ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರಗಳಲ್ಲಿ ಲಾಭ ಸಿಗಲಿದೆ
Published 2 ಅಕ್ಟೋಬರ್ 2025, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೈಯಕ್ತಿಕ ಕಾರ್ಯದೊತ್ತಡದ ನಡುವೆ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಲು, ರಾಜಕೀಯ ಸೇರಲು ಆಹ್ವಾನ ಬರಲಿದೆ. ಅದರ ಪರಿಣಾಮವಾಗಿ ಮುಂದಿನ ಹಾದಿಯು ಗೊಂದಲಕ್ಕೆ ಒಳಗಾಗುವುದು.
02 ಅಕ್ಟೋಬರ್ 2025, 22:30 IST
ವೃಷಭ
ಆಫೀಸಿನಲ್ಲಿ ಧನಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಲು ಉತ್ತಮ ಸಮಯ. ಹೊಸ ಜನರ ಭೇಟಿಯಾಗುವುದು. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಬಹಳಷ್ಟು ಜಾಣತನ ತೋರಬೇಕಾಗುವುದು.
02 ಅಕ್ಟೋಬರ್ 2025, 22:30 IST
ಮಿಥುನ
ಸಂಬಂಧಗಳಲ್ಲಿ ನಂಬಿಕೆ ಉಳಿಸಿಕೊಳ್ಳುವುದು ಮುಖ್ಯ. ಆರ್ಥಿಕ ಪರಿಸ್ಥಿತಿಗೆ ಕಾರ್ಯಗಳನ್ನು ಕೈಗೊಳ್ಳುವುದು ಒಳ್ಳೆಯದು. ಆದಾಯ ಹೆಚ್ಚಲು ವಾಮಮಾರ್ಗ ಹಿಡಿಯುವುದು ಭವಿಷ್ಯಕ್ಕೆ ಅಪಾಯ.
02 ಅಕ್ಟೋಬರ್ 2025, 22:30 IST
ಕರ್ಕಾಟಕ
ವ್ಯವಸಾಯಗಾರರು ಇಲಾಖೆಯವರಿಂದ ಸಹಾಯ ಪಡೆದುಕೊಳ್ಳುವುದು ಅನಿವಾರ್ಯ. ನಿರ್ದಿಷ್ಟ ಕೆಲಸಗಳಿಗೆ ಗಮನ ಕೊಡುವುದು ಒಳ್ಳೆಯದು. ಆಟೊಮೊಬೈಲ್ ಎಂಜಿನಿಯರ್ಗಳಿಗೆ ವಿಶೇಷ ಲಾಭ ಪ್ರಾಪ್ತಿ.
02 ಅಕ್ಟೋಬರ್ 2025, 22:30 IST
ಸಿಂಹ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿಯಿಂದ ಯಶಸ್ಸು ಪಡೆಯುವಿರಿ. ವೃತ್ತಿ ಜೀವನ ಹಾಗೂ ದಿನಚರಿಯು ಎಂದಿನಂತೆ ವ್ಯವಸ್ಥಿತವಾಗಿರುವುದು. ರಾಜಕೀಯ ವ್ಯಕ್ತಿಗಳು ಹೊಸ ಹುರುಪು ಕಾಣಲಿದ್ದೀರಿ.
02 ಅಕ್ಟೋಬರ್ 2025, 22:30 IST
ಕನ್ಯಾ
ಕೆಲಸ ಕಾರ್ಯಗಳಲ್ಲಿ ಕಷ್ಟ-ನಷ್ಟಗಳು ಎದುರಾಗಬಹುದು. ಕರ್ತವ್ಯವನ್ನು ನಿರ್ಲಕ್ಷಿಸಬೇಡಿ. ಹಿಮ್ಮುಖ ಚಲನೆಯೂ ಸರಿಯಲ್ಲ. ಬದುಕನ್ನು ಒಂದು ವ್ಯವಸ್ಥೆಗೆ ತರಲು ಮಾರ್ಗದರ್ಶಕರ ಸಲಹೆಯನ್ನು ಪಡೆಯಿರಿ.
02 ಅಕ್ಟೋಬರ್ 2025, 22:30 IST
ತುಲಾ
ವೈದ್ಯರ ಸಲಹೆಯಂತೆ ದೇಹಾರೋಗ್ಯಕ್ಕಾಗಿ ಆಹಾರ ಸೇವನೆಯಲ್ಲಿ ಕೆಲವು ನಿರ್ಬಂಧಗಳನ್ನು, ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು. ಅವಿವಾಹಿತರಿಗೆ ವಿವಾಹಯೋಗ ಕೂಡಿ ಬರುವುದು.
02 ಅಕ್ಟೋಬರ್ 2025, 22:30 IST
ವೃಶ್ಚಿಕ
ನೇರ, ದಿಟ್ಟ ಮಾತುಗಳು ಇತರರ ಮನಸ್ಸಿಗೆ ನೋವು ಆಗದಿರುವ ರೀತಿಯಲ್ಲಿ ಇರಲಿ. ಮಕ್ಕಳ ಹಿತಾಸಕ್ತಿಯ ಕುರಿತು ಹೆಚ್ಚಿನ ಗಮನವಿರಲಿ. ಸ್ನೇಹಿತರಿಬ್ಬರ ವಾದ-ವಿವಾದದಲ್ಲಿ ಮೌನ ಕಾಯ್ದುಕೊಳ್ಳುವುದೇ ಒಳಿತು.
02 ಅಕ್ಟೋಬರ್ 2025, 22:30 IST
ಧನು
ರಾಜಕೀಯ ವಲಯದಲ್ಲಿ ಗೌಪ್ಯತೆ ಮುಖ್ಯ ಮಾತುಕತೆ ನಡೆಸಬೇಕಾಗುವುದು. ಕಲಾವಿದರಿಗೆ ಮುಂಬರುವ ಸ್ಪರ್ಧೆಗಳಿಗೆ ತಯಾರಿ ಮಾಡಿಕೊಳ್ಳಲು ಶುಭದಿನ. ಷೇರು ವ್ಯವಹಾರಗಳಿಂದ ಲಾಭಾಂಶ ಪಡೆದುಕೊಳ್ಳುವಿರಿ.
02 ಅಕ್ಟೋಬರ್ 2025, 22:30 IST
ಮಕರ
ವಿಪರೀತ ಕೆಲಸಗಳಿಂದ ದೇಹಾಲಸ್ಯ ತೋರಿ ವಿಶ್ರಾಂತಿ ಬಯಸುವಿರಿ. ಕೆಲವೊಂದು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಪ್ರಸಂಗ ಬರಬಹುದು. ದೇಹದಲ್ಲಿ ಕಫ ಅಧಿಕ್ಯವಾಗಿರುವುದರಿಂದ ಅನಾರೋಗ್ಯ ಉಂಟಾಗಬಹುದು.
02 ಅಕ್ಟೋಬರ್ 2025, 22:30 IST
ಕುಂಭ
ಹಲವು ದಿನಗಳಿಂದ ಅನುಭವಿಸುತ್ತಿರುವ ಅನಾರೋಗ್ಯ ಸಮಸ್ಯೆ ಉಪಶಮನವಾಗುವುದು. ಸಾಂಸಾರಿಕವಾಗಿ ಪತಿ–ಪತ್ನಿಯ ಅನ್ಯೋನ್ಯತೆ ಕನಸು ನನಸಾಗಲಿದೆ. ಕಾಫಿ ಬೆಳೆಗಾರರಿಗೆ ಲಾಭ ಇರಲಿದೆ.
02 ಅಕ್ಟೋಬರ್ 2025, 22:30 IST
ಮೀನ
ಅನ್ಯರನ್ನು ಉದಾಹರಣೆಯಾಗಿ ತೆಗೆದುಕೊಂಡು ನೈಜತೆ ಬದಲು ಮಾಡಿಕೊಳ್ಳುವುದು ಸರಿಯಲ್ಲ. ಆಹಾರದಲ್ಲಿ ಹಿತ-ಮಿತವಿರಲಿ. ಅಜೀರ್ಣದ ಸಮಸ್ಯೆ ಕಾಡಬಹುದು. ಸಮಯ ವ್ಯರ್ಥ ಮಾಡಿದರೆ ಧನ ನಷ್ಟವಾಗಬಹುದು.
02 ಅಕ್ಟೋಬರ್ 2025, 22:30 IST