<p><strong>ಪುಣೆ (ಮಹಾರಾಷ್ಟ್ರ):</strong> ಭಾರಿ ವಿವಾದಕ್ಕೆ ಕಾರಣವಾಗಿದ್ದ ಪೋಶೆ ಕಾರು ಅಪಘಾತ ಪ್ರಕರಣದ ಆರೋಪಿ ಬಾಲಕನ ತಾಯಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನಾಲ್ಕು ದಿನಗಳ ನಂತರ ಅವರು ಇಂದು (ಶನಿವಾರ) ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.</p>.<p>ರಕ್ತದ ಮಾದರಿ ಬದಲಾಯಿಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟ 10 ಆರೋಪಿಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಮೊದಲ ವ್ಯಕ್ತಿ ಅವರು.</p>.<p>ಆರೋಪಿ ಬಾಲಕನ ತಂದೆಯ ಆಮಿಷಕ್ಕೆ ಮಣಿದಿದ್ದ ವೈದ್ಯರು, ಪೊಲೀಸರು ಸಂಗ್ರಹಿಸಿದ್ದ ಬಾಲಕನ ರಕ್ತದ ಮಾದರಿಯನ್ನು ಕಸದಬುಟ್ಟಿಗೆ ಎಸೆದು, ಅದರ ಜಾಗದಲ್ಲಿ ಆತನ ತಾಯಿಯ ರಕ್ತದ ಮಾದರಿಯನ್ನು ಇರಿಸಿದ್ದರು. ರಕ್ತದ ಮಾದರಿಯನ್ನು ಈ ರೀತಿ ಬದಲಾಯಿಸಿ, ಬಾಲಕ ಕಾರು ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಮದ್ಯ ಕುಡಿದಿರಲಿಲ್ಲ ಎಂದು ತೋರಿಸುವ ಯತ್ನ ನಡೆಸಲಾಗಿತ್ತು. </p>.<p>ರಕ್ತದ ಮಾದರಿ ಬದಲಿಸಿದ್ದ ಆರೋಪದ ಮೇಲೆ ಬಾಲಕನ ತಾಯಿಯನ್ನು 2024ರ ಜೂನ್ 1ರಂದು ಪೊಲೀಸರು ಬಂಧಿಸಿದ್ದರು. </p>.ಪೋಶೆ ಕಾರು ಅಪಘಾತ: ಆರೋಪಿಯ ತಂದೆ, ತಾತನ ವಿರುದ್ಧ ಮತ್ತೊಂದು ಪ್ರಕರಣ.<p>ಪ್ರಕರಣ ಸಂಬಂಧ ಬಂಧನದಲ್ಲಿರುವ ಇತರರಲ್ಲಿ ಬಾಲಕನ ತಂದೆ, ಸಾಸೂನ್ ಆಸ್ಪತ್ರೆಯ ವೈದ್ಯರಾದ ಅಜಯ್ ತಾವರೆ ಮತ್ತು ಶ್ರೀಹರಿ ಹಾಲನೂರ್, ಆಸ್ಪತ್ರೆಯ ಸಿಬ್ಬಂದಿ ಅತುಲ್ ಘಟ್ಕಾಂಬಳೆ, ಇಬ್ಬರು ಮಧ್ಯವರ್ತಿಗಳು ಮತ್ತು ಇತರ ಮೂವರು ಸೇರಿದ್ದಾರೆ.</p>.<p>2024ರ ಮೇ 19ರಂದು ಕಲ್ಯಾಣಿ ನಗರದಲ್ಲಿ ಪಾನಮತ್ತ ಬಾಲಕನು ಚಲಾಯಿಸುತ್ತಿದ್ದ ಪೋಶೆ ಕಾರು ಡಿಕ್ಕಿಹೊಡೆದು ಇಬ್ಬರು ಟೆಕಿಗಳು ಮೃತಪಟ್ಟಿದ್ದರು.</p>.<p>ಸದ್ಯ ಆರೋಪಿತ ಬಾಲಕನ ತಾಯಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್, ಜಾಮೀನು ಷರತ್ತುಗಳನ್ನು ವಿಧಿಸುವಂತೆ ಪುಣೆ ನ್ಯಾಯಾಲಯಕ್ಕೆ ನಿರ್ದೇಶಿಸಿದೆ. </p>.ಪುಣೆ ಪೋಶೆ ಕಾರು ಅಪಘಾತ ಪ್ರಕರಣ: ಪ್ರಬಂಧ ಬರೆದು ಸಲ್ಲಿಸಿದ ಬಾಲಕ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ (ಮಹಾರಾಷ್ಟ್ರ):</strong> ಭಾರಿ ವಿವಾದಕ್ಕೆ ಕಾರಣವಾಗಿದ್ದ ಪೋಶೆ ಕಾರು ಅಪಘಾತ ಪ್ರಕರಣದ ಆರೋಪಿ ಬಾಲಕನ ತಾಯಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ನಾಲ್ಕು ದಿನಗಳ ನಂತರ ಅವರು ಇಂದು (ಶನಿವಾರ) ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.</p>.<p>ರಕ್ತದ ಮಾದರಿ ಬದಲಾಯಿಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟ 10 ಆರೋಪಿಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಮೊದಲ ವ್ಯಕ್ತಿ ಅವರು.</p>.<p>ಆರೋಪಿ ಬಾಲಕನ ತಂದೆಯ ಆಮಿಷಕ್ಕೆ ಮಣಿದಿದ್ದ ವೈದ್ಯರು, ಪೊಲೀಸರು ಸಂಗ್ರಹಿಸಿದ್ದ ಬಾಲಕನ ರಕ್ತದ ಮಾದರಿಯನ್ನು ಕಸದಬುಟ್ಟಿಗೆ ಎಸೆದು, ಅದರ ಜಾಗದಲ್ಲಿ ಆತನ ತಾಯಿಯ ರಕ್ತದ ಮಾದರಿಯನ್ನು ಇರಿಸಿದ್ದರು. ರಕ್ತದ ಮಾದರಿಯನ್ನು ಈ ರೀತಿ ಬದಲಾಯಿಸಿ, ಬಾಲಕ ಕಾರು ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಮದ್ಯ ಕುಡಿದಿರಲಿಲ್ಲ ಎಂದು ತೋರಿಸುವ ಯತ್ನ ನಡೆಸಲಾಗಿತ್ತು. </p>.<p>ರಕ್ತದ ಮಾದರಿ ಬದಲಿಸಿದ್ದ ಆರೋಪದ ಮೇಲೆ ಬಾಲಕನ ತಾಯಿಯನ್ನು 2024ರ ಜೂನ್ 1ರಂದು ಪೊಲೀಸರು ಬಂಧಿಸಿದ್ದರು. </p>.ಪೋಶೆ ಕಾರು ಅಪಘಾತ: ಆರೋಪಿಯ ತಂದೆ, ತಾತನ ವಿರುದ್ಧ ಮತ್ತೊಂದು ಪ್ರಕರಣ.<p>ಪ್ರಕರಣ ಸಂಬಂಧ ಬಂಧನದಲ್ಲಿರುವ ಇತರರಲ್ಲಿ ಬಾಲಕನ ತಂದೆ, ಸಾಸೂನ್ ಆಸ್ಪತ್ರೆಯ ವೈದ್ಯರಾದ ಅಜಯ್ ತಾವರೆ ಮತ್ತು ಶ್ರೀಹರಿ ಹಾಲನೂರ್, ಆಸ್ಪತ್ರೆಯ ಸಿಬ್ಬಂದಿ ಅತುಲ್ ಘಟ್ಕಾಂಬಳೆ, ಇಬ್ಬರು ಮಧ್ಯವರ್ತಿಗಳು ಮತ್ತು ಇತರ ಮೂವರು ಸೇರಿದ್ದಾರೆ.</p>.<p>2024ರ ಮೇ 19ರಂದು ಕಲ್ಯಾಣಿ ನಗರದಲ್ಲಿ ಪಾನಮತ್ತ ಬಾಲಕನು ಚಲಾಯಿಸುತ್ತಿದ್ದ ಪೋಶೆ ಕಾರು ಡಿಕ್ಕಿಹೊಡೆದು ಇಬ್ಬರು ಟೆಕಿಗಳು ಮೃತಪಟ್ಟಿದ್ದರು.</p>.<p>ಸದ್ಯ ಆರೋಪಿತ ಬಾಲಕನ ತಾಯಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್, ಜಾಮೀನು ಷರತ್ತುಗಳನ್ನು ವಿಧಿಸುವಂತೆ ಪುಣೆ ನ್ಯಾಯಾಲಯಕ್ಕೆ ನಿರ್ದೇಶಿಸಿದೆ. </p>.ಪುಣೆ ಪೋಶೆ ಕಾರು ಅಪಘಾತ ಪ್ರಕರಣ: ಪ್ರಬಂಧ ಬರೆದು ಸಲ್ಲಿಸಿದ ಬಾಲಕ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>