<p><strong>ಹುಬ್ಬಳ್ಳಿ:</strong> ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು–ಕಾಶ್ಮೀರ ತಂಡವು ಶುಭಂ ಪುಂಡಿರ್ ಅವರ ಅಜೇಯ ಶತಕದ ನೆರವಿನಿಂದ ಮೊದಲ ದಿನ ಮೇಲುಗೈ ಸಾಧಿಸಿದೆ.</p><p>ಹುಬ್ಬಳ್ಳಿಯ ಕೆಎಸ್ಸಿಎ ಮೈದಾನವು ಫೈನಲ್ ಪಂದ್ಯದ ಮೊದಲ ದಿನ ಬ್ಯಾಟರ್ಗಳಿಗೆ ಸಂಪೂರ್ಣ ನೆರವು ನೀಡಿತು. ಇದರ ನೆರವು ಪಡೆದ ಜಮ್ಮು–ಕಾಶ್ಮೀರ ತಂಡವು 87 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದೆ.</p><p>ಇನಿಂಗ್ಸ್ನ ಆರಂಭದಲ್ಲಿ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರು ಆರಂಭಿಕ ಬ್ಯಾಟರ್ ಖಮ್ರಾನ್ ಇಕ್ಬಾಲ್ (6 ರನ್) ಅವರ ವಿಕೆಟ್ ಪಡೆದರು. ಒಂದನೇ ವಿಕೆಟ್ಗೆ ಜತೆಯಾದ ಯಾವರ್ ಹಸನ್ (88 ರನ್: 150 ಎಸೆತ) ಹಾಗೂ ಶುಭಂ ಪುಂಡಿರ್ (ಅಜೇಯ 117 ರನ್: 221 ಎಸೆತ) 139 ರನ್ಗಳ ಜತೆಯಾಟವಾಡುವ ಮೂಲಕ ತವರಿನ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. </p><p>ಅನುಭವಿ ಆಟಗಾರ ಅಬ್ದುಲ್ ಸಮದ್ (ಅಜೇಯ 52 ರನ್) ಹಾಗೂ ಶತಕ ಗಳಿಸಿರುವ ಶುಭಂ ಪುಂಡಿರ್ ಅವರು ಕ್ರೀಸ್ನಲ್ಲಿದ್ದು, ಎರಡನೇ ದಿನವೂ ರನ್ ಹೊಳೆ ಹರಿಸುವ ನಿರೀಕ್ಷೆಯಲ್ಲಿದ್ದಾರೆ. </p><p>ಕರ್ನಾಟಕ ತಂಡದ ಪರ ಪ್ರಸಿದ್ಧ ಕೃಷ್ಣ ಅವರು 2 ವಿಕೆಟ್ ಪಡೆದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು–ಕಾಶ್ಮೀರ ತಂಡವು ಶುಭಂ ಪುಂಡಿರ್ ಅವರ ಅಜೇಯ ಶತಕದ ನೆರವಿನಿಂದ ಮೊದಲ ದಿನ ಮೇಲುಗೈ ಸಾಧಿಸಿದೆ.</p><p>ಹುಬ್ಬಳ್ಳಿಯ ಕೆಎಸ್ಸಿಎ ಮೈದಾನವು ಫೈನಲ್ ಪಂದ್ಯದ ಮೊದಲ ದಿನ ಬ್ಯಾಟರ್ಗಳಿಗೆ ಸಂಪೂರ್ಣ ನೆರವು ನೀಡಿತು. ಇದರ ನೆರವು ಪಡೆದ ಜಮ್ಮು–ಕಾಶ್ಮೀರ ತಂಡವು 87 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿದೆ.</p><p>ಇನಿಂಗ್ಸ್ನ ಆರಂಭದಲ್ಲಿ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಅವರು ಆರಂಭಿಕ ಬ್ಯಾಟರ್ ಖಮ್ರಾನ್ ಇಕ್ಬಾಲ್ (6 ರನ್) ಅವರ ವಿಕೆಟ್ ಪಡೆದರು. ಒಂದನೇ ವಿಕೆಟ್ಗೆ ಜತೆಯಾದ ಯಾವರ್ ಹಸನ್ (88 ರನ್: 150 ಎಸೆತ) ಹಾಗೂ ಶುಭಂ ಪುಂಡಿರ್ (ಅಜೇಯ 117 ರನ್: 221 ಎಸೆತ) 139 ರನ್ಗಳ ಜತೆಯಾಟವಾಡುವ ಮೂಲಕ ತವರಿನ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. </p><p>ಅನುಭವಿ ಆಟಗಾರ ಅಬ್ದುಲ್ ಸಮದ್ (ಅಜೇಯ 52 ರನ್) ಹಾಗೂ ಶತಕ ಗಳಿಸಿರುವ ಶುಭಂ ಪುಂಡಿರ್ ಅವರು ಕ್ರೀಸ್ನಲ್ಲಿದ್ದು, ಎರಡನೇ ದಿನವೂ ರನ್ ಹೊಳೆ ಹರಿಸುವ ನಿರೀಕ್ಷೆಯಲ್ಲಿದ್ದಾರೆ. </p><p>ಕರ್ನಾಟಕ ತಂಡದ ಪರ ಪ್ರಸಿದ್ಧ ಕೃಷ್ಣ ಅವರು 2 ವಿಕೆಟ್ ಪಡೆದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>