<p><strong>ವಿಜಯಪುರ:</strong> ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ಉತ್ತಮ ಮಳೆಯಾಗಿದೆ.</p> <p>ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ರೈತ ಮಳಸಿದ್ದಪ್ಪ ಸಿದ್ಧಪ ಸುಧಾಮ ಅವರಿಗೆ ಸೇರಿದ ಎಮ್ಮೆಗೆ ಸಿಡಿಲು ಬಡಿದು ಸಾವಿಗೀಡಾಗಿದೆ. </p><p>ಚಡಚಣ, ಇಂಡಿ, ಸಿಂದಗಿ, ತಾಳಿಕೋಟೆ, ನಾಲತವಾಡ ವ್ಯಾಪ್ತಿಯಲ್ಲೂ ಗುಡುಗು, ಸಿಡಿಲಿನೊಂದಿಗೆ ಉತ್ತಮ ಮಳೆಯಾಗಿದೆ.</p><p>ಚಡಚಣ ತಾಲ್ಲೂಕಿನಾದ್ಯಂತ ಸೋಮವಾರ ಮಧ್ಯಾಹ್ನ ಭಾರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಅಂಗಡಿಗಳು, ಹೋಟೆಲ್ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪತ್ರಾಸ್ ಮನೆಗಳು ಭಾಗಶಃ ನೆಲಸಮಗೊಂಡಿವೆ.</p> <p>ಚಡಚಣ ಪಟ್ಟಣದ ಹೊರ ವಲಯದಲ್ಲಿರುವ ಎಂ.ಇ.ಎಸ್. ಐಟಿಐ ಕಾಲೇಜಿನ ನಾಲ್ಕು ಕೊಠಡಿಗಳ ಚಾವಣಿ ಹಾರಿ ಹೋಗಿವೆ. ಕೊಠಡಿಗಳ ಒಳಗಡೆ ಇರುವ ಲಕ್ಷಾಂತರ ಮೌಲ್ಯದ ಕಂಪ್ಯೂಟರ್ಗಳು, ಕಾಗದ ಪತ್ರಗಳು ಮಳೆ ನೀರಿಗೆ ಆಹುತಿಯಾಗಿದ್ದು, ಅಂದಾಜು ₹ 10 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.</p> <p>ಸಮೀಪದಲ್ಲಿರುವ ಓಂ ಪ್ರಾಥಮಿಕ ಶಾಲಾ ಕಾಲೇಜಿನ ಕಿಟಕಿ ಗಾಜಗಳು ಪುಡಿ ಪುಡಿಯಾಗಿದ್ದು, ಕಂಪೌಂಡ್ ನೆಲಸಮಗೊಂಡಿದೆ.</p> <p>ರೇವತಗಾಂವ ಗ್ರಾಮದಲ್ಲಿರುವ ಬಿ.ಎಸ್.ಎನ್.ಎಲ್ ಟವರ್ವೊಂದು ನೆಲಸಮಗೊಂಡಿದೆ. ಹೊಲ ಗದ್ದೆಗಳಿಲ್ಲಿರುವ ನೂರಾರು ಗಿಡ ಮರಗಳು ಮುರಿದು ಬಿದ್ದಿವೆ. </p> <p>ಚಡಚಣ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಲ್ಪ ಮಳೆಯಾಗಿದ್ದರೆ, ಬರಡೋಲ, ಲೋಣಿ, ಝಳಕಿ ಹೋರ್ತಿ ಸೇರಿದಂತೆ ಕರ್ನಾಟಕ –ಮಹಾರಾಷ್ಟ್ರ ಗಡಿ ಅಂಚಿನಲ್ಲಿ ಭಾರಿ ಮಳೆಯಾಗಿದೆ. ಹೊಲಗಳ ಒಡ್ಡುಗಳು ತುಂಬಿ ನಿಂತಿವೆ. ಬಿಸಿಲಿನಿಂದ ಬೇಸತ್ತಿದ್ದ ಜನಕ್ಕೆ ಮಳೆ ತಂಪೆರೆಯಿತು.</p> <p>‘ಮಳೆಗಿಂತ ಬಿರುಗಾಳಿಗೆ ಚಡಚಣ ಪಟ್ಟಣ ವ್ಯಾಪ್ತಿ ಸೇರಿದಂತೆ ತಾಲ್ಲೂಕಿನಾದ್ಯಂತ ಸಾಕಷ್ಟು ಪತ್ರಾಸ್ ಮನೆಗಳು ಹಾರಿ ಹೋಗಿವೆ. ಹಲವಾರು ಮರಗಳು ಮುರುದು ಬಿದ್ದಿವೆ. ಕೆಲವು ನಿಂಬೆ ಹಣ್ಣಿನ ಗದ್ದೆಗಳೂ ನೆಲಸಮಗೊಂಡಿವೆ’ ಎಂದು ತಹಶೀಲ್ದಾರ್ ರಾಜೇಶ ಬುರ್ಲಿ ತಿಳಿಸಿದ್ದಾರೆ.</p>.Koppal Rains | ಕೊಪ್ಪಳ: ಜನರಿಗೆ ಹರ್ಷ ತಂದ ಮಳೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ಉತ್ತಮ ಮಳೆಯಾಗಿದೆ.</p> <p>ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ರೈತ ಮಳಸಿದ್ದಪ್ಪ ಸಿದ್ಧಪ ಸುಧಾಮ ಅವರಿಗೆ ಸೇರಿದ ಎಮ್ಮೆಗೆ ಸಿಡಿಲು ಬಡಿದು ಸಾವಿಗೀಡಾಗಿದೆ. </p><p>ಚಡಚಣ, ಇಂಡಿ, ಸಿಂದಗಿ, ತಾಳಿಕೋಟೆ, ನಾಲತವಾಡ ವ್ಯಾಪ್ತಿಯಲ್ಲೂ ಗುಡುಗು, ಸಿಡಿಲಿನೊಂದಿಗೆ ಉತ್ತಮ ಮಳೆಯಾಗಿದೆ.</p><p>ಚಡಚಣ ತಾಲ್ಲೂಕಿನಾದ್ಯಂತ ಸೋಮವಾರ ಮಧ್ಯಾಹ್ನ ಭಾರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಅಂಗಡಿಗಳು, ಹೋಟೆಲ್ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಪತ್ರಾಸ್ ಮನೆಗಳು ಭಾಗಶಃ ನೆಲಸಮಗೊಂಡಿವೆ.</p> <p>ಚಡಚಣ ಪಟ್ಟಣದ ಹೊರ ವಲಯದಲ್ಲಿರುವ ಎಂ.ಇ.ಎಸ್. ಐಟಿಐ ಕಾಲೇಜಿನ ನಾಲ್ಕು ಕೊಠಡಿಗಳ ಚಾವಣಿ ಹಾರಿ ಹೋಗಿವೆ. ಕೊಠಡಿಗಳ ಒಳಗಡೆ ಇರುವ ಲಕ್ಷಾಂತರ ಮೌಲ್ಯದ ಕಂಪ್ಯೂಟರ್ಗಳು, ಕಾಗದ ಪತ್ರಗಳು ಮಳೆ ನೀರಿಗೆ ಆಹುತಿಯಾಗಿದ್ದು, ಅಂದಾಜು ₹ 10 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.</p> <p>ಸಮೀಪದಲ್ಲಿರುವ ಓಂ ಪ್ರಾಥಮಿಕ ಶಾಲಾ ಕಾಲೇಜಿನ ಕಿಟಕಿ ಗಾಜಗಳು ಪುಡಿ ಪುಡಿಯಾಗಿದ್ದು, ಕಂಪೌಂಡ್ ನೆಲಸಮಗೊಂಡಿದೆ.</p> <p>ರೇವತಗಾಂವ ಗ್ರಾಮದಲ್ಲಿರುವ ಬಿ.ಎಸ್.ಎನ್.ಎಲ್ ಟವರ್ವೊಂದು ನೆಲಸಮಗೊಂಡಿದೆ. ಹೊಲ ಗದ್ದೆಗಳಿಲ್ಲಿರುವ ನೂರಾರು ಗಿಡ ಮರಗಳು ಮುರಿದು ಬಿದ್ದಿವೆ. </p> <p>ಚಡಚಣ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಲ್ಪ ಮಳೆಯಾಗಿದ್ದರೆ, ಬರಡೋಲ, ಲೋಣಿ, ಝಳಕಿ ಹೋರ್ತಿ ಸೇರಿದಂತೆ ಕರ್ನಾಟಕ –ಮಹಾರಾಷ್ಟ್ರ ಗಡಿ ಅಂಚಿನಲ್ಲಿ ಭಾರಿ ಮಳೆಯಾಗಿದೆ. ಹೊಲಗಳ ಒಡ್ಡುಗಳು ತುಂಬಿ ನಿಂತಿವೆ. ಬಿಸಿಲಿನಿಂದ ಬೇಸತ್ತಿದ್ದ ಜನಕ್ಕೆ ಮಳೆ ತಂಪೆರೆಯಿತು.</p> <p>‘ಮಳೆಗಿಂತ ಬಿರುಗಾಳಿಗೆ ಚಡಚಣ ಪಟ್ಟಣ ವ್ಯಾಪ್ತಿ ಸೇರಿದಂತೆ ತಾಲ್ಲೂಕಿನಾದ್ಯಂತ ಸಾಕಷ್ಟು ಪತ್ರಾಸ್ ಮನೆಗಳು ಹಾರಿ ಹೋಗಿವೆ. ಹಲವಾರು ಮರಗಳು ಮುರುದು ಬಿದ್ದಿವೆ. ಕೆಲವು ನಿಂಬೆ ಹಣ್ಣಿನ ಗದ್ದೆಗಳೂ ನೆಲಸಮಗೊಂಡಿವೆ’ ಎಂದು ತಹಶೀಲ್ದಾರ್ ರಾಜೇಶ ಬುರ್ಲಿ ತಿಳಿಸಿದ್ದಾರೆ.</p>.Koppal Rains | ಕೊಪ್ಪಳ: ಜನರಿಗೆ ಹರ್ಷ ತಂದ ಮಳೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>