<p><strong>ಪಟ್ನಾ</strong>: ಬಿಹಾರ ವಿಧಾನಸಭಾ ಚುನಾವಣೆಗೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಬಡತನ, ಭ್ರಷ್ಟಾಚಾರ ಮುಕ್ತ ಸರ್ಕಾರ ರಚಿಸುತ್ತೇನೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಶುಕ್ರವಾರ ತಿಳಿಸಿದ್ದಾರೆ. </p><p>ಇಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಬಿಹಾರಿಯಾಗಿ ನನ್ನ ರಾಜ್ಯ ಬಡತನದಲ್ಲಿದೆ. ಇದು ವಿಷಯದಿಂದ ನನಗೆ ನೋವಾಗಿದೆ. ನಿರುದ್ಯೋಗ, ಭ್ರಷ್ಟಾಚಾರ, ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.</p>.World Polio Day: ಪೋಲಿಯೊ ನಿರ್ಮೂಲನೆಯಲ್ಲಿ ಅ. 24ರ ದಿನದ ಮಹತ್ವವೇನು?.ವಿಕ್ಕಿ ಕೌಶಲ್ ನಟನೆಯ ‘ಮಹಾವತಾರ್’ ಚಿತ್ರ ದೊಡ್ಡ ಜವಾಬ್ದಾರಿ: ಅಮರ್ ಕೌಶಿಕ್. <p>ಬಿಹಾರದಲ್ಲಿ 20 ವರ್ಷಗಳ ಎನ್ಡಿಎ ಆಡಳಿತ ಮತ್ತು 11 ವರ್ಷಗಳ ಕೇಂದ್ರ ಆಡಳಿತದ ಹೊರತಾಗಿಯೂ ರಾಜ್ಯದ ತಲಾ ಆದಾಯ ಅತ್ಯಂತ ಕಡಿಮೆಯಾಗಿದ್ದು, ರೈತರು ಬಡವರಾಗಿಯೇ ಇದ್ದಾರೆ ಎಂದು ಯಾದವ್ ಹೇಳಿದ್ದಾರೆ.</p><p>ಎನ್ಡಿಎ ಅಧಿಕಾರಕ್ಕೆ ಬಂದರೂ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಯಾದವ್ ತಿಳಿಸಿದ್ದಾರೆ.</p><p>ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ₹500ಕ್ಕೆ ಇಳಿಸುತ್ತೇವೆ. ವೃದ್ಧಾಪ್ಯ ಪಿಂಚಣಿಯನ್ನು ₹1,500ಕ್ಕೆ ಹೆಚ್ಚಿಸುತ್ತೇವೆ ಎಂದು ಯಾದವ್ ಹೇಳಿದ್ದಾರೆ.</p><p>243 ಸ್ಥಾನ ಹೊಂದಿರುವ ಬಿಹಾರ ವಿಧಾನಸಭೆ ಚುನಾವಣೆಯು ನವೆಂಬರ್ 6 ಮತ್ತು 11ರಂದು ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.</p>.ಪುನೀತ್ ನಟನೆಯ ‘ಮಾರಿಗಲ್ಲು’ ಟ್ರೈಲರ್ ಬಿಡುಗಡೆ: ಅಭಿಮಾನಿಗಳ ಮೆಚ್ಚುಗೆ.ಕರ್ನೂಲ್ ಬಸ್ ದುರಂತ: ಸಂತಾಪ ಸೂಚಿಸಿದ ಆಂಧ್ರ ಸಿಎಂ ನಾಯ್ಡು, ಸಿದ್ದರಾಮಯ್ಯ .ರಘು–ರಿಷಾ ಮಧ್ಯೆ ಪೈಪೋಟಿ: ಯಾರಾಗ್ತಾರೆ ಬಿಗ್ಬಾಸ್ ಮನೆಯ ಮೊದಲ ಕ್ಯಾಪ್ಟನ್?.ಕರ್ನೂಲ್ ಬಸ್ ದುರಂತ: ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಘೋಷಿಸಿದ ಪ್ರಧಾನಿ ಮೋದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಟ್ನಾ</strong>: ಬಿಹಾರ ವಿಧಾನಸಭಾ ಚುನಾವಣೆಗೆ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಬಡತನ, ಭ್ರಷ್ಟಾಚಾರ ಮುಕ್ತ ಸರ್ಕಾರ ರಚಿಸುತ್ತೇನೆ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಶುಕ್ರವಾರ ತಿಳಿಸಿದ್ದಾರೆ. </p><p>ಇಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಬಿಹಾರಿಯಾಗಿ ನನ್ನ ರಾಜ್ಯ ಬಡತನದಲ್ಲಿದೆ. ಇದು ವಿಷಯದಿಂದ ನನಗೆ ನೋವಾಗಿದೆ. ನಿರುದ್ಯೋಗ, ಭ್ರಷ್ಟಾಚಾರ, ಅಪರಾಧ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.</p>.World Polio Day: ಪೋಲಿಯೊ ನಿರ್ಮೂಲನೆಯಲ್ಲಿ ಅ. 24ರ ದಿನದ ಮಹತ್ವವೇನು?.ವಿಕ್ಕಿ ಕೌಶಲ್ ನಟನೆಯ ‘ಮಹಾವತಾರ್’ ಚಿತ್ರ ದೊಡ್ಡ ಜವಾಬ್ದಾರಿ: ಅಮರ್ ಕೌಶಿಕ್. <p>ಬಿಹಾರದಲ್ಲಿ 20 ವರ್ಷಗಳ ಎನ್ಡಿಎ ಆಡಳಿತ ಮತ್ತು 11 ವರ್ಷಗಳ ಕೇಂದ್ರ ಆಡಳಿತದ ಹೊರತಾಗಿಯೂ ರಾಜ್ಯದ ತಲಾ ಆದಾಯ ಅತ್ಯಂತ ಕಡಿಮೆಯಾಗಿದ್ದು, ರೈತರು ಬಡವರಾಗಿಯೇ ಇದ್ದಾರೆ ಎಂದು ಯಾದವ್ ಹೇಳಿದ್ದಾರೆ.</p><p>ಎನ್ಡಿಎ ಅಧಿಕಾರಕ್ಕೆ ಬಂದರೂ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಯಾದವ್ ತಿಳಿಸಿದ್ದಾರೆ.</p><p>ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು ₹500ಕ್ಕೆ ಇಳಿಸುತ್ತೇವೆ. ವೃದ್ಧಾಪ್ಯ ಪಿಂಚಣಿಯನ್ನು ₹1,500ಕ್ಕೆ ಹೆಚ್ಚಿಸುತ್ತೇವೆ ಎಂದು ಯಾದವ್ ಹೇಳಿದ್ದಾರೆ.</p><p>243 ಸ್ಥಾನ ಹೊಂದಿರುವ ಬಿಹಾರ ವಿಧಾನಸಭೆ ಚುನಾವಣೆಯು ನವೆಂಬರ್ 6 ಮತ್ತು 11ರಂದು ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.</p>.ಪುನೀತ್ ನಟನೆಯ ‘ಮಾರಿಗಲ್ಲು’ ಟ್ರೈಲರ್ ಬಿಡುಗಡೆ: ಅಭಿಮಾನಿಗಳ ಮೆಚ್ಚುಗೆ.ಕರ್ನೂಲ್ ಬಸ್ ದುರಂತ: ಸಂತಾಪ ಸೂಚಿಸಿದ ಆಂಧ್ರ ಸಿಎಂ ನಾಯ್ಡು, ಸಿದ್ದರಾಮಯ್ಯ .ರಘು–ರಿಷಾ ಮಧ್ಯೆ ಪೈಪೋಟಿ: ಯಾರಾಗ್ತಾರೆ ಬಿಗ್ಬಾಸ್ ಮನೆಯ ಮೊದಲ ಕ್ಯಾಪ್ಟನ್?.ಕರ್ನೂಲ್ ಬಸ್ ದುರಂತ: ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಘೋಷಿಸಿದ ಪ್ರಧಾನಿ ಮೋದಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>