<p><strong>ಮೈಸೂರು: </strong>ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸಹೋದರಿ ದಿವಂಗತ ಗಾಯತ್ರಿದೇವಿ ಅವರ ಮೊಮ್ಮಗ ಯದುವೀರ್ ಗೋಪಾಲ್ರಾಜ್ ಅರಸ್ (23) ಅವರನ್ನು ದತ್ತು ಸ್ವೀಕರಿಸಲು ರಾಜಮನೆತನದವರೆಲ್ಲರೂ ಒಮ್ಮತದಿಂದ ನಿರ್ಧರಿಸಿದ್ದು, ಫೆ. 23ರಂದು ದತ್ತು ಸ್ವೀಕಾರ ನಡೆಯಲಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.<br /> <br /> ನಗರದ ಅಂಬಾವಿಲಾಸ ಅರಮನೆಯಲ್ಲಿ ಕುಲದೇವತೆ ಚಾಮುಂಡೇಶ್ವರಿ ದೇವಿ ಮತ್ತು ಮನೆತನದ ಕುಲಪುರುಷ ಶ್ರೀಕೃಷ್ಣಗೆ ನಮಿಸಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.<br /> <br /> ‘ಯದುವೀರ್ ಅವರನ್ನು ನಿಯೋಜಿತ ದತ್ತುಪತ್ರ ಎಂದು ಘೋಷಿಸಲು ಸಂತೋಷಪಡುತ್ತೇನೆ’ ಎಂದು ಗದ್ಗದಿತರಾದರು. ಉಮ್ಮಳಿಸಿ ಬಂದ ದುಃಖದ ನಡುವೆಯೂ ಕಣ್ಣಾಲಿಗಳನ್ನು ಒರೆಸಿಕೊಳ್ಳುತ್ತಲೇ ಪ್ರಕಟಣಾ ಪತ್ರವನ್ನು ಓದಿದ ಅವರು, ನಮ್ಮ ಈ ನಿರ್ಧಾರಕ್ಕೆ ಪತಿ ಶ್ರೀಕಂಠದತ್ತರ ಅನಮೋದನೆ ಮತ್ತು ಆಶೀರ್ವಾದ ಇದೆ ಎಂಬುದು ನನ್ನ ಅಚಲವಾದ ನಂಬಿಕೆ. ಪತಿಯ ಸಹೋದರಿಯರು ಮತ್ತು ಕುಟುಂಬದವರೆಲ್ಲರೂ ಸೇರಿಯೇ ಈ ತೀರ್ಮಾನ ಕೈಗೊಂಡಿದ್ದೇವೆ. ಯದುವಂಶದ ಪರಂಪರೆ, ರೀತಿ–ರಿವಾಜುಗಳಿಗೆ ಅನುಗುಣವಾಗಿ ದತ್ತು ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸಹೋದರಿ ದಿವಂಗತ ಗಾಯತ್ರಿದೇವಿ ಅವರ ಮೊಮ್ಮಗ ಯದುವೀರ್ ಗೋಪಾಲ್ರಾಜ್ ಅರಸ್ (23) ಅವರನ್ನು ದತ್ತು ಸ್ವೀಕರಿಸಲು ರಾಜಮನೆತನದವರೆಲ್ಲರೂ ಒಮ್ಮತದಿಂದ ನಿರ್ಧರಿಸಿದ್ದು, ಫೆ. 23ರಂದು ದತ್ತು ಸ್ವೀಕಾರ ನಡೆಯಲಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.<br /> <br /> ನಗರದ ಅಂಬಾವಿಲಾಸ ಅರಮನೆಯಲ್ಲಿ ಕುಲದೇವತೆ ಚಾಮುಂಡೇಶ್ವರಿ ದೇವಿ ಮತ್ತು ಮನೆತನದ ಕುಲಪುರುಷ ಶ್ರೀಕೃಷ್ಣಗೆ ನಮಿಸಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.<br /> <br /> ‘ಯದುವೀರ್ ಅವರನ್ನು ನಿಯೋಜಿತ ದತ್ತುಪತ್ರ ಎಂದು ಘೋಷಿಸಲು ಸಂತೋಷಪಡುತ್ತೇನೆ’ ಎಂದು ಗದ್ಗದಿತರಾದರು. ಉಮ್ಮಳಿಸಿ ಬಂದ ದುಃಖದ ನಡುವೆಯೂ ಕಣ್ಣಾಲಿಗಳನ್ನು ಒರೆಸಿಕೊಳ್ಳುತ್ತಲೇ ಪ್ರಕಟಣಾ ಪತ್ರವನ್ನು ಓದಿದ ಅವರು, ನಮ್ಮ ಈ ನಿರ್ಧಾರಕ್ಕೆ ಪತಿ ಶ್ರೀಕಂಠದತ್ತರ ಅನಮೋದನೆ ಮತ್ತು ಆಶೀರ್ವಾದ ಇದೆ ಎಂಬುದು ನನ್ನ ಅಚಲವಾದ ನಂಬಿಕೆ. ಪತಿಯ ಸಹೋದರಿಯರು ಮತ್ತು ಕುಟುಂಬದವರೆಲ್ಲರೂ ಸೇರಿಯೇ ಈ ತೀರ್ಮಾನ ಕೈಗೊಂಡಿದ್ದೇವೆ. ಯದುವಂಶದ ಪರಂಪರೆ, ರೀತಿ–ರಿವಾಜುಗಳಿಗೆ ಅನುಗುಣವಾಗಿ ದತ್ತು ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>