ಭರೂಚ್: ಸರ್ಕಾರದ ಯೋಜನೆಗಳು ಶೇ 100ರಷ್ಟು ಗುರಿ ಸಾಧನೆಯು ತಾರತಮ್ಯ ಮತ್ತು ರಾಜಕೀಯ ತುಷ್ಟೀಕರಣವನ್ನು ಕೊನೆಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ಗುಜರಾತ್ನ ಭರೂಚ್ ನಗರದಲ್ಲಿ ಹಮ್ಮಿಕೊಂಡಿದ್ದ 'ಉತ್ಕರ್ಷ ಸಮರೋಹ್' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಮಾಹಿತಿ ಕೊರತೆಯಿಂದಾಗಿ ಸರ್ಕಾರದ ಯೋಜನೆಗಳು ಕೇವಲ ಕಾಗದದ ಮೇಲೆ ಉಳಿದಿವೆ ಅಥವಾ ಅರ್ಹರಲ್ಲದ ಫಲಾನುಭವಿಗಳ ಪಾಲಾಗುತ್ತಿವೆ.
ಪ್ರತಿ ಫಲಾನುಭವಿಗಳಿಗೂ ಸರ್ಕಾರದ ಯೋಜನೆ ತಲುಪಿಸುವುದು ದುಸ್ತರ. ಆದಾಗ್ಯೂ, ಜನರ ಸೇವೆಗೆ ಇದೊಂದೇ ಮಾರ್ಗವಾಗಿದೆ. ಸರ್ಕಾರದ ಯೋಜನೆಗಳು ಪ್ರತಿಶತ 100ರ ಗುರಿ ತಲುಪಿದಾಗ ತುಷ್ಟೀಕರಣ ರಾಜಕೀಯದಲ್ಲಿ ತೊಡಗಲು ಅವಕಾಶವೇ ಇರುವುದಿಲ್ಲ ಎಂದು ಹೇಳಿದರು.