<p><strong>ಗುವಾಹಟಿ</strong>: ದಕ್ಷಿಣ ಆಫ್ರಿಕಾ ತಂಡದ ವೇಗಿ ಕಗಿಸೊ ರಬಾಡ ಭಾರತ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸುವಾಗ ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದರು. ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆ ಅವರು ಸರಣಿಯ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. </p><p>ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ, ‘ಗಾಯದಿಂದಾಗಿ ಮೊದಲ ಟೆಸ್ಟ್ ಪಂದ್ಯ ತಪ್ಪಿಸಿಕೊಂಡಿದ್ದ ರಬಾಡ ಅವರು ಎರಡನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ’ ಎಂದು ತಿಳಿಸಿದ್ದಾರೆ.</p><p>ಗುವಾಹಟಿ ಪಿಚ್ ನೋಡಿದರೆ, ಇದು ಮೊದಲ ಎರಡು ದಿನ ಬ್ಯಾಟಿಂಗ್ಗೆ ಸಹಾಯ ಮಾಡುವ ಸಾಧ್ಯತೆ ಇದೆ. ನಂತರ ಮೂರನೇ ದಿನದಿಂದ ನಿಧಾನಗತಿಯ ಬೌಲರ್ಗಳಿಗೆ ಅನೂಕಲವಾಗುವ ಸಾಧ್ಯತೆ ಇದೆ ಎಂದು ಬವುಮಾ ಹೇಳಿದರು.</p><p>‘ಈ ಪಿಚ್ ಹೊಸದಾಗಿದೆ ಮತ್ತು ಕೊಲ್ಕತ್ತಗೆ ಹೋಲಿಸಿದರೆ ಹೆಚ್ಚು ಸ್ಥಿರವಾಗಿರುವಂತೆ ಕಾಣಿಸುತ್ತಿದೆ. ನಾವು ಬೆಳಿಗ್ಗೆ ಮತ್ತೊಮ್ಮೆ ಪಿಚ್ ನೋಡಿಕೊಂಡು ರಬಾಡ ಬದಲು ಯಾರನ್ನು ಆಡಿಸಬೇಕು ಎಂಬುದನ್ನು ನಿರ್ಧರಿಸುತ್ತೇವೆ’ ಎಂದಿದ್ದಾರೆ. </p>.IND vs SA Test | ಭಾರತ ತಂಡಕ್ಕೆ ಹಿನ್ನಡೆ: ಎರಡನೇ ಪಂದ್ಯಕ್ಕೆ ಗಿಲ್ ಅಲಭ್ಯ.ವಿಶ್ಲೇಷಣೆ: ತೆಂಬಾ ಬವುಮಾ.. ಟೆಸ್ಟ್ ಕ್ರಿಕೆಟ್ ಬೆಳ್ಳಿಚುಕ್ಕಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ</strong>: ದಕ್ಷಿಣ ಆಫ್ರಿಕಾ ತಂಡದ ವೇಗಿ ಕಗಿಸೊ ರಬಾಡ ಭಾರತ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕೂ ಮುನ್ನ ಅಭ್ಯಾಸ ನಡೆಸುವಾಗ ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿದ್ದರು. ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆ ಅವರು ಸರಣಿಯ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. </p><p>ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ, ‘ಗಾಯದಿಂದಾಗಿ ಮೊದಲ ಟೆಸ್ಟ್ ಪಂದ್ಯ ತಪ್ಪಿಸಿಕೊಂಡಿದ್ದ ರಬಾಡ ಅವರು ಎರಡನೇ ಟೆಸ್ಟ್ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ’ ಎಂದು ತಿಳಿಸಿದ್ದಾರೆ.</p><p>ಗುವಾಹಟಿ ಪಿಚ್ ನೋಡಿದರೆ, ಇದು ಮೊದಲ ಎರಡು ದಿನ ಬ್ಯಾಟಿಂಗ್ಗೆ ಸಹಾಯ ಮಾಡುವ ಸಾಧ್ಯತೆ ಇದೆ. ನಂತರ ಮೂರನೇ ದಿನದಿಂದ ನಿಧಾನಗತಿಯ ಬೌಲರ್ಗಳಿಗೆ ಅನೂಕಲವಾಗುವ ಸಾಧ್ಯತೆ ಇದೆ ಎಂದು ಬವುಮಾ ಹೇಳಿದರು.</p><p>‘ಈ ಪಿಚ್ ಹೊಸದಾಗಿದೆ ಮತ್ತು ಕೊಲ್ಕತ್ತಗೆ ಹೋಲಿಸಿದರೆ ಹೆಚ್ಚು ಸ್ಥಿರವಾಗಿರುವಂತೆ ಕಾಣಿಸುತ್ತಿದೆ. ನಾವು ಬೆಳಿಗ್ಗೆ ಮತ್ತೊಮ್ಮೆ ಪಿಚ್ ನೋಡಿಕೊಂಡು ರಬಾಡ ಬದಲು ಯಾರನ್ನು ಆಡಿಸಬೇಕು ಎಂಬುದನ್ನು ನಿರ್ಧರಿಸುತ್ತೇವೆ’ ಎಂದಿದ್ದಾರೆ. </p>.IND vs SA Test | ಭಾರತ ತಂಡಕ್ಕೆ ಹಿನ್ನಡೆ: ಎರಡನೇ ಪಂದ್ಯಕ್ಕೆ ಗಿಲ್ ಅಲಭ್ಯ.ವಿಶ್ಲೇಷಣೆ: ತೆಂಬಾ ಬವುಮಾ.. ಟೆಸ್ಟ್ ಕ್ರಿಕೆಟ್ ಬೆಳ್ಳಿಚುಕ್ಕಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>