ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿ ಹಾಗೂ ವೈಯಕ್ತಿಕ ಜೀವನ ತೃಪ್ತಿ ಎನಿಸಲಿದೆ.
Published 1 ಫೆಬ್ರುವರಿ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ಬಳಿ ಇರುವ ಬೃಹತ್ ಯೋಜನೆಗಳಿಗೆ, ಅವಕಾಶಗಳು ಹಾಗೂ ಸನ್ನಿವೇಶಗಳು ದೊರೆತು ಜೀವಬಂದಂತಾಗುವುದು. ಬಾಕಿ ಹಣ ವಸೂಲಿಯಾಗುವುದು. ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಪ್ರಗತಿ.
ವೃಷಭ
ವಿದ್ಯಾರ್ಥಿಗಳು ಕೇವಲ ಪಠ್ಯದ ವಿಚಾರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ಹೆಚ್ಚಿನ ಉತ್ಸಾಹವನ್ನು ತೋರುವುದರಿಂದ ಮನೋಲ್ಲಾಸ ಹೆಚ್ಚುವುದು. ದೇವತಾಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಪ್ರಾಪ್ತಿ.
ಮಿಥುನ
ಕೌಟುಂಬಿಕ ಸಮಸ್ಯೆಗಳನ್ನು ಎಲ್ಲರೂ ಮೆಚ್ಚುವಂತೆ ಪರಿಹರಿಸಿಕೊಳ್ಳುವ ಸಾಮರ್ಥ್ಯ ಅಭಿವೃದ್ಧಿಯಾಗಲಿದೆ. ಪ್ರಯತ್ನ ಪಟ್ಟ ಕೆಲಸಗಳು ದಿನದ ಅಂತ್ಯಕ್ಕೆ ಫಲ ನೀಡುವುದು. ಧ್ಯಾನ ಹಾಗೂ ಭಜನೆಯಿಂದ ಮನಸ್ಸಿಗೆ ನೆಮ್ಮದಿ.
ಕರ್ಕಾಟಕ
ಯೋಜನೆಗಳನ್ನು ಇತರರ ಮುಂದೆ ಮಂಡಿಸಿ ಅವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುವಿರಿ. ಕಾಫಿ ಮತ್ತು ಕಾಳುಮೆಣಸಿನ ರಫ್ತು ವಹಿವಾಟು ಹೆಚ್ಚಲಿದೆ. ವೈವಾಹಿಕ ಜೀವನದಲ್ಲಿ ನೆಮ್ಮದಿ ಕಂಡುಬರಲಿದೆ.
ಸಿಂಹ
ಮೇಲುಸ್ತುವಾರಿ ನೋಡುವ ಹುದ್ದೆಯವರಿಗೆ ಕೆಲಸಗಾರರ ಹೊಂದಾಣಿಕೆ ತಲೆನೋವು ತರುವಂತಾಗಬಹುದು. ಕಿರುತೆರೆ ಕಲಾವಿದರಿಗೆ ಹಿರಿಯರಿಂದ ಪಡೆದ ಮಾರ್ಗದರ್ಶನ ಉಪಯೋಗಕ್ಕೆ ಬರುವುದು.
ಕನ್ಯಾ
ಸಂಸ್ಕರಿತ ಆಹಾರ ಪದಾರ್ಥಗಳ, ಬೇಳೆ ಕಾಳುಗಳ ಮಾರಾಟದಿಂದ ಲಾಭವಿದೆ. ಸ್ವಾರ್ಥಕ್ಕಾಗಿ ಕಾನೂನಿಗೆ ವಿರುದ್ಧ ಕೆಲಸವನ್ನು ಮಾಡದಿರಿ. ಆರ್ಥಿಕವಾಗಿ ಸ್ವಲ್ಪ ಮಟ್ಟಿನ ಚೇತರಿಕೆ ಕಾಣಬಹುದು.
ತುಲಾ
ಒದಗಿ ಬರಲಿರುವ ಅವಕಾಶವೊಂದನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳುವುದು ಬುದ್ಧಿಮಟ್ಟಕ್ಕೆ ಬಿಟ್ಟ ವಿಚಾರ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ತರಕಾರಿ ಮಾರಾಟಗಾರರಿಗೆ ಶುಭ ದಿನ.
ವೃಶ್ಚಿಕ
ಪೊಲೀಸ್ ಅಧಿಕಾರಿ ವರ್ಗದವರಿಗೆ ರಾಜಕೀಯದವರ ಒತ್ತಡ ಕಡಿಮೆಯಾಗಲಿದೆ. ಸ್ವತ್ತಿನ ವಿವಾದ ಬಗೆಹರಿಸಿಕೊಳ್ಳುರಿ. ಸಾತ್ವಿಕ ಹಾಗೂ ಉತ್ತಮ ನಡತೆಯಿಂದ ಜನಪ್ರಿಯತೆ ಹೊಂದುವಿರಿ.
ಧನು
ಅಧ್ಯಾಪಕ ವೃತ್ತಿಯವರಿಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರವನ್ನು ತಿಳಿದುಕೊಳ್ಳುವ ಅವಕಾಶ ಪ್ರಾಪ್ತಿ. ಲೋಹ ಮತ್ತು ಮರದ ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗುತ್ತದೆ. ಇನ್ನೊಬ್ಬರಿಗೆ ಮೋಸ ಮಾಡುವುದು ಸರಿಯಲ್ಲ.
ಮಕರ
ಬೇಡದ ವಿಷಯದಲ್ಲಿ, ಅಪರಿಚಿತ ವ್ಯಕ್ತಿಗಳಲ್ಲಿ, ಸಂಬಂಧವಿಲ್ಲದ ವಿಚಾರದಲ್ಲಿ ವಾದ ಮಾಡುವುದು ಸರಿಯಲ್ಲ. ಆಲಸ್ಯತನ ಅಭಿವೃದ್ಧಿಯನ್ನು ಹಾಳು ಮಾಡುತ್ತದೆ. ಆದ್ದರಿಂದ ಉತ್ಸಾಹಭರಿತರಾಗಿರಿ.
ಕುಂಭ
ಗೃಹ ಮಾರಾಟದ ತೀರ್ಮಾನಗಳಿಗೆ ಒಡಹುಟ್ಟಿದವರಿಂದ ಆಕ್ಷೇಪ ವ್ಯಕ್ತವಾಗಬಹುದು. ವಿದ್ಯುತ್ ವಲಯದ ಕಾರ್ಮಿಕರು ಹೆಚ್ಚಿನ ಜಾಗ್ರತೆ ವಹಿಸಿರಿ. ವಿರೋಧಗಳನ್ನು ಜಾಣ್ಮೆಯಿಂದ ನಿವಾರಿಸಿ.
ಮೀನ
ವೃತ್ತಿ ಹಾಗೂ ವೈಯಕ್ತಿಕ ಜೀವನ ತೃಪ್ತಿ ಎನಿಸಲಿದೆ. ಈ ದಿನ ನೀವು ಕೈಗೊಳ್ಳುವ ನಿರ್ಧಾರಗಳು ಮನಸ್ಸಿಗೆ ನೆಮ್ಮದಿ ತರಲಿದೆ. ಮನೆಯ ವ್ಯವಹಾರಗಳಲ್ಲಿ ಇದ್ದಂತಹ ಹಲವಾರು ತೊಡಕುಗಳು ದೂರಾಗಲಿದೆ.