ತಿರುವನಂತಪುರ:ಕ್ಷುಲ್ಲಕ ಕಾರಣದಿಂದಾಗಿ ಕೇರಳದಲ್ಲಿ ಆರು ತಿಂಗಳಲ್ಲಿ 140 ಹದಿಹರೆಯದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವರಾಜ್ಯ ಮಾನವ ಹಕ್ಕುಗಳ ಆಯೋಗ (ಎಸ್ಎಚ್ಆರ್ಸಿ) ಆತ್ಮಹತ್ಯಾ ನಿಯಂತ್ರಣ ಕ್ರಮಗಳಪರಿಣಾಮಕಾರಿತ್ವದ ಕುರಿತು ವರದಿ ಸಲ್ಲಿಸುವಂತೆಸಾಮಾಜಿಕ ನ್ಯಾಯ ಇಲಾಖೆಗೆ ನಿರ್ದೇಶನ ನೀಡಿದೆ.
‘ದೀಶಾ’ ಸ್ವಯಂ ಸೇವಾ ಸಂಸ್ಥೆ ಈ ಅಧ್ಯಯನ ನಡೆಸಿದ್ದು, ‘ಕೌಟುಂಬಿಕ ಸಮಸ್ಯೆ, ಪ್ರೇಮ ವೈಫಲ್ಯ, ಪರೀಕ್ಷೆಗಳಲ್ಲಿ ಅನುತ್ತೀರ್ಣ, ಮೊಬೈಲ್ ಫೋನ್ ಮತ್ತು ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದಂತೆ ಮನೆಯವರ ಜೊತೆಗಿನ ಜಗಳವೇ ಯುವಜನಾಂಗ ಆತ್ಮಹತ್ಯೆಗೆ ಮುಂದಾಗಲು ಕಾರಣವಾಗುತ್ತಿದೆ’ ಎಂದು ತಿಳಿಸಿದೆ.
‘ಕಳೆದ ಜನರಿಯಿಂದ ಜೂನ್ ತಿಂಗಳವರೆಗೆ13ರಿಂದ 18 ವರ್ಷದೊಳಗಿನ 140 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ’ ಎಂದು ಎನ್ಜಿಒ ತಿಳಿಸಿದೆ.