<p><strong>ಛತರ್ಪುರ</strong> <strong>(ಮಧ್ಯಪ್ರದೇಶ)</strong>: ಕಾಂಗ್ರೆಸ್ ಪಕ್ಷವು ದೇಶದ ಪ್ರಗತಿಯನ್ನು ಹಿಮ್ಮುಖವಾಗಿ ಕೊಂಡೊಯ್ಯುವಲ್ಲಿ ಪರಿಣತಿ ಪಡೆದಿದೆ. ಹಾಗಾಗಿ ಕನಿಷ್ಠ ನೂರು ವರ್ಷಗಳವರೆಗೆ ಆ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಮತದಾರರಲ್ಲಿ ಮನವಿ ಮಾಡಿದರು.</p>.<p>ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಬಲೆಗೆ ಜನರು ಬೀಳಬಾರದು. ‘ವಾಹನವು ನಮ್ಮನ್ನು ರಿವರ್ಸ್ ಗೇರ್ನಲ್ಲಿ ಹಿಮ್ಮುಖವಾಗಿ ಕೊಂಡೊಯ್ಯುವಂತೆ ಕಾಂಗ್ರೆಸ್ ಕೂಡ ಉತ್ತಮ ಆಡಳಿತವನ್ನು ಕೆಟ್ಟ ಆಡಳಿತವಾಗಿ ಪರಿವರ್ತಿಸಿ ದೇಶದ ಪ್ರಗತಿಯನ್ನು ಹಿಮ್ಮುಖವಾಗಿ ಕೊಂಡೊಯ್ಯಬಲ್ಲದು’ ಎಂದು ಎಚ್ಚರಿಸಿದರು.</p>.<p>ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಬುಂದೇಲ್ಖಂಡದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಏನನ್ನೂ ಮಾಡಲಿಲ್ಲ. ಇದೇ ಪ್ರದೇಶ 100 ವರ್ಷಗಳ ಹಿಂದೆ ಅನೇಕ ನೀರಿನ ಒರತೆಗಳನ್ನು ಹೊಂದಿತ್ತು. ಈಗ ಜನರು ಹನಿ ನೀರಿಗೆ ಹಾತೊರೆಯುವಂತೆ ಆಗಿದೆ ಎಂದು ಅವರು ಹೇಳಿದರು.</p>.<p>ಕಾಂಗ್ರೆಸ್ ಪಕ್ಷವನ್ನು ನೂರು ವರ್ಷಗಳವರೆಗೆ ಅಧಿಕಾರಕ್ಕೆ ತರದೆ ಆ ಪಕ್ಷವೂ ಅಧಿಕಾರಕ್ಕೆ ಹಾತೊರೆಯುವಂತೆ ಮಾಡಬೇಕು. ಆಗ ಅದು ಸುಧಾರಣೆ ಆಗಬಹುದು ಎಂದರು.</p>.<p>ಕಾಂಗ್ರೆಸ್ಗೆ ದೇಶದ ಬಗ್ಗೆ ಯೋಚನೆಯಿಲ್ಲ. ಸ್ವಹಿತವೇ ಮುಖ್ಯವಾಗಿದೆ. ದೇಶದ ಅಭಿವೃದ್ಧಿಗೆ ಆ ಪಕ್ಷ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ನಾಯಕರು ಬೆಳ್ಳಿ ಚಮಚವನ್ನು ಬಾಯಲ್ಲಿಟ್ಟುಕೊಂಡು ಜನಿಸಿದ್ದಾರೆ. ಅವರಿಗೆ ಬಡತನವನ್ನು ಹಾಸ್ಯ ಮಾಡುವುದೇ ಸಾಹಸ ಪ್ರವಾಸೋದ್ಯಮ ಆಗಿದೆ ಎಂದು ಅಣಕವಾಡಿದರು.</p>.<p>ಕಾಂಗ್ರೆಸ್ಗೆ ಇಡೀ ದೇಶ ದೆಹಲಿಯಲ್ಲಿ ಆರಂಭವಾಗಿ ದೆಹಲಿಯಲ್ಲೇ ಕೊನೆಗೊಳ್ಳುತ್ತದೆ. ಆ ಪಕ್ಷದ ನಾಯಕರು ತಮ್ಮ ವಿದೇಶಿ ಸ್ನೇಹಿತರನ್ನು ದೆಹಲಿಯಿಂದ ಹೊರಗೆ ಕರೆದೊಯ್ಯುವಾಗ ಕೊಳಚೆ ಪ್ರದೇಶದಲ್ಲಿನ ಬಡತನವನ್ನು ಮಾತ್ರ ತೋರಿಸುತ್ತಾರೆ ಮತ್ತು ಅಲ್ಲಿ ಅವರ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ ಎಂದು ಟೀಕಿಸಿದರು.</p>.<p>ಆದರೆ ಇಂದು ಮೋದಿ ಬಡವರಿಗೆ ಮನೆಗಳನ್ನು ಒದಗಿಸಿದ್ದಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಛತರ್ಪುರ</strong> <strong>(ಮಧ್ಯಪ್ರದೇಶ)</strong>: ಕಾಂಗ್ರೆಸ್ ಪಕ್ಷವು ದೇಶದ ಪ್ರಗತಿಯನ್ನು ಹಿಮ್ಮುಖವಾಗಿ ಕೊಂಡೊಯ್ಯುವಲ್ಲಿ ಪರಿಣತಿ ಪಡೆದಿದೆ. ಹಾಗಾಗಿ ಕನಿಷ್ಠ ನೂರು ವರ್ಷಗಳವರೆಗೆ ಆ ಪಕ್ಷವನ್ನು ಅಧಿಕಾರದಿಂದ ದೂರವಿಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಮತದಾರರಲ್ಲಿ ಮನವಿ ಮಾಡಿದರು.</p>.<p>ರ್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಬಲೆಗೆ ಜನರು ಬೀಳಬಾರದು. ‘ವಾಹನವು ನಮ್ಮನ್ನು ರಿವರ್ಸ್ ಗೇರ್ನಲ್ಲಿ ಹಿಮ್ಮುಖವಾಗಿ ಕೊಂಡೊಯ್ಯುವಂತೆ ಕಾಂಗ್ರೆಸ್ ಕೂಡ ಉತ್ತಮ ಆಡಳಿತವನ್ನು ಕೆಟ್ಟ ಆಡಳಿತವಾಗಿ ಪರಿವರ್ತಿಸಿ ದೇಶದ ಪ್ರಗತಿಯನ್ನು ಹಿಮ್ಮುಖವಾಗಿ ಕೊಂಡೊಯ್ಯಬಲ್ಲದು’ ಎಂದು ಎಚ್ಚರಿಸಿದರು.</p>.<p>ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಬುಂದೇಲ್ಖಂಡದಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಏನನ್ನೂ ಮಾಡಲಿಲ್ಲ. ಇದೇ ಪ್ರದೇಶ 100 ವರ್ಷಗಳ ಹಿಂದೆ ಅನೇಕ ನೀರಿನ ಒರತೆಗಳನ್ನು ಹೊಂದಿತ್ತು. ಈಗ ಜನರು ಹನಿ ನೀರಿಗೆ ಹಾತೊರೆಯುವಂತೆ ಆಗಿದೆ ಎಂದು ಅವರು ಹೇಳಿದರು.</p>.<p>ಕಾಂಗ್ರೆಸ್ ಪಕ್ಷವನ್ನು ನೂರು ವರ್ಷಗಳವರೆಗೆ ಅಧಿಕಾರಕ್ಕೆ ತರದೆ ಆ ಪಕ್ಷವೂ ಅಧಿಕಾರಕ್ಕೆ ಹಾತೊರೆಯುವಂತೆ ಮಾಡಬೇಕು. ಆಗ ಅದು ಸುಧಾರಣೆ ಆಗಬಹುದು ಎಂದರು.</p>.<p>ಕಾಂಗ್ರೆಸ್ಗೆ ದೇಶದ ಬಗ್ಗೆ ಯೋಚನೆಯಿಲ್ಲ. ಸ್ವಹಿತವೇ ಮುಖ್ಯವಾಗಿದೆ. ದೇಶದ ಅಭಿವೃದ್ಧಿಗೆ ಆ ಪಕ್ಷ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ನಾಯಕರು ಬೆಳ್ಳಿ ಚಮಚವನ್ನು ಬಾಯಲ್ಲಿಟ್ಟುಕೊಂಡು ಜನಿಸಿದ್ದಾರೆ. ಅವರಿಗೆ ಬಡತನವನ್ನು ಹಾಸ್ಯ ಮಾಡುವುದೇ ಸಾಹಸ ಪ್ರವಾಸೋದ್ಯಮ ಆಗಿದೆ ಎಂದು ಅಣಕವಾಡಿದರು.</p>.<p>ಕಾಂಗ್ರೆಸ್ಗೆ ಇಡೀ ದೇಶ ದೆಹಲಿಯಲ್ಲಿ ಆರಂಭವಾಗಿ ದೆಹಲಿಯಲ್ಲೇ ಕೊನೆಗೊಳ್ಳುತ್ತದೆ. ಆ ಪಕ್ಷದ ನಾಯಕರು ತಮ್ಮ ವಿದೇಶಿ ಸ್ನೇಹಿತರನ್ನು ದೆಹಲಿಯಿಂದ ಹೊರಗೆ ಕರೆದೊಯ್ಯುವಾಗ ಕೊಳಚೆ ಪ್ರದೇಶದಲ್ಲಿನ ಬಡತನವನ್ನು ಮಾತ್ರ ತೋರಿಸುತ್ತಾರೆ ಮತ್ತು ಅಲ್ಲಿ ಅವರ ಜತೆ ಫೋಟೋ ತೆಗೆಸಿಕೊಳ್ಳುತ್ತಾರೆ ಎಂದು ಟೀಕಿಸಿದರು.</p>.<p>ಆದರೆ ಇಂದು ಮೋದಿ ಬಡವರಿಗೆ ಮನೆಗಳನ್ನು ಒದಗಿಸಿದ್ದಾರೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>