ಶಾಸಕ ಪ್ರಿಯಾಂಕ್ ಖರ್ಗೆ ಅವರು ಯಾರ ವಿರುದ್ಧ ಮತ್ತು ಪರವಾಗಿಲ್ಲ. ತಮಗೆ ದೊರೆತಿರುವ ಅಧಿಕಾರವನ್ನು ಸಮಾಜದ ಏಳಿಗೆಗೆ, ಅಭಿವೃದ್ಧಿಗೆ ಬಳಸುತ್ತಿದ್ದಾರೆ. ಯಾರ ವಿರುದ್ಧ ಸೇಡಿನ ಕೆಲಸ ಮಾಡುತ್ತಿಲ್ಲ. ಅಂತಹ ಕೆಲಸಕ್ಕೆ ಅವರ ಬೆಂಬಲವೂ ಇಲ್ಲ. ಆದರೆ ಶಾಸಕ ಪ್ರಿಯಾಂಕ್ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಸಮಾಜಘಾತುಕ ಕೆಲಸದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಹೊಣೆಗಾರಿಕೆ, ಜವಾಬ್ದಾರಿಪೊಲೀಸ್ ಇಲಾಖೆಗೆ ಇದೆ. ಅದು ಸಮಾಜವನ್ನು ರಕ್ಷಿಸುವ, ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡುತ್ತದೆ. ಪೊಲೀಸರ ಕಾನೂನು ಕ್ರಮ ಪ್ರಶ್ನಿಸಲು ನ್ಯಾಯಾಲಯವಿದೆ. ಆದರೆ, ಕಾನೂನು ಪ್ರಕಾರ ಅರೋಪಿ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಗೆ ನಿಷ್ಠೆ ತೋರಿಸುವ ಅಥವಾ ರಾಜಕೀಯ ಮುಖಂಡರ, ಸರ್ಕಾರ, ಸಚಿವರ ಮೇಲೆ ಮಠಾಧೀಶರು ಪ್ರಭಾವ ಬೀರುವ ಕೆಲಸ ಮಾಡುವುದು ಸರಿಯಾದ ಮಾರ್ಗವಲ್ಲ ಎಂದು ಅವರು ಹೇಳಿದ್ದಾರೆ.