<p>ಬಾಲ್ಯಾವಸ್ಥೆಯಲ್ಲಿ ನಿಂದನೆ ಅಥವಾ ತಾತ್ಸಾರದಿಂದ ನರಳಿದ ಮಕ್ಕಳು ಹರೆಯಕ್ಕೆ ಬಂದ ಮೇಲೆ ಖಿನ್ನತೆಗೆ ಗುರಿಯಾಗುವ ಸಾಧ್ಯತೆ ಹೆಚ್ಚುತ್ತದೆ ಎಂದು ಸಂಶೋಧನೆಯೊಂದು ವರದಿ ಮಾಡಿದೆ.<br /> <br /> ಬಾಲ್ಯಾವಸ್ಥೆಯಲ್ಲಿ ಅನುಭವಿಸಿದ ಹಿಂಸೆ ಅಥವಾ ಪೀಡನೆಯು ಎರಡು ರೀತಿಯ ಅಪಾಯಗಳಿಗೆ ಕಾರಣವಾಗುತ್ತದೆ. ಇದು ಅವರನ್ನು ವಿವಿಧ ಹರವುಗಳುಳ್ಳ ಹಾಗೂ ದೀರ್ಘಕಾಲಿಕ ಖಿನ್ನತೆಗೆ ಗುರಿಮಾಡುತ್ತದೆ. ಸುಮಾರು 23 ಸಾವಿರ ಜನರ ಮೇಲೆ ನಡೆಸಲಾದ ಅಧ್ಯಯನದ ವಿಶ್ಲೇಷಣೆಯಿಂದ ಈ ಸಂಗತಿ ತಿಳಿದು ಬಂದಿದೆ. <br /> <br /> ಬ್ರಿಟನ್ (ಯುಕೆ)ನ ಲಂಡನ್ ಇನ್ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ ಕಿಂಗ್ ಕಾಲೇಜ್ನ ತಂಡ ಈ ಸಂಶೋಧನೆ ಕೈಗೊಂಡಿದ್ದು, ಈ ವರದಿಯು `ಅಮೆರಿಕನ್ ಜರ್ನಲ್ ಆಫ್ ಸೈಕಿಯಾಟ್ರಿ~ಯ ಮುಂದಿನ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿದೆ. <br /> <br /> `ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಈ ಸಮಸ್ಯೆಗೆ ಗುರಿಯಾದವರನ್ನು ಗುರುತಿಸುವುದು ಮಹತ್ವದ ಸಂಗತಿ. ಆದರೆ ಅವರು ಔಷಧ- ಉಪಚಾರ ಹಾಗೂ ಕೌನ್ಸೆಲಿಂಗ್ ಒಳಗೊಂಡತೆ ಯಾವ ರೀತಿಯ ಚಿಕಿತ್ಸೆಗೂ ಸರಿಯಾಗಿ ಸ್ಪಂದಿಸುವುದಿಲ್ಲ ಎನ್ನುವುದು ಗಮನಾರ್ಹ~ ಎಂದು ಹಿರಿಯ ಸಂಶೋಧಕ ಆಂಡ್ರೆಯಾ ಡ್ಯಾನೆಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. <br /> <br /> ಬಾಲ್ಯಾವಸ್ಥೆಯ ಪೀಡನೆಯು ದೈಹಿಕ, ಲೈಂಗಿಕ ಅಥವಾ ಮಾನಸಿಕ ಹಿಂಸೆಯನ್ನು ಒಳಗೊಂಡಿರಬಹುದು. ಅಂತಹ ಸ್ಥಿತಿಯಲ್ಲಿರುವ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಮುಂದೆ ಅವರು ಖಿನ್ನತೆಗೆ ಗುರಿಯಾಗುವುದನ್ನು ತಪ್ಪಿಸಬಹುದು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.<br /> <br /> ರೋಗಿಗಳ ಪೀಡನೆಯ ಇತಿಹಾಸವನ್ನು ತಿಳಿದುಕೊಂಡಿರುವುದು ಅವರ ಚಿಕಿತ್ಸೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವೈದ್ಯರಿಗೆ ಸಹಾಯಕವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಲ್ಯಾವಸ್ಥೆಯಲ್ಲಿ ನಿಂದನೆ ಅಥವಾ ತಾತ್ಸಾರದಿಂದ ನರಳಿದ ಮಕ್ಕಳು ಹರೆಯಕ್ಕೆ ಬಂದ ಮೇಲೆ ಖಿನ್ನತೆಗೆ ಗುರಿಯಾಗುವ ಸಾಧ್ಯತೆ ಹೆಚ್ಚುತ್ತದೆ ಎಂದು ಸಂಶೋಧನೆಯೊಂದು ವರದಿ ಮಾಡಿದೆ.<br /> <br /> ಬಾಲ್ಯಾವಸ್ಥೆಯಲ್ಲಿ ಅನುಭವಿಸಿದ ಹಿಂಸೆ ಅಥವಾ ಪೀಡನೆಯು ಎರಡು ರೀತಿಯ ಅಪಾಯಗಳಿಗೆ ಕಾರಣವಾಗುತ್ತದೆ. ಇದು ಅವರನ್ನು ವಿವಿಧ ಹರವುಗಳುಳ್ಳ ಹಾಗೂ ದೀರ್ಘಕಾಲಿಕ ಖಿನ್ನತೆಗೆ ಗುರಿಮಾಡುತ್ತದೆ. ಸುಮಾರು 23 ಸಾವಿರ ಜನರ ಮೇಲೆ ನಡೆಸಲಾದ ಅಧ್ಯಯನದ ವಿಶ್ಲೇಷಣೆಯಿಂದ ಈ ಸಂಗತಿ ತಿಳಿದು ಬಂದಿದೆ. <br /> <br /> ಬ್ರಿಟನ್ (ಯುಕೆ)ನ ಲಂಡನ್ ಇನ್ಸ್ಟಿಟ್ಯೂಟ್ ಆಫ್ ಸೈಕಿಯಾಟ್ರಿ ಕಿಂಗ್ ಕಾಲೇಜ್ನ ತಂಡ ಈ ಸಂಶೋಧನೆ ಕೈಗೊಂಡಿದ್ದು, ಈ ವರದಿಯು `ಅಮೆರಿಕನ್ ಜರ್ನಲ್ ಆಫ್ ಸೈಕಿಯಾಟ್ರಿ~ಯ ಮುಂದಿನ ಸಂಚಿಕೆಯಲ್ಲಿ ಪ್ರಕಟಗೊಳ್ಳಲಿದೆ. <br /> <br /> `ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಈ ಸಮಸ್ಯೆಗೆ ಗುರಿಯಾದವರನ್ನು ಗುರುತಿಸುವುದು ಮಹತ್ವದ ಸಂಗತಿ. ಆದರೆ ಅವರು ಔಷಧ- ಉಪಚಾರ ಹಾಗೂ ಕೌನ್ಸೆಲಿಂಗ್ ಒಳಗೊಂಡತೆ ಯಾವ ರೀತಿಯ ಚಿಕಿತ್ಸೆಗೂ ಸರಿಯಾಗಿ ಸ್ಪಂದಿಸುವುದಿಲ್ಲ ಎನ್ನುವುದು ಗಮನಾರ್ಹ~ ಎಂದು ಹಿರಿಯ ಸಂಶೋಧಕ ಆಂಡ್ರೆಯಾ ಡ್ಯಾನೆಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. <br /> <br /> ಬಾಲ್ಯಾವಸ್ಥೆಯ ಪೀಡನೆಯು ದೈಹಿಕ, ಲೈಂಗಿಕ ಅಥವಾ ಮಾನಸಿಕ ಹಿಂಸೆಯನ್ನು ಒಳಗೊಂಡಿರಬಹುದು. ಅಂತಹ ಸ್ಥಿತಿಯಲ್ಲಿರುವ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಮುಂದೆ ಅವರು ಖಿನ್ನತೆಗೆ ಗುರಿಯಾಗುವುದನ್ನು ತಪ್ಪಿಸಬಹುದು ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.<br /> <br /> ರೋಗಿಗಳ ಪೀಡನೆಯ ಇತಿಹಾಸವನ್ನು ತಿಳಿದುಕೊಂಡಿರುವುದು ಅವರ ಚಿಕಿತ್ಸೆಯ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವೈದ್ಯರಿಗೆ ಸಹಾಯಕವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>