<p><strong>ಬೆಂಗಳೂರು</strong>: ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್ಟಿಡಿಸಿ) ‘ಎಕ್ಸ್’ ಖಾತೆಯಲ್ಲಿ ವಯನಾಡ್ ಪ್ರವಾಸದ ಬಗ್ಗೆ ಪೋಸ್ಟ್ ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಕಿಡಿ ಕಾರಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ವಯನಾಡ್ ಸೇವಾ ಕೇಂದ್ರದಂತಾಗಿದೆ ಎಂದು ಟೀಕಿಸಿದೆ.</p>.ವಯನಾಡ್ ಪುನರ್ವಸತಿ: ₹2,221.03 ಕೋಟಿ ಬಿಡುಗಡೆಗೆ ಪ್ರಧಾನಿಗೆ ಕೇರಳ ಸಿಎಂ ಮನವಿ.<p>ಕೆಎಸ್ಟಿಡಿಸಿ ಖಾತೆಯಲ್ಲಿ ಮಾಡಿರುವ ಪೋಸ್ಟ್ ಅನ್ನು ಉಲ್ಲೇಖಿಸಿ ರಾಜ್ಯ ಬಿಜೆಪಿ ತನ್ನ ‘ಎಕ್ಸ್’ ಖಾತೆಯಲ್ಲಿ ಹೀಗೆ ಬರೆದುಕೊಂಡಿದೆ.</p>.ವಯನಾಡ್: ಕಾಫಿ ಬೆಳೆಗಾರರ ಸಮಸ್ಯೆ ಆಲಿಸಿದ ಸೋನಿಯಾ, ಪ್ರಿಯಾಂಕಾ.<p>‘ನಮ್ಮ ಕೆಎಸ್ಟಿಡಿಸಿ ಇರುವುದು ಕರ್ನಾಟಕಕ್ಕೋ, ಕೇರಳಕ್ಕೋ ತಿಳಿಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಕೆ ಪಾಟೀಲ ಅವರಿಗೆ ನಮ್ಮ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಕಾಣಲಿಲ್ಲವೇ? ನಿಮ್ಮ ಪ್ರಿಯಾಂಕಾ ಗಾಂಧಿಯನ್ನು ಮೆಚ್ಚಿಸಲು ನಮ್ಮ ಕರುನಾಡನ್ನೇ ಕಡೆಗಣಿಸುತ್ತಿದ್ದೀರಾ?’ ಎಂದು ಪ್ರಶ್ನಿಸಿದೆ.</p><p>ವಯನಾಡಿನ ಜನರಿಗೆ ಮನೆ, ಆನೆ ದಾಳಿಯಿಂದ ಸತ್ತವರಿಗೆ ಪರಿಹಾರ, ಇಷ್ಟೆಲ್ಲಾ ಮಾಡಿದ ಮೇಲೆ ಈಗ ವಯನಾಡನ್ನೇ ಕರ್ನಾಟಕಕ್ಕೆ ಸೇರಿಸಲು ಹೇಳಿ ಎಂದು ಬಿಜೆಪಿ ಹೇಳಿದೆ.</p> .ವಯನಾಡ್: ಭೂಕುಸಿತ ಸಂತ್ರಸ್ತರಿಗಾಗಿ ಟೌನ್ಶಿಪ್ ನಿರ್ಮಾಣ ಕಾರ್ಯ ಶುರು.<p>ಮುಖ್ಯಮಂತ್ರಿಯೊಬ್ಬರು ವಯನಾಡ್ ಜಿಲ್ಲಾಧಿಕಾರಿ ಹಾಗೂ ನಿಧಿ ಸಂಗ್ರಹಕನಾಗಿ ವರ್ತಿಸುವುದನ್ನು ಕರ್ನಾಟಕ ಎಷ್ಟು ಸಹಿಸಿಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಆಶೋಕ ಪ್ರಶ್ನಿಸಿದ್ದಾರೆ.</p><p>ಕರ್ನಾಟಕ ಸ್ವಂತ ಪ್ರವಾಸೋದ್ಯಮ ನಿಗಮವನ್ನು ಪ್ರಿಯಾಂಕಾ ಗಾಂಧಿಯವರ ಕ್ಷೇತ್ರ ವಯನಾಡ್ನ ಪ್ರಚಾರಕ್ಕೆ ಬಳಸಿಕೊಂಡಿರಿ ಎಂದು ಕಿಡಿ ಕಾರಿದ್ದಾರೆ.</p>.ವಯನಾಡ್ ಭೂಕುಸಿತ;ಸಂತ್ರಸ್ತರ ಸಾಲ ಮನ್ನಾ ಮಾಡದೆ ದ್ರೋಹವೆಸಗಿದ ಕೇಂದ್ರ: ಪ್ರಿಯಾಂಕಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್ಟಿಡಿಸಿ) ‘ಎಕ್ಸ್’ ಖಾತೆಯಲ್ಲಿ ವಯನಾಡ್ ಪ್ರವಾಸದ ಬಗ್ಗೆ ಪೋಸ್ಟ್ ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಕಿಡಿ ಕಾರಿದೆ. ಕಾಂಗ್ರೆಸ್ ಸರ್ಕಾರದ ಆಡಳಿತ ವಯನಾಡ್ ಸೇವಾ ಕೇಂದ್ರದಂತಾಗಿದೆ ಎಂದು ಟೀಕಿಸಿದೆ.</p>.ವಯನಾಡ್ ಪುನರ್ವಸತಿ: ₹2,221.03 ಕೋಟಿ ಬಿಡುಗಡೆಗೆ ಪ್ರಧಾನಿಗೆ ಕೇರಳ ಸಿಎಂ ಮನವಿ.<p>ಕೆಎಸ್ಟಿಡಿಸಿ ಖಾತೆಯಲ್ಲಿ ಮಾಡಿರುವ ಪೋಸ್ಟ್ ಅನ್ನು ಉಲ್ಲೇಖಿಸಿ ರಾಜ್ಯ ಬಿಜೆಪಿ ತನ್ನ ‘ಎಕ್ಸ್’ ಖಾತೆಯಲ್ಲಿ ಹೀಗೆ ಬರೆದುಕೊಂಡಿದೆ.</p>.ವಯನಾಡ್: ಕಾಫಿ ಬೆಳೆಗಾರರ ಸಮಸ್ಯೆ ಆಲಿಸಿದ ಸೋನಿಯಾ, ಪ್ರಿಯಾಂಕಾ.<p>‘ನಮ್ಮ ಕೆಎಸ್ಟಿಡಿಸಿ ಇರುವುದು ಕರ್ನಾಟಕಕ್ಕೋ, ಕೇರಳಕ್ಕೋ ತಿಳಿಯುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಕೆ ಪಾಟೀಲ ಅವರಿಗೆ ನಮ್ಮ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಕಾಣಲಿಲ್ಲವೇ? ನಿಮ್ಮ ಪ್ರಿಯಾಂಕಾ ಗಾಂಧಿಯನ್ನು ಮೆಚ್ಚಿಸಲು ನಮ್ಮ ಕರುನಾಡನ್ನೇ ಕಡೆಗಣಿಸುತ್ತಿದ್ದೀರಾ?’ ಎಂದು ಪ್ರಶ್ನಿಸಿದೆ.</p><p>ವಯನಾಡಿನ ಜನರಿಗೆ ಮನೆ, ಆನೆ ದಾಳಿಯಿಂದ ಸತ್ತವರಿಗೆ ಪರಿಹಾರ, ಇಷ್ಟೆಲ್ಲಾ ಮಾಡಿದ ಮೇಲೆ ಈಗ ವಯನಾಡನ್ನೇ ಕರ್ನಾಟಕಕ್ಕೆ ಸೇರಿಸಲು ಹೇಳಿ ಎಂದು ಬಿಜೆಪಿ ಹೇಳಿದೆ.</p> .ವಯನಾಡ್: ಭೂಕುಸಿತ ಸಂತ್ರಸ್ತರಿಗಾಗಿ ಟೌನ್ಶಿಪ್ ನಿರ್ಮಾಣ ಕಾರ್ಯ ಶುರು.<p>ಮುಖ್ಯಮಂತ್ರಿಯೊಬ್ಬರು ವಯನಾಡ್ ಜಿಲ್ಲಾಧಿಕಾರಿ ಹಾಗೂ ನಿಧಿ ಸಂಗ್ರಹಕನಾಗಿ ವರ್ತಿಸುವುದನ್ನು ಕರ್ನಾಟಕ ಎಷ್ಟು ಸಹಿಸಿಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಆಶೋಕ ಪ್ರಶ್ನಿಸಿದ್ದಾರೆ.</p><p>ಕರ್ನಾಟಕ ಸ್ವಂತ ಪ್ರವಾಸೋದ್ಯಮ ನಿಗಮವನ್ನು ಪ್ರಿಯಾಂಕಾ ಗಾಂಧಿಯವರ ಕ್ಷೇತ್ರ ವಯನಾಡ್ನ ಪ್ರಚಾರಕ್ಕೆ ಬಳಸಿಕೊಂಡಿರಿ ಎಂದು ಕಿಡಿ ಕಾರಿದ್ದಾರೆ.</p>.ವಯನಾಡ್ ಭೂಕುಸಿತ;ಸಂತ್ರಸ್ತರ ಸಾಲ ಮನ್ನಾ ಮಾಡದೆ ದ್ರೋಹವೆಸಗಿದ ಕೇಂದ್ರ: ಪ್ರಿಯಾಂಕಾ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>