ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ
Published 17 ಫೆಬ್ರುವರಿ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಾಹನಗಳ ಬಿಡಿ ಭಾಗ ಮಾರಾಟಗಾರರು ಮತ್ತು ರಿಪೇರಿ ಮಾಡುವವರಿಗೆ ಬಿಡುವಿಲ್ಲದ ದಿನ. ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆ ಆಗಲಿದೆ. ದೈವಾನುಗ್ರಹದಿಂದಾಗಿ ಹಿಡಿದ ಕೆಲಸಗಳು ದಡ ಸೇರುವುದು.
ವೃಷಭ
ವಾಣಿಜ್ಯೋದ್ಯಮ ಮಂದಿಗೆ ಇಂದು ವ್ಯವಹಾರದಲ್ಲಿ ಹೆಚ್ಚಿನ ಬಂಡವಾಳ ತೊಡಗಿಸಲು ಉತ್ತಮ ದಿನವಾಗಿದೆ. ವ್ಯಾಪಾರ ಕ್ಷೇತ್ರದಲ್ಲಿನ ನಿಮ್ಮ ಪೈಪೋಟಿಗಾರರಿಗೆ ಬಹಳ ಹಿಂದುಳಿಕೆಯ ದಿನವಾಗಲಿದೆ.
ಮಿಥುನ
ಗಂಭೀರ ಹಂತದಲ್ಲಿರುವ ನಿಮ್ಮ ವೈಯಕ್ತಿಕ ಹಾಗೂ ಔದ್ಯೋಗಿಕ ಸಂಬಂಧಗಳನ್ನು ಸರಿಪಡಿಸಿಕೊಳ್ಳಲು ಈ ದಿನ ಯಶಸ್ವಿಯಾಗುವಿರಿ. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು.
ಕರ್ಕಾಟಕ
ಈ ದಿನದ ಪರಿಸ್ಥಿತಿಗಳನ್ನು ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ಸರಳ ಸ್ವಭಾವದಿಂದ ಹೆಚ್ಚಿನ ಮೆಚ್ಚುಗೆ ಪಡೆಯಬಹುದು. ಪಾಲುದಾರಿಕೆ ಒಪ್ಪಂದ ಏರ್ಪಡಲಿದೆ.
ಸಿಂಹ
ನಿಮ್ಮ ವಿಶಾಲ ಮನೋಭಾವದ ಗುಣದಿಂದಾಗಿ ನಿಮಗೆ ದೇವರ ರಕ್ಷಣೆ ಪ್ರಾಪ್ತಿಯಾಗಲಿದೆ. ನಿಮ್ಮ ಆಹಾರ ಶೈಲಿಯಿಂದ ಆರೋಗ್ಯ ಹದಗೆಡುವ ಸಂಭವವಿದೆ. ಕೆಲಸದ ನಿಮಿತ್ತ ಮಗಳನ್ನು ವಿದೇಶಕ್ಕೆ ಕಳುಹಿಸುವಿರಿ.
ಕನ್ಯಾ
ಗೃಹ ನಿರ್ಮಾಣ ಮತ್ತು ಸ್ವತ್ತು ಸಂಪಾದನೆಯಂತಹ ಕಾರ್ಯಗಳ ಸಂಭವವಿದೆ. ಈ ತರಹದ ವಿಷಯದಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಕಾಲ ಕೂಡಿಬಂದಿದೆ. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ.
ತುಲಾ
ಸಹೋದ್ಯೋಗಿಗಳಲ್ಲಿ ಪ್ರೀತಿಯಿಂದ ವರ್ತಿಸುವುದರಿಂದ ನಿಮ್ಮ ಕೆಲಸ ಸರಾಗವಾಗಿ ಸಾಗಲಿದೆ. ಕೌಟುಂಬಿಕ ಸಮಸ್ಯೆಗಳನ್ನು ಎಲ್ಲರೂ ಮೆಚ್ಚುವಂತೆ ಪರಿಹರಿಸಿಕೊಳ್ಳುವ ಸಾಮರ್ಥ್ಯ ವೃದ್ಧಿಯಾಗಲಿದೆ.
ವೃಶ್ಚಿಕ
ಸ್ನೇಹಿತನ ಹಣವನ್ನು ದಿನದಾಂತ್ಯಕ್ಕೆ ಹಿಂದಿರುಗಿಸುವಿರಿ. ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು, ನವ ಉಲ್ಲಾಸ ಕಾಣಲಿದ್ದೀರಿ. ಕಟ್ಟಡ ಗುತ್ತಿಗೆದಾರರಿಗೆ ಆರ್ಥಿಕವಾಗಿ ನಷ್ಟ ಮತ್ತು ಕಾರ್ಮಿಕರ ಕೊರತೆಯು ಉಂಟಾಗಲಿದೆ.
ಧನು
ಮನೆಯ ಜವಾಬ್ದಾರಿಯನ್ನು ಮಗನಿಗೆ ವಹಿಸುವ ಆಲೋಚನೆ ಬರಲಿದೆ. ಆದರೆ ಯಾವುದೇ ತರಹದ ತೀರ್ಮಾನ ತೆಗೆದುಕೊಳ್ಳಬೇಡಿ. ಹಲವು ದಿನಗಳ ಬಳಿಕ ಹಣಕಾಸು ಪರಿಸ್ಥಿತಿ ಸುಧಾರಣೆಗೊಳ್ಳುವುದು.
ಮಕರ
ಬಂದ ಅವಕಾಶವನ್ನು ವಿವೇಚನೆಯಿಂದ ಸದುಪಯೋಗಪಡಿಸಿಕೊಳ್ಳಿ. ನಿಮ್ಮಲ್ಲಿರುವ ಸಹಾಯ ಮನೋಭಾವ ನಿಮ್ಮನ್ನು ಮಿಕ್ಕವರೆಲ್ಲರಿಗಿಂತ ವಿಭಿನ್ನವಾದ ಸ್ಥಾನದಲ್ಲಿ ನಿಲ್ಲಿಸಲಿದೆ. ಸಂಬಂಧಿಕರೆಲ್ಲ ಹತ್ತಿರವಾಗುತ್ತಾರೆ.
ಕುಂಭ
ಕಾರ್ಯಕ್ಷೇತ್ರದಲ್ಲಿ ಆಗಾಗ ಪ್ರಯತ್ನ ಬಲಕ್ಕೆ ಅಡ್ಡಿ ಆತಂಕಗಳಿದ್ದರೂ ಈ ದಿನ ನಿಮ್ಮ ಕಾರ್ಯ ಸಾಧನೆಯಲ್ಲಿ ಜಯ ಕಾಣುವುದರ ಬಗ್ಗೆ ಸಂದೇಹವಿಲ್ಲ. ಪೊಲೀಸರಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ.
ಮೀನ
ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸ್ವಲ್ಪ ಮಟ್ಟಿನ ಹಿನ್ನಡೆಯಾಗಲಿದೆ. ಗುತ್ತಿಗೆ ಕೆಲಸಗಾರರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಾಲ ಮಾಡುವ ಯೋಚನೆ ಕೈ ಬಿಡುವುದು ಉತ್ತಮ.