‘ಮುಸ್ಲಿಂ ಮಹಿಳೆಯರು ಲವ್ ಜಿಹಾದ್ ಹೆಸರಿನಲ್ಲಿ ಮೋಸ ಮಾಡುತ್ತಾರೆ ಎಂದು ಸುಳ್ಳು ಹೇಳುವ ಮೂಲಕ ಸಮುದಾಯದ ಮಹಿಳೆಯರ ಕುರಿತು ಅವರು ಅಪಪ್ರಚಾರ ಮಾಡಿದ್ದಾರೆ. ಮಂಡ್ಯ ನಿವಾಸಿ ವಿದ್ಯಾರ್ಥಿನಿಯಾದ ಮುಸ್ಕಾನ್ ಕುರಿತು ಮಾತನಾಡುತ್ತಾ, ಮುಸ್ಕಾನ್ಗೆ ಅಲ್ ಕೈದಾ ಉಗ್ರ ಸಂಘಟನೆಯ ಸಂಪರ್ಕ ಇದೆ. ಅವಳ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಮಾಜಕ್ಕೆ ತಪ್ಪು ಸಂದೇಶ ನೀಡಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ಸಮಾಜದಲ್ಲಿ ಮುಸ್ಲಿಮರನ್ನು ಅನುಮಾನ ದೃಷ್ಟಿಯಿಂದ ನೋಡುವಂತಹ ವಾತಾವರಣ ಸೃಷ್ಟಿಸುವ ಸಲುವಾಗಿ ‘ಮುಸ್ಲಿಮರು ತೆರಿಗೆ ಪಾವತಿಸುವುದಿಲ್ಲ, ಮೋಸಮಾಡುತ್ತಾರೆ’ ಎಂದು ಭಟ್ ಹೇಳಿದ್ದಾರೆ. ಕೋಮು ಗಲಭೆ ನಡೆಸಲು ಹುನ್ನಾರ ಮಾಡಿರುವ, ಪ್ರಚೋದನಕಾರಿ ಭಾಷಣ, ಮುಸ್ಲಿಂ ಮಹಿಳೆಯರಿಗೆ ಅಗೌರವ ತೋರಿರುವ, ಮುಸ್ಲಿಂ ಮಹಿಳೆಯರ ಕುರಿತು ನಿಂದನತ್ಮಾಕ ಹೇಳಿಕೆ ನೀಡಿರುವ ಹಾಗೂ ಸಮುದಾಯವನ್ನು ಅವಮಾನಿಸಿರುವ ಪ್ರಭಾಕರ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸಮಿತಿ ಸದಸ್ಯರು ದೂರಿನಲ್ಲಿ ಮನವಿ ಮಾಡಿದ್ದಾರೆ.
ಸಂಘಟನೆಯ ಕಾರ್ಯದರ್ಶಿ ರುಮಾನ ತಾಜ್, ಜಿಲ್ಲಾ ಸಮಿತಿ ಸದಸ್ಯರಾದ ಫೌಜಿಯಾ ಬಾನು, ಅಯಷಾ ಹುಧಾ, ಶಬಾನ ಬಾನು ಇದ್ದರು.