ಯತ್ನಾಳ ಅವರ ಉಚ್ಚಾಟನೆ ಯಿಂದ ಬಿಜೆಪಿಗೆ ನಷ್ಟ . ನಿರ್ಣಯವನ್ನು ಮರುಪರಿಶೀಲಿಸಲು ವರಿಷ್ಠರೊಂದಿಗೆ ಚರ್ಚಿಸುವೆ ಹೊರತು ಉಚ್ಚಾಟನೆ ಕುರಿತು ಪ್ರಶ್ನಿಸುವುದಿಲ್ಲ
ಬಿ.ಶ್ರೀರಾಮುಲು, ಮಾಜಿ ಸಚಿವ
ಪಕ್ಷ ಹಲವು ಕಾರಣಕ್ಕೆ ಅನಿವಾರ್ಯ ತೀರ್ಮಾನಕ್ಕೆ ಬಂದಿದೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ಈ ವಿಚಾರದ ಬಗ್ಗೆ ವಿಶ್ಲೇಷಣೆ ಮಾಡುವುದಿಲ್ಲ
ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ
ಯತ್ನಾಳ್ ಸದನದಲ್ಲಿ ಮಧುಬಲೆ ವಿಚಾರ ಪ್ರಸ್ತಾಪಿಸಿದ್ದಕ್ಕೆ ಉಚ್ಚಾಟಿಸಲಾಗಿದೆ. ಅವರು ಪಕ್ಷದ ಶಿಸ್ತು ಪಾಲಿಸುತ್ತಿರಲಿಲ್ಲ. ಸದನದಲ್ಲೂ ಯಾರಿಗೂ ಗೌರವ ಕೊಡುತ್ತಿರಲಿಲ್ಲ. ಇದು ನಮ್ಮಂತಹ ಕಿರಿಯ ಶಾಸಕರಿಗೆ ಪಾಠ
ಕೆ. ಹರೀಶ್ ಗೌಡ, ಕಾಂಗ್ರೆಸ್ ಶಾಸಕ
ಯತ್ನಾಳ ಅವರ ಉಚ್ಚಾಟನೆ ಪಕ್ಷದ ನಿರ್ಣಯ. ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ, ಎರಡು ಮೂರು ದಿನಗಳಲ್ಲಿ ಅದರ ಪರಿಣಾಮ ಗೊತ್ತಾಗಲಿದೆ
ಶಿವರಾಮ ಹೆಬ್ಬಾರ, ಶಾಸಕ
ಯತ್ನಾಳ ಒಂದು ವರ್ಷದಿಂದ ಪಕ್ಷದ ವಿರುದ್ಧ ಹೇಳಿಕೆ ನೀಡುತ್ತಿದ್ದರು. ತಿದ್ದಿಕೊಳ್ಳಲು ಹಲವು ಅವಕಾಶ ನೀಡಿದರೂ ಸುಧಾರಿಸಿಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು