<p><strong>ನವದೆಹಲಿ</strong>: ಮಹಾರಾಷ್ಟ್ರದ ಗ್ರಾಮವೊಂದರ ಸರಪಂಚ ಸ್ಥಾನಕ್ಕೆ ಮಹಿಳೆಯೊಬ್ಬರನ್ನು ಸುಪ್ರೀಂ ಕೋರ್ಟ್ ಪುನಃ ನೇಮಕ ಮಾಡಿದ್ದು, ತಳಮಟ್ಟದಲ್ಲಿ ಪ್ರಜಾತಂತ್ರದ ಪ್ರಗತಿಗೆ ಅಡ್ಡಿಯಾಗಲು ಅಧಿಕಾರಿಗಳಿಗೆ ಅವಕಾಶ ಕೊಡಲಾಗದು ಎಂದು ಸ್ಪಷ್ಟಪಡಿಸಿದೆ.</p>.<p>ಮಹಾರಾಷ್ಟ್ರದಲ್ಲಿ ಪಂಚಾಯತ್ನ ಚುನಾಯಿತ ಪ್ರತಿನಿಧಿಗಳ ಜೊತೆ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ ಹಲವು ನಿದರ್ಶನಗಳು ತನ್ನ ಗಮನಕ್ಕೆ ಬಂದಿವೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.</p>.<p>‘ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಜೊತೆ ತಪ್ಪಾಗಿ ನಡೆದುಕೊಂಡ ಎರಡು–ಮೂರು ಪ್ರಕರಣಗಳಲ್ಲಿ ನಾವು ತೀರ್ಪು ಕೊಟ್ಟಿದ್ದೇವೆ. ಇದು ಮಹಾರಾಷ್ಟ್ರದಲ್ಲಿ ಆಗುತ್ತಿದೆ. ಈ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಅಧೀನದಲ್ಲಿ ಇರಬೇಕು. ತಳಮಟ್ಟದಲ್ಲಿ ಪ್ರಜಾತಂತ್ರದ ಬೆಳವಣಿಗೆಗೆ ಅಡ್ಡಿಪಡಿಸಲು ಈ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಲಾಗದು’ ಎಂದು ಪೀಠವು ಹೇಳಿದೆ.</p>.<p class="title">ಚುನಾಯಿತ ಪ್ರತಿನಿಧಿಗಳನ್ನು ಅನರ್ಹಗೊಳಿಸಲು ಅಧಿಕಾರಿಗಳು ಹಳೆಯ ಪ್ರಕರಣಗಳಿಗೆ ಜೀವ ನೀಡಿದ ನಿದರ್ಶನಗಳನ್ನು ಪೀಠವು ಗಮನಿಸಿದೆ. ‘ನಿಮ್ಮ ಅಜ್ಜ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಕಾರಣಕ್ಕೆ ನಿಮ್ಮನ್ನು ಅನರ್ಹಗೊಳಿಸಲಾಗುತ್ತಿದೆ ಎಂದು ಇವರು ಹೇಳುತ್ತಾರೆ’ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.</p>.<p class="title">ಕಲಾವತಿ ರಾಜೇಂದ್ರ ಕೋಕಲೆ ಎನ್ನುವವರನ್ನು ರೋಹಾ ತಾಲ್ಲೂಕಿನ ಗ್ರಾಮವೊಂದರ ಸರಪಂಚ ಆಗಿ ಸುಪ್ರೀಂ ಕೋರ್ಟ ಮರುನೇಮಕ ಮಾಡಿದೆ. ರಾಯಗಢ ಜಿಲ್ಲಾಧಿಕಾರಿಯು ಕೋಕಲೆ ಅವರು ಹೊಂದಿದ್ದ ಸ್ಥಾನ ತೆರವಾಗಿದೆ ಎಂದು 2024ರ ಜೂನ್ 7ರಂದು ಆದೇಶಿಸಿದ್ದರು. ಈ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಹೈಕೋರ್ಟ್ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.</p>.<p class="title">ಕೋಕಲೆ ಅವರು ಸರಪಂಚ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನು ಹಿಂಪಡೆದಿದ್ದರೂ, ಅವರು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.</p>.<p class="title">ಆದರೆ, ಕೋಕಲೆ ಅವರ ರಾಜೀನಾಮೆಯು ಜಾರಿಗೆ ಬಂದಿರಲಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ‘ರಾಜೀನಾಮೆಯನ್ನು ಹಿಂಪಡೆದಿರುವುದನ್ನು ಪರಿಗಣಿಸದೆ ಜಿಲ್ಲಾಧಿಕಾರಿಯು ಸರಪಂಚ ಹುದ್ದೆ ಖಾಲಿಯಾಗಿದೆ ಎಂದು ತಪ್ಪಾಗಿ ನಿರ್ಣಯಿಸಿದ್ದರು’ ಎಂದು ಹೈಕೋರ್ಟ್ ಹೇಳಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಮಹಾರಾಷ್ಟ್ರದ ಗ್ರಾಮವೊಂದರ ಸರಪಂಚ ಸ್ಥಾನಕ್ಕೆ ಮಹಿಳೆಯೊಬ್ಬರನ್ನು ಸುಪ್ರೀಂ ಕೋರ್ಟ್ ಪುನಃ ನೇಮಕ ಮಾಡಿದ್ದು, ತಳಮಟ್ಟದಲ್ಲಿ ಪ್ರಜಾತಂತ್ರದ ಪ್ರಗತಿಗೆ ಅಡ್ಡಿಯಾಗಲು ಅಧಿಕಾರಿಗಳಿಗೆ ಅವಕಾಶ ಕೊಡಲಾಗದು ಎಂದು ಸ್ಪಷ್ಟಪಡಿಸಿದೆ.</p>.<p>ಮಹಾರಾಷ್ಟ್ರದಲ್ಲಿ ಪಂಚಾಯತ್ನ ಚುನಾಯಿತ ಪ್ರತಿನಿಧಿಗಳ ಜೊತೆ ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ ಹಲವು ನಿದರ್ಶನಗಳು ತನ್ನ ಗಮನಕ್ಕೆ ಬಂದಿವೆ ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್. ಕೋಟೀಶ್ವರ ಸಿಂಗ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.</p>.<p>‘ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಜೊತೆ ತಪ್ಪಾಗಿ ನಡೆದುಕೊಂಡ ಎರಡು–ಮೂರು ಪ್ರಕರಣಗಳಲ್ಲಿ ನಾವು ತೀರ್ಪು ಕೊಟ್ಟಿದ್ದೇವೆ. ಇದು ಮಹಾರಾಷ್ಟ್ರದಲ್ಲಿ ಆಗುತ್ತಿದೆ. ಈ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಅಧೀನದಲ್ಲಿ ಇರಬೇಕು. ತಳಮಟ್ಟದಲ್ಲಿ ಪ್ರಜಾತಂತ್ರದ ಬೆಳವಣಿಗೆಗೆ ಅಡ್ಡಿಪಡಿಸಲು ಈ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಲಾಗದು’ ಎಂದು ಪೀಠವು ಹೇಳಿದೆ.</p>.<p class="title">ಚುನಾಯಿತ ಪ್ರತಿನಿಧಿಗಳನ್ನು ಅನರ್ಹಗೊಳಿಸಲು ಅಧಿಕಾರಿಗಳು ಹಳೆಯ ಪ್ರಕರಣಗಳಿಗೆ ಜೀವ ನೀಡಿದ ನಿದರ್ಶನಗಳನ್ನು ಪೀಠವು ಗಮನಿಸಿದೆ. ‘ನಿಮ್ಮ ಅಜ್ಜ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡಿರುವ ಕಾರಣಕ್ಕೆ ನಿಮ್ಮನ್ನು ಅನರ್ಹಗೊಳಿಸಲಾಗುತ್ತಿದೆ ಎಂದು ಇವರು ಹೇಳುತ್ತಾರೆ’ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದರು.</p>.<p class="title">ಕಲಾವತಿ ರಾಜೇಂದ್ರ ಕೋಕಲೆ ಎನ್ನುವವರನ್ನು ರೋಹಾ ತಾಲ್ಲೂಕಿನ ಗ್ರಾಮವೊಂದರ ಸರಪಂಚ ಆಗಿ ಸುಪ್ರೀಂ ಕೋರ್ಟ ಮರುನೇಮಕ ಮಾಡಿದೆ. ರಾಯಗಢ ಜಿಲ್ಲಾಧಿಕಾರಿಯು ಕೋಕಲೆ ಅವರು ಹೊಂದಿದ್ದ ಸ್ಥಾನ ತೆರವಾಗಿದೆ ಎಂದು 2024ರ ಜೂನ್ 7ರಂದು ಆದೇಶಿಸಿದ್ದರು. ಈ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಹೈಕೋರ್ಟ್ ನಿಲುವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.</p>.<p class="title">ಕೋಕಲೆ ಅವರು ಸರಪಂಚ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನು ಹಿಂಪಡೆದಿದ್ದರೂ, ಅವರು ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.</p>.<p class="title">ಆದರೆ, ಕೋಕಲೆ ಅವರ ರಾಜೀನಾಮೆಯು ಜಾರಿಗೆ ಬಂದಿರಲಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ‘ರಾಜೀನಾಮೆಯನ್ನು ಹಿಂಪಡೆದಿರುವುದನ್ನು ಪರಿಗಣಿಸದೆ ಜಿಲ್ಲಾಧಿಕಾರಿಯು ಸರಪಂಚ ಹುದ್ದೆ ಖಾಲಿಯಾಗಿದೆ ಎಂದು ತಪ್ಪಾಗಿ ನಿರ್ಣಯಿಸಿದ್ದರು’ ಎಂದು ಹೈಕೋರ್ಟ್ ಹೇಳಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>