋಗಬೇಕಾದ ‘ಮಲ’. ಅದಕ್ಕೆ ಸಂಬಂಧಿಸಿದಂತೆ ಸಮಸ್ಯೆ ಕಾಡುವವು. ತಡೆ ಮತ್ತು ಪರಿಹಾರದ ಬಗೆಗೆ ಆಯುರ್ವೇದದ ಉಪಚಾರಗಳತ್ತ ಇರಲಿ ನಮ್ಮ ಚಿತ್ತ.