<p><strong>ಕೋಲ್ಕತ್ತ</strong>: ‘ನನ್ನ ಮಗ ತಪ್ಪಿತಸ್ಥನಾಗಿದ್ದರೆ ಅವನನ್ನು ಗಲ್ಲಿಗೇರಿಸಿ’ ಎಂದು ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಂಜಯ್ ರಾಯ್ನ ತಾಯಿ ಮಾಲತಿ ರಾಯ್ ಹೇಳಿದ್ದಾರೆ.</p><p>ಶನಿವಾರ(ಜ.18ರಂದು) ಸಂಜಯ್ ರಾಯ್ನನ್ನು ತಪ್ಪಿತಸ್ಥ ಎಂದು ಕೋಲ್ಕತ್ತ ನ್ಯಾಯಾಲಯ ತೀರ್ಪು ನೀಡಿತ್ತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಲು ಹಿಂಜರಿದಿದ್ದ ಮಾಲತಿ ರಾಯ್ ಅವರು ಭಾನುವಾರ ಮುಂಜಾನೆ ತಮ್ಮ ಮನೆಯ ಮುಂದೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.</p><p>‘ಒಂದು ಹೆಣ್ಣಾಗಿ, ಮೂರು ಹೆಣ್ಣು ಮಕ್ಕಳ ತಾಯಿಯಾಗಿ, ಆ ತಾಯಿಯ(ವೈದ್ಯ ವಿದ್ಯಾರ್ಥಿನಿ ತಾಯಿ) ವೇದನೆ ಮತ್ತು ನೋವು ಅರ್ಥವಾಗುತ್ತದೆ’ ಎಂದು ಹೇಳಿದ್ದಾರೆ.</p><p>‘ಕಾನೂನಿನ ಪ್ರಕಾರ ಅವನ ಅಪರಾಧ ಸಾಬೀತಾಗಿದ್ದರೆ ನ್ಯಾಯಾಲಯ ಅವನನ್ನು ಗಲ್ಲಿಗೇರಿಸಿದರೂ ನನ್ನ ಅಭ್ಯಂತರವಿಲ್ಲ. ನಾನು ಏಕಾಂಗಿಯಾಗಿ ಅಳಬಹುದು ಆದರೆ, ವಿಧಿಯ ಇಚ್ಛೆಯಂತೆ ಅದನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.</p><p>ನ್ಯಾಯಾಲಯದ ವಿಚಾರಣೆ ವೇಳೆ ಅಥವಾ ಜೈಲಿನಲ್ಲಿರುವಾಗ ಸಂಜಯ್ನನ್ನು ಭೇಟಿಯಾಗಿದ್ದೀರಾ ಎಂಬ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರಿಸಿದ್ದಾರೆ.</p><p>‘ನ್ಯಾನ್ಯಾಕೆ ಭೇಟಿ ಮಾಡಬೇಕು? ಅವನ ಮೇಲೆ ಹೊರಿಸಿರುವ ಆರೋಪಗಳು ಸುಳ್ಳೆಂದು ಕಂಡುಬಂದಿದ್ದರೆ ನನ್ನ ಈ ಹದಗೆಟ್ಟ ಆರೋಗ್ಯವನ್ನು ಕಡೆಗಣಿಸಿಯಾದರೂ ಭೇಟಿ ಮಾಡಲು ಯತ್ನಿಸುತ್ತಿದ್ದೆ’ ಎಂದು ಕಣ್ಣೀರು ಹಾಕಿದ್ದಾರೆ.</p><p>‘ಅವನು ತಪ್ಪಿತಸ್ಥನೆಂದು ಸಾಬೀತಾದರೆ, ಕಾನೂನಿನ ಪ್ರಕಾರ ಅವನಿಗೆ ಶಿಕ್ಷೆಯಾಗಲಿ. ತೀರ್ಪನ್ನು ಪ್ರಶ್ನಿಸಿ ಯಾವುದೇ ನ್ಯಾಯಾಲಯದ ಮೆಟ್ಟಿಲೇರುವ ಯೋಜನೆಯನ್ನು ಕುಟುಂಬ ಹೊಂದಿಲ್ಲ’ ಎಂದು ಸಂಜಯ್ ರಾಯ್ ಸಹೋದರಿ ತಿಳಿಸಿದ್ದಾರೆ.</p><p>ಸುದ್ದಿಗಾರರು ಪ್ರಶ್ನೆ ಕೇಳುವುದನ್ನು ಮುಂದುವರಿಸಿದಾಗ, ‘ಈಗಾಗಲೇ ನಾವು ನೊಂದಿದ್ದೇವೆ. ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಡಿ’ ಎಂದು ಅವರು ಹೇಳಿದ್ದಾರೆ.</p><p>ಸಂಜಯ್ಗೆ ಮೂವರು ಸಹೋದರಿಯರಿದ್ದು, ಅವರಲ್ಲಿ ಒಬ್ಬರು ವರ್ಷಗಳ ಹಿಂದೆ ನಿಧನರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ‘ನನ್ನ ಮಗ ತಪ್ಪಿತಸ್ಥನಾಗಿದ್ದರೆ ಅವನನ್ನು ಗಲ್ಲಿಗೇರಿಸಿ’ ಎಂದು ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಂಜಯ್ ರಾಯ್ನ ತಾಯಿ ಮಾಲತಿ ರಾಯ್ ಹೇಳಿದ್ದಾರೆ.</p><p>ಶನಿವಾರ(ಜ.18ರಂದು) ಸಂಜಯ್ ರಾಯ್ನನ್ನು ತಪ್ಪಿತಸ್ಥ ಎಂದು ಕೋಲ್ಕತ್ತ ನ್ಯಾಯಾಲಯ ತೀರ್ಪು ನೀಡಿತ್ತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಲು ಹಿಂಜರಿದಿದ್ದ ಮಾಲತಿ ರಾಯ್ ಅವರು ಭಾನುವಾರ ಮುಂಜಾನೆ ತಮ್ಮ ಮನೆಯ ಮುಂದೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.</p><p>‘ಒಂದು ಹೆಣ್ಣಾಗಿ, ಮೂರು ಹೆಣ್ಣು ಮಕ್ಕಳ ತಾಯಿಯಾಗಿ, ಆ ತಾಯಿಯ(ವೈದ್ಯ ವಿದ್ಯಾರ್ಥಿನಿ ತಾಯಿ) ವೇದನೆ ಮತ್ತು ನೋವು ಅರ್ಥವಾಗುತ್ತದೆ’ ಎಂದು ಹೇಳಿದ್ದಾರೆ.</p><p>‘ಕಾನೂನಿನ ಪ್ರಕಾರ ಅವನ ಅಪರಾಧ ಸಾಬೀತಾಗಿದ್ದರೆ ನ್ಯಾಯಾಲಯ ಅವನನ್ನು ಗಲ್ಲಿಗೇರಿಸಿದರೂ ನನ್ನ ಅಭ್ಯಂತರವಿಲ್ಲ. ನಾನು ಏಕಾಂಗಿಯಾಗಿ ಅಳಬಹುದು ಆದರೆ, ವಿಧಿಯ ಇಚ್ಛೆಯಂತೆ ಅದನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.</p><p>ನ್ಯಾಯಾಲಯದ ವಿಚಾರಣೆ ವೇಳೆ ಅಥವಾ ಜೈಲಿನಲ್ಲಿರುವಾಗ ಸಂಜಯ್ನನ್ನು ಭೇಟಿಯಾಗಿದ್ದೀರಾ ಎಂಬ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರಿಸಿದ್ದಾರೆ.</p><p>‘ನ್ಯಾನ್ಯಾಕೆ ಭೇಟಿ ಮಾಡಬೇಕು? ಅವನ ಮೇಲೆ ಹೊರಿಸಿರುವ ಆರೋಪಗಳು ಸುಳ್ಳೆಂದು ಕಂಡುಬಂದಿದ್ದರೆ ನನ್ನ ಈ ಹದಗೆಟ್ಟ ಆರೋಗ್ಯವನ್ನು ಕಡೆಗಣಿಸಿಯಾದರೂ ಭೇಟಿ ಮಾಡಲು ಯತ್ನಿಸುತ್ತಿದ್ದೆ’ ಎಂದು ಕಣ್ಣೀರು ಹಾಕಿದ್ದಾರೆ.</p><p>‘ಅವನು ತಪ್ಪಿತಸ್ಥನೆಂದು ಸಾಬೀತಾದರೆ, ಕಾನೂನಿನ ಪ್ರಕಾರ ಅವನಿಗೆ ಶಿಕ್ಷೆಯಾಗಲಿ. ತೀರ್ಪನ್ನು ಪ್ರಶ್ನಿಸಿ ಯಾವುದೇ ನ್ಯಾಯಾಲಯದ ಮೆಟ್ಟಿಲೇರುವ ಯೋಜನೆಯನ್ನು ಕುಟುಂಬ ಹೊಂದಿಲ್ಲ’ ಎಂದು ಸಂಜಯ್ ರಾಯ್ ಸಹೋದರಿ ತಿಳಿಸಿದ್ದಾರೆ.</p><p>ಸುದ್ದಿಗಾರರು ಪ್ರಶ್ನೆ ಕೇಳುವುದನ್ನು ಮುಂದುವರಿಸಿದಾಗ, ‘ಈಗಾಗಲೇ ನಾವು ನೊಂದಿದ್ದೇವೆ. ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಡಿ’ ಎಂದು ಅವರು ಹೇಳಿದ್ದಾರೆ.</p><p>ಸಂಜಯ್ಗೆ ಮೂವರು ಸಹೋದರಿಯರಿದ್ದು, ಅವರಲ್ಲಿ ಒಬ್ಬರು ವರ್ಷಗಳ ಹಿಂದೆ ನಿಧನರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>