ದಿನ ಭವಿಷ್ಯ: ಸೆಪ್ಟೆಂಬರ್ 20 ಬುಧವಾರ 2023– ಈ ರಾಶಿಯವರಿಗೆ ಇಂದು ವರಮಾನ ಹೆಚ್ಚಳ
Published 19 ಸೆಪ್ಟೆಂಬರ್ 2023, 20:39 IST
ಪ್ರಜಾವಾಣಿ ವಿಶೇಷ
ಮೇಷ
ವೈವಾಹಿಕ ಜೀವನವು ಸುಖಮಯವಾಗಿ ಸಾಗಲಿದೆ. ಷೇರು ಮಾರಾಟದಿಂದ ಅಧಿಕ ಲಾಭ. ವಿದ್ಯಾರ್ಥಿಗಳಿಗೆ ಗುರಿ ಮುಟ್ಟುವ ವಿಚಾರದಲ್ಲಿ ಅತಿಯಾದ ಪ್ರಯತ್ನ ಅಗತ್ಯ. ಮನರಂಜನೆಗಾಗಿ ಖರ್ಚು ಸಂಭವಿಸುವುದು.
19 ಸೆಪ್ಟೆಂಬರ್ 2023, 20:39 IST
ವೃಷಭ
ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆತು ಮುಂದಿನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಎಲ್ಲಾ ವ್ಯವಹಾರಗಳೂ ಸಾಮಾನ್ಯ ಗತಿಯಲ್ಲಿ ಮುಂದುವರಿಯಲಿದೆ.
19 ಸೆಪ್ಟೆಂಬರ್ 2023, 20:39 IST
ಮಿಥುನ
ಒರಟು ವ್ಯಕ್ತಿತ್ವದಿಂದ ಅಥವಾ ನಿಮ್ಮ ಕಹಿಯ ಮಾತುಗಳಿಂದ ಸಹಭಾಗಿಗೆ ಅಥವಾ ಮಕ್ಕಳಿಗೆ ನೋವಾಗಬಹುದು. ಜಮೀನು ಖರೀದಿ ಅಥವಾ ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ವರಮಾನ ಹೆಚ್ಚಿಸಿಕೊಳ್ಳಬಹುದು.
19 ಸೆಪ್ಟೆಂಬರ್ 2023, 20:39 IST
ಕರ್ಕಾಟಕ
ಆಡಿದ ಮಾತುಗಳನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಪ್ರಯತ್ನವಿರಲಿ. ಸ್ವಂತ ಉದ್ಯೋಗ ನಡೆಸುವವರು ಜವಾಬ್ದಾರಿಗಳನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ಗಮನಹರಿಸಿ. ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ಇರಲಿ.
19 ಸೆಪ್ಟೆಂಬರ್ 2023, 20:39 IST
ಸಿಂಹ
ತರಬೇತಿ ಹೊಂದಿದ ಮರದ ಕೆತ್ತನೆಯ ಕುಶಲಕರ್ಮಿಗಳಿಗೆ ಆದಾಯ ಮತ್ತು ಬೇಡಿಕೆ ಹೆಚ್ಚಲಿದೆ. ಕಾನೂನಿಗೆ ಗೌರವ ಕೊಡುವುದನ್ನು ಮರೆಯದಿರಿ. ಸ್ವಂತ ಉದ್ಯೋಗ ನಡೆಸುವವರ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ.
19 ಸೆಪ್ಟೆಂಬರ್ 2023, 20:39 IST
ಕನ್ಯಾ
ಕಾರ್ಖಾನೆಯ ನಿರಂತರತೆಯನ್ನು ಗಮನವಿಟ್ಟುಕೊಳ್ಳುವುದಕ್ಕಾಗಿ ಈಗಿರುವ ವ್ಯವಸ್ಥೆಗೆ ಹೊರತಾಗಿ ಪರ್ಯಾಯ ವ್ಯವಸ್ಥೆಗೆ ತಯಾರಾಗಿರಿ. ಲೇಖನಮಾಲೆಯನ್ನು ಸಿದ್ಧಪಡಿಸುವ ಹಲವು ದಿನದ ಕನಸು ಈಡೇರಲಿದೆ.
19 ಸೆಪ್ಟೆಂಬರ್ 2023, 20:39 IST
ತುಲಾ
ಕುಟುಂಬದ ಹಿರಿಯರ ಆರೋಗ್ಯ ನಷ್ಟದಿಂದಾಗಿ ಆಸ್ಪತ್ರೆಯ ತಿರುಗಾಟದ ಕ್ಲೇಶ ಉಂಟಾಗುವುದು. ಉದ್ಯೋಗದ ಕಾರಣ ಪರಸ್ಥಳದಲ್ಲಿ ವಾಸ ಮಾಡುವ ಅನಿವಾರ್ಯತೆ ಬರಬಹುದು.
19 ಸೆಪ್ಟೆಂಬರ್ 2023, 20:39 IST
ವೃಶ್ಚಿಕ
ಕಚೇರಿಯಲ್ಲಿ ಇಂದಿನ ನಿಮ್ಮ ನಿಸ್ವಾರ್ಥ ಕೆಲಸಗಳಿಂದಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಲಾಭ ಪಡೆಯುವಿರಿ. ಕಾಗದ ಕಾರ್ಖಾನೆ ಮಾಲೀಕರಿಗೆ ವರಮಾನದಲ್ಲಿ ಗಣನೀಯ ಏರಿಕೆ. ಗೃಹದಲ್ಲಿ ಶಾಂತಿ ಕಾಪಾಡಿ.
19 ಸೆಪ್ಟೆಂಬರ್ 2023, 20:39 IST
ಧನು
ಇತ್ತೀಚಿನ ದಿನದಲ್ಲಿ ಸಂಪಾದನೆಯ ವಿಚಾರದಲ್ಲಿ ವೈರಾಗ್ಯ ಹೊಂದಿರುವ ನೀವು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಪರಿಶ್ರಮದಿಂದ ದುಡಿದರೆ ಪ್ರಗತಿಯ ಹಾದಿಯನ್ನು ಕಾಣುವಿರಿ. ಮನಸ್ತಾಪ ಬೇಡ.
19 ಸೆಪ್ಟೆಂಬರ್ 2023, 20:39 IST
ಮಕರ
ದೈಹಿಕ ಕೆಲಸವನ್ನು ಮಾಡಿ ದುಡಿಮೆ ಮಾಡುತ್ತಿರುವವರು ದೇಹಕ್ಕೆ ಸ್ವಲ್ಪಮಟ್ಟಿನ ವಿಶ್ರಾಂತಿ ನೀಡಬೇಕಾಗುತ್ತದೆ. ಸ್ನೇಹಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಲಭಿಸುವುದು. ತಪ್ಪುಗಳನ್ನು ಸರಿಪಡಿಸಿಕೊಳ್ಳಿ.
19 ಸೆಪ್ಟೆಂಬರ್ 2023, 20:39 IST
ಕುಂಭ
ಚರ್ಮಸಂಬಂಧ ಅನಾರೋಗ್ಯವು ಕಾಣಿಸಿದಲ್ಲಿ ಆಯುರ್ವೇದದ ಮೊರೆ ಹೋಗುವುದರಿಂದ ಸಮಸ್ಯೆಗೆ ಶಾಶ್ವತವಾಗಿ ಉತ್ತರ ದೊರಕಲಿದೆ. ಕೈ ಬಿಟ್ಟು ಹೋಗಿದ್ದ ಯೋಜನೆ ಪುನಃ ನಿಮ್ಮನ್ನು ಅರಸಿ ಬರುವುದು.
19 ಸೆಪ್ಟೆಂಬರ್ 2023, 20:39 IST
ಮೀನ
ಸರ್ಕಾರಿ ಉದ್ಯೋಗಕ್ಕಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪರಿಪೂರ್ಣ ಪ್ರಯತ್ನ ಹಾಕುವುದು ಅಗತ್ಯ. ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬಾಧಿಸಬಹುದು ಆದ್ದರಿಂದ ಜಾಗ್ರತೆ ವಹಿಸಿರಿ.
19 ಸೆಪ್ಟೆಂಬರ್ 2023, 20:39 IST