<p>ಬೈಟೂ ಕಾಫಿ ಟೇಬಲ್ಲು ಅದ್ಯಾಕೋ ವಿಚಾರಸಂಕಿರಣ ಆಗಿ ಮಾರ್ಪಟ್ಟಿತ್ತು.</p>.<p>‘ನಮ್ಮ ರಾಜ್ಯದ ಜನಸಂಖ್ಯೆ ಕಡಿಮೆಯಾಗಿ ಕೇಂದ್ರದ ಅನುದಾನ ಕಡಿತವಾಗಿದೆ. ಹೆಚ್ಚಿನ ಜನಸಂಖ್ಯೆಯ ರಾಜ್ಯಗಳ ಕಣ್ಣಿಗೆ ಬೆಣ್ಣೆ, ಕಡಿಮೆ<br>ಜನಸಂಖ್ಯೆಯ ರಾಜ್ಯಗಳ ಕಣ್ಣಿಗೆ ಸುಣ್ಣ ಎಂಬಂತೆ ಆಗಿದೆ. ಜನಸಂಖ್ಯೆ ನಿಯಂತ್ರಣ ಮಾಡಿದ್ದಕ್ಕೇ ನಮಗೆ ಹೊಡೆತ…’ ತಿಂಗಳೇಶನ ದಿಕ್ಸೂಚಿ ಮಾತಿನಿಂದ ಸಭೆಯಲ್ಲಿ ಚಿಂತೆ ಆವರಿಸಿತು.</p>.<p>‘ಅಂದ್ರೆ… ಹೆಚ್ಚಿನ ಅನುದಾನಕ್ಕೆ ಜನಸಂಖ್ಯೆ ಹೆಚ್ಚಿಸಿಕೊಳ್ಳಬೇಕು, ಜನಸಂಖ್ಯೆ ಹೆಚ್ಚಳಕ್ಕೆ ಶಿಕ್ಷಣದ ಪ್ರಮಾಣ ಕಡಿಮೆ ಮಾಡಬೇಕು’ ಬದ್ರಿ ಎಂದಿನಂತೆ ದಿಕ್ಕು ತಪ್ಪಿಸಿದ.</p>.<p>‘ಅದಕ್ಕೆಂದೇ ಕನ್ನಡ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ’ ಆಡಳಿತ ಪಕ್ಷದ ಅಂಜಿನಿಯ ಸಮರ್ಥನೆ.</p>.<p>‘ವೇದಿಕೆಯಲ್ಲಿ ಹಚ್ಚೇವು ಕನ್ನಡದ ದೀಪ… ಆದೇಶಗಳಲ್ಲಿ ಮುಚ್ಚೇವು ಕನ್ನಡದ ಶಾಲೆ…’ ಚನ್ನಬಸಣ್ಣನ ಬಾಯಲ್ಲಿ ವಿಷಾದಗೀತೆ.</p>.<p>‘ಇತ್ತೀಚೆಗೆ ಕನ್ನಡ ಓದುಗರ ಸಂಖ್ಯೆಯೂ ಕುಸಿಯುತ್ತಿದೆ. ಓದುಗರಿಗಿಂತ ಲೇಖಕರ ಸಂಖ್ಯೆಯೇ ಹೆಚ್ಚಾಗಿದೆಯಂತೆ, ಸಾಹಿತಿಗಳಿಗಿಂತ ಪ್ರಶಸ್ತಿಗಳೇ ಹೆಚ್ಚಾಗಿವೆಯಂತೆ…!’ ಸಾಹಿತಿ ಕೊಟ್ರೇಶಿಯನ್ನು ಕೆಣಕಿದ ರಾಜಣ್ಣ.</p>.<p>‘ಜನಗಣತಿಯಲ್ಲಿ ಓದುಗರ, ಲೇಖಕರ ಮತ್ತು ಪ್ರಶಸ್ತಿಗಳ ಗಣತಿಯೂ ಸೇರ್ಪಡೆಯಾಗಲಿ. ಅಲ್ಲಿಯವರೆಗೆ ಆಯೋಗದ ವರದಿಯ ಅಂಗೀಕಾರ ಬೇಡ’ ಯಾರೋ ಸಿದ್ದರಾಮಣ್ಣ ಸಂಪುಟದ ನೆರವಿಗೆ ಧಾವಿಸಿದರು!</p>.<p>‘ಕೆಲವರ್ಷ ಪುಸ್ತಕಗಳ ಪ್ರಕಟಣೆ ನಿಲ್ಲಿಸಬೇಕೆಂಬ ಸಲಹೆಯೂ ಕೇಳಿಬಂದಿದೆ’ ಮತ್ತೊಂದು ದನಿ.</p>.<p>‘ಪುಸ್ತಕಗಳ ಬದಲು ಸಾಹಿತಿಗಳು ಮಕ್ಕಳನ್ನು ಹೆತ್ತರೆ ಎಲ್ಲಾ ಸರಿಹೋಗಬಹುದು ಅಂತೀರಾ?’ ಕೊಟ್ರೇಶಿಯ ವ್ಯಂಗ್ಯವನ್ನು ಸಭೆ ಗಂಭೀರವಾಗಿಯೇ ಪರಿಗಣಿಸಿತು.</p>.<p>ವಿಚಾರ ‘ಸಂಕೀರ್ಣ’ ಆಗುವುದನ್ನು ತಪ್ಪಿಸಲು ತಿಂಗಳೇಶ, ‘ಅಷ್ಟೇ ಅಲ್ಲ, ‘ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗ’ ಘೋಷಣೆಯನ್ನು ‘ಕತೆಗೊಬ್ಬ ಮಗ, ಕವಿತೆಗೊಬ್ಬ ಮಗಳು, ಅನುದಾನಕ್ಕೆ ಹತ್ತು ಸಂತಾನ’ ಎಂದು ಬದಲಿಸೋಣ’ ಎಂದು ಮುಗಿಸಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೈಟೂ ಕಾಫಿ ಟೇಬಲ್ಲು ಅದ್ಯಾಕೋ ವಿಚಾರಸಂಕಿರಣ ಆಗಿ ಮಾರ್ಪಟ್ಟಿತ್ತು.</p>.<p>‘ನಮ್ಮ ರಾಜ್ಯದ ಜನಸಂಖ್ಯೆ ಕಡಿಮೆಯಾಗಿ ಕೇಂದ್ರದ ಅನುದಾನ ಕಡಿತವಾಗಿದೆ. ಹೆಚ್ಚಿನ ಜನಸಂಖ್ಯೆಯ ರಾಜ್ಯಗಳ ಕಣ್ಣಿಗೆ ಬೆಣ್ಣೆ, ಕಡಿಮೆ<br>ಜನಸಂಖ್ಯೆಯ ರಾಜ್ಯಗಳ ಕಣ್ಣಿಗೆ ಸುಣ್ಣ ಎಂಬಂತೆ ಆಗಿದೆ. ಜನಸಂಖ್ಯೆ ನಿಯಂತ್ರಣ ಮಾಡಿದ್ದಕ್ಕೇ ನಮಗೆ ಹೊಡೆತ…’ ತಿಂಗಳೇಶನ ದಿಕ್ಸೂಚಿ ಮಾತಿನಿಂದ ಸಭೆಯಲ್ಲಿ ಚಿಂತೆ ಆವರಿಸಿತು.</p>.<p>‘ಅಂದ್ರೆ… ಹೆಚ್ಚಿನ ಅನುದಾನಕ್ಕೆ ಜನಸಂಖ್ಯೆ ಹೆಚ್ಚಿಸಿಕೊಳ್ಳಬೇಕು, ಜನಸಂಖ್ಯೆ ಹೆಚ್ಚಳಕ್ಕೆ ಶಿಕ್ಷಣದ ಪ್ರಮಾಣ ಕಡಿಮೆ ಮಾಡಬೇಕು’ ಬದ್ರಿ ಎಂದಿನಂತೆ ದಿಕ್ಕು ತಪ್ಪಿಸಿದ.</p>.<p>‘ಅದಕ್ಕೆಂದೇ ಕನ್ನಡ ಶಾಲೆಗಳನ್ನು ಮುಚ್ಚಲು ಸರ್ಕಾರ ಮುಂದಾಗಿದೆ’ ಆಡಳಿತ ಪಕ್ಷದ ಅಂಜಿನಿಯ ಸಮರ್ಥನೆ.</p>.<p>‘ವೇದಿಕೆಯಲ್ಲಿ ಹಚ್ಚೇವು ಕನ್ನಡದ ದೀಪ… ಆದೇಶಗಳಲ್ಲಿ ಮುಚ್ಚೇವು ಕನ್ನಡದ ಶಾಲೆ…’ ಚನ್ನಬಸಣ್ಣನ ಬಾಯಲ್ಲಿ ವಿಷಾದಗೀತೆ.</p>.<p>‘ಇತ್ತೀಚೆಗೆ ಕನ್ನಡ ಓದುಗರ ಸಂಖ್ಯೆಯೂ ಕುಸಿಯುತ್ತಿದೆ. ಓದುಗರಿಗಿಂತ ಲೇಖಕರ ಸಂಖ್ಯೆಯೇ ಹೆಚ್ಚಾಗಿದೆಯಂತೆ, ಸಾಹಿತಿಗಳಿಗಿಂತ ಪ್ರಶಸ್ತಿಗಳೇ ಹೆಚ್ಚಾಗಿವೆಯಂತೆ…!’ ಸಾಹಿತಿ ಕೊಟ್ರೇಶಿಯನ್ನು ಕೆಣಕಿದ ರಾಜಣ್ಣ.</p>.<p>‘ಜನಗಣತಿಯಲ್ಲಿ ಓದುಗರ, ಲೇಖಕರ ಮತ್ತು ಪ್ರಶಸ್ತಿಗಳ ಗಣತಿಯೂ ಸೇರ್ಪಡೆಯಾಗಲಿ. ಅಲ್ಲಿಯವರೆಗೆ ಆಯೋಗದ ವರದಿಯ ಅಂಗೀಕಾರ ಬೇಡ’ ಯಾರೋ ಸಿದ್ದರಾಮಣ್ಣ ಸಂಪುಟದ ನೆರವಿಗೆ ಧಾವಿಸಿದರು!</p>.<p>‘ಕೆಲವರ್ಷ ಪುಸ್ತಕಗಳ ಪ್ರಕಟಣೆ ನಿಲ್ಲಿಸಬೇಕೆಂಬ ಸಲಹೆಯೂ ಕೇಳಿಬಂದಿದೆ’ ಮತ್ತೊಂದು ದನಿ.</p>.<p>‘ಪುಸ್ತಕಗಳ ಬದಲು ಸಾಹಿತಿಗಳು ಮಕ್ಕಳನ್ನು ಹೆತ್ತರೆ ಎಲ್ಲಾ ಸರಿಹೋಗಬಹುದು ಅಂತೀರಾ?’ ಕೊಟ್ರೇಶಿಯ ವ್ಯಂಗ್ಯವನ್ನು ಸಭೆ ಗಂಭೀರವಾಗಿಯೇ ಪರಿಗಣಿಸಿತು.</p>.<p>ವಿಚಾರ ‘ಸಂಕೀರ್ಣ’ ಆಗುವುದನ್ನು ತಪ್ಪಿಸಲು ತಿಂಗಳೇಶ, ‘ಅಷ್ಟೇ ಅಲ್ಲ, ‘ಆರತಿಗೊಬ್ಬ ಮಗಳು ಕೀರ್ತಿಗೊಬ್ಬ ಮಗ’ ಘೋಷಣೆಯನ್ನು ‘ಕತೆಗೊಬ್ಬ ಮಗ, ಕವಿತೆಗೊಬ್ಬ ಮಗಳು, ಅನುದಾನಕ್ಕೆ ಹತ್ತು ಸಂತಾನ’ ಎಂದು ಬದಲಿಸೋಣ’ ಎಂದು ಮುಗಿಸಿದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>