‘ಶ್ರೀ ಸೋಮನಾಥ ಟ್ರಸ್ಟ್ನ (ಎಸ್ಎಸ್ಟಿ) ಸಭೆಯು ಗಾಂಧಿನಗರದ ರಾಜಭವನದಲ್ಲಿ ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಗಿದೆ’ ಎಂದು ಎಸ್ಎಸ್ಟಿಯ ಟ್ರಸ್ಟಿಗಳಲ್ಲಿ ಒಬ್ಬರಾದ ಪಿ.ಕೆ ಲಹೇರಿ ತಿಳಿಸಿದ್ದಾರೆ.
ಈ ದೇವಾಲಯವು ಗಿರ್ ಸೋಮನಾಥ ಜಿಲ್ಲೆಯ ವೆರಾವಲ್ ಪಟ್ಟಣದ ಸಮೀಪದಲ್ಲಿದೆ.
ಪ್ರಧಾನಿ ಮೋದಿ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದು, ಸಭೆಗೂ ಮುನ್ನ ಬನಸ್ಕಾಂತ್ ಜಿಲ್ಲೆಯ ಅಂಬಾಜಿ ಪಟ್ಟಣದಲ್ಲಿರುವ ಪ್ರಸಿದ್ಧ ಅಂಬಾ ದೇವಿಯ ದೇವಾಯಲದಲ್ಲಿ ಪ್ರಾರ್ಥನೆ ಸಲ್ಲಿಸಿದರು.
2021ರ ಜನವರಿಯಲ್ಲಿ ಎಸ್ಎಸ್ಟಿಯ ಅಧ್ಯಕ್ಷ ಮತ್ತು ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಅವರ ನಿಧನದ ನಂತರ ಪ್ರಧಾನಿ ಮೋದಿ ಅವರನ್ನು ಎಸ್ಎಸ್ಟಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
ಬಿಜೆಪಿ ಹಿರಿಯ ನಾಯಕ ಎಲ್. ಕೆ ಅಡ್ವಾಣಿ, ಕೇಂದ್ ಗೃಹ ಸಚಿವ ಅಮಿತ್ ಶಾ, ಗುಜರಾತ್ ಮೂಲಸ ವಿದ್ವಾಂಸ ಜೆ.ಡಿ ಪರ್ಮಾರ್ ಮತ್ತು ಉದ್ಯಮಿ ಹರ್ಷವರ್ಧನ್ ನಿಯೋಟಿಯಾ ಎಸ್ಎಸ್ಟಿಯ ಟ್ರಸ್ಟಿಗಳಾಗಿದ್ದಾರೆ.