ಶನಿವಾರ ಮುಂಜಾನೆ 4 ಗಂಟೆಗೆ ಕಾರ್ಖಾನೆಗೆ ನುಗ್ಗಿದ್ದ ಇಜಾರ್ ಮೊಬೈಲ್ ಫೋನ್ ಕಳವಿಗೆ ಯತ್ನಿಸಿದ್ದು, ಈ ವೇಳೆ ಸಿಕ್ಕಿ ಬಿದ್ದಿದ್ದಾನೆ. ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಳ್ಸಿ ತಿಳಿಸಿದ್ದಾರೆ.
ಬಳಿಕ ಇಜಾರ್ ಅವರನ್ನು ಕಾರ್ಖಾನೆಯ ಹೊರಗಡೆ ಎಳೆದೊಯ್ದ ಆರೋಪಿ ಜ್ಞಾನಿ ಹಾಗೂ ಇತರರು, ಆತನ ಮೇಲೆ ಪ್ಲಾಸ್ಟಿಕ್ ಪೈಪ್, ಬೆಲ್ಟ್ಗಳಿಂದ ನಿರ್ದಯವಾಗಿ ಹಲ್ಲೆ ನಡೆಸಿದ್ದಾರೆ. ಇಜಾರ್ ಕೂದಲನ್ನು ಕತ್ತರಿಸುವ ಮೂಲಕ ಚಿತ್ರ ಹಿಂಸೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.